ಗುಣಾತ್ಮಕ ಶಿಕ್ಷಣದಿಂದ ವಿದ್ಯಾರ್ಥಿಗಳ ಬದುಕು ಉಜ್ವಲ

KannadaprabhaNewsNetwork |  
Published : Nov 25, 2024, 01:01 AM IST
23ಎಚ್ಎಸ್ಎನ್14 : ಗುರುವಂದನಾ, ಕನ್ನಡ ರಾಜ್ಯೋತ್ಸವ, ಸಹಪಠ್ಯ ಚಟುವಟಿಕೆಗಳ  ಕಾರ್ಯಕ್ರಮವನ್ನು ಉದ್ಘಾಟಿಸಿ  ಕ್ಷೇತ್ರದ ಶಾಸಕ ಹೆಚ್.ಕೆ.ಸುರೇಶ್, ಪ್ರಾಂಶುಪಾಲ ಡಾ. ಜಿ.ಡಿ ನಾರಾಯಣ್, ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಶ್‌ಗೌಡ ಹಾಜರಿದ್ದರು, | Kannada Prabha

ಸಾರಾಂಶ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡಿದಾಗ ಮಾತ್ರ ವಿದ್ಯಾರ್ಥಿಗಳ ಬದುಕು ಉಜ್ವಲವಾಗುತ್ತದೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್ ತಿಳಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮ ತಮ್ಮ ತಂದೆ ತಾಯಿಗಳ ಶ್ರಮ ಮತ್ತು ಜವಾಬ್ದಾರಿಗಳನ್ನ ಅರಿತು ವಿದ್ಯಾವಂತರಾದರೆ ಬುದ್ಧಿವಂತರಾದರೆ ಅವರಿಗಿಂತ ಖುಷಿಪಡುವವರು ಮತ್ತೊಬ್ಬ ಇರುವುದಿಲ್ಲ. ಹೀಗಾಗಿ ಸಮಯ ಪಾಲನೆ ಪರಿಶ್ರಮ ಶಿಸ್ತುಬದ್ಧ ಕಲಿಕೆಗೆ ಹೆಚ್ಚು ಒತ್ತುಕೊಟ್ಟು ಶಿಕ್ಷಣವನ್ನು ಪಡೆದು ಬದುಕನ್ನು ಕಟ್ಟಿಕೊಳ್ಳಬೇಕೆಂದು ಹೇಳಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿರುವುದರಿಂದ ಪದವಿ ಶಿಕ್ಷಣ ಮೂಲ ಅಡಿಪಾಯವಾಗಿರುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಹಳೇಬೀಡು

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡಿದಾಗ ಮಾತ್ರ ವಿದ್ಯಾರ್ಥಿಗಳ ಬದುಕು ಉಜ್ವಲವಾಗುತ್ತದೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಕೆ.ಸುರೇಶ್ ತಿಳಿಸಿದ್ದಾರೆ.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಗುರುವಂದನಾ, ಕನ್ನಡ ರಾಜ್ಯೋತ್ಸವ, ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಹಾಗೂ ಸಹಪಠ್ಯ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತ, ಗ್ರಾಮೀಣ ಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಸರ್ಕಾರ ಪ್ರಾರಂಭಿಸಿರುವ ಉದ್ದೇಶ ಉತ್ತಮ ಶಿಕ್ಷಣವನ್ನು ಪಡೆದು ಉನ್ನತ ಉದ್ಯೋಗಗಳನ್ನ ಗಳಿಸಿ ಭವಿಷ್ಯ ರೂಪಿಸಿಕೊಳ್ಳುವ ಉದ್ದೇಶದಿಂದ ತೆರೆಯಲಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ತಂದೆ ತಾಯಿಗಳ ಶ್ರಮ ಮತ್ತು ಜವಾಬ್ದಾರಿಗಳನ್ನ ಅರಿತು ವಿದ್ಯಾವಂತರಾದರೆ ಬುದ್ಧಿವಂತರಾದರೆ ಅವರಿಗಿಂತ ಖುಷಿಪಡುವವರು ಮತ್ತೊಬ್ಬ ಇರುವುದಿಲ್ಲ. ಹೀಗಾಗಿ ಸಮಯ ಪಾಲನೆ ಪರಿಶ್ರಮ ಶಿಸ್ತುಬದ್ಧ ಕಲಿಕೆಗೆ ಹೆಚ್ಚು ಒತ್ತುಕೊಟ್ಟು ಶಿಕ್ಷಣವನ್ನು ಪಡೆದು ಬದುಕನ್ನು ಕಟ್ಟಿಕೊಳ್ಳಬೇಕೆಂದು ಹೇಳಿದರು. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿರುವುದರಿಂದ ಪದವಿ ಶಿಕ್ಷಣ ಮೂಲ ಅಡಿಪಾಯವಾಗಿರುತ್ತದೆ. ಸರ್ಕಾರಿ ಅಥವಾ ಖಾಸಗಿ ಉದ್ಯಮಗಳಲ್ಲಿಯೂ ಕೂಡ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ಪದವಿ ಶಿಕ್ಷಣವೇ ಮುಖ್ಯ ಆಧಾರವಾಗಿರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಪಟ್ಟು ಕಲಿತು ವಿದ್ಯಾವಂತರು ಆಗುವುದರ ಜೊತೆಗೆ ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

೧ ಕೋಟಿ ವೆಚ್ಚದಲ್ಲಿ ಆಡಿಟೋರಿಯಂ: ಹಳೆಬೀಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ವಿದ್ಯಾರ್ಥಿಗಳ ಕಲಿಕಾ ಹಿತದೃಷ್ಟಿಯಿಂದ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದ್ದು, ಆ ನಿಟ್ಟಿನಲ್ಲಿ ಸದ್ಯದಲ್ಲಿಯೇ ಆಡಿಟೋರಿಯಂ ವ್ಯವಸ್ಥೆಯನ್ನು ಮಾಡಿಕೊಳ್ಳಲಿದ್ದು ಅದನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.

ಹೊಯ್ಸಳ ನಾಡಿನಲ್ಲಿ ಕ್ರೀಡಾಂಗಣ ವ್ಯವಸ್ಥೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಪ್ರೋತ್ಸಾಹಕ್ಕಾಗಿ ಬೇಲೂರಿನಲ್ಲಿ ಸುಮಾರು ನಾಲ್ಕು ಕೋಟಿಗಳು ವೆಚ್ಚದಲ್ಲಿ ಸುಸಜ್ಜಿತವಾದಂತಹ ಶಾಂತಲಾ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದ್ದು ಕಾಮಗಾರಿ ನಡೆಯುತ್ತಿದೆ. ಅದೇ ರೀತಿ ಹಳೇಬೀಡಿನಲ್ಲಿ ಹೊಯ್ಸಳ ಕ್ರೀಡಾಂಗಣವನ್ನು ಮುಂದಿನ ದಿನಗಳಲ್ಲಿ ಮಾಡಿಕೊಡಲು ಈಗಾಗಲೇ ಪ್ರದೇಶಗಳನ್ನು ನಿರ್ಮಿಸಿದ್ದು ಶೀಘ್ರದಲ್ಲಿ ಅದನ್ನ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜನ ಪ್ರಾಂಶುಪಾಲರಾದ ಡಾ. ಜಿ.ಡಿ ನಾರಾಯಣ್ ಮಾತನಾಡಿ, ಕಾಲೇಜು ಶಿಕ್ಷಣ ವ್ಯಕ್ತಿ ವಿಕಸನಕ್ಕೆ ಬೇಕಾದಂತಹ ಎಲ್ಲ ರೀತಿಯಾದಂತಹ ಪರಿಕರೆಗಳನ್ನ ಒದಗಿಸಿಕೊಡುತ್ತದೆ. ಹಳೇಬೀಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉತ್ತಮ ಗ್ರಂಥಾಲಯ, ನೂತನ ವಿನ್ಯಾಸ ಕಟ್ಟಡ ಒಳಗೊಂಡಿದ್ದು, ವಿದ್ಯಾರ್ಥಿಗಳಿಗೆ ಬೇಕಾದಂತಹ ಎಲ್ಲಾ ಕಲಿಕಾ ಸೌಲಭ್ಯಗಳನ್ನು ಒಳಗೊಂಡಿದ್ದು ಉತ್ತಮ ಪ್ರಾಧ್ಯಾಪಕ ವರ್ಗದವರನ್ನು ಹೊಂದಿರುವುದರಿಂದ ಫಲಿತಾಂಶದಲ್ಲಿಯೂ ಕೂಡ ಶ್ರೇಷ್ಠತೆ ಹೊಂದಿರುವುದು ನಮ್ಮ ಹೆಗ್ಗಳಿಕೆಯಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸುಮಾರು ಏಳು ವರ್ಷಗಳ ಕಾಲ ಹಳೇಬೀಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಅಧ್ಯಾಪರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ ವಸಂತ್ ಕುಮಾರ್ ವರ್ಗಾವಣೆಗೊಂಡಿದ್ದು ಅವರನ್ನು ಹಾಗೂ ವಿ.ಕೆ. ರೇಖಾರನ್ನು ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ಕನ್ನಡ ಪ್ರಾಂಶುಪಾಲರಾದ ಡಾ. ಜಿ.ಡಿ ನಾರಾಯಣ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲೇಶ್‌ಗೌಡ, ಸಮಿತಿ ಕಾರ್ಯಅಧ್ಯಕ್ಷ ಚೇತನ್, ನಿವೇಶನ ದಾನಿಗಳಾದ ಪ್ರೇಮಣ್ಣ, ತೀರ್ಥ ಕುಮಾರ್, ಸಿಡಿಸಿ ಸದಸ್ಯರು, ಉಪನ್ಯಾಸಕರಾದ ಶ್ರೀನಿವಾಸ್, ಸಂತೋಷ್, ಸೃಜನ್, ಮಹೇಶ್, ಹರೀಶ್, ಜಫರ್‌ ಉಲ್ಲಾ ನೂರ್‌, ಆಯುಷಾ ಮಿಲನ, ದೀಪ್ತಿ, ಕಲಾವತಿ, ಎಂ.ಸಿ.ಕುಮಾರ್, ಡಿಂಪಲ್ ಕುಮಾರ್‌, ನಂದು ಕುಮಾರ್, ದಿವಾಕರ್, ಮುಂತಾದವರು ಹಾಜರಿದ್ದರು.

PREV

Recommended Stories

ಮಗುವಿಗೆ ಗಂಟೆಯೊಳಗಾಗಿ ತಾಯಿಯ ಎದೆ ಹಾಲು ನೀಡಿ
ಸರ್ಕಾರಿ ಶಾಲೆಗಳ ಉಳಿವು, ಪರಿಸರ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್​ ಮೂಲಕ ರಾಜ್ಯ ಪರ್ಯಟನೆ