ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸರಸ್ವತಿಪುರಂನ ಎನ್.ಎಸ್.ಎಸ್. ಭವನದಲ್ಲಿ ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಬುಧವಾರ ಆಯೋಜಿಸಿದ್ದ ಎನ್.ಎಸ್.ಎಸ್ದಿನಾಚರಣೆ ಹಾಗೂ 2023- 24, 2024- 25ನೇ ಸಾಲಿನ ಎನ್.ಎಸ್.ಎಸ್. ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಜ್ಞಾನ ಎಂಬುದು ಮುಖ್ಯ ಸಾಧನವಾಗಿದ್ದು, ಮುಖ್ಯ ಸಾಧನವಾಗಿದ್ದು, ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು. ಪ್ರತಿಯೊಂದು ವಿಷಯದಲ್ಲೂ ಪರಿಣಿತರಾಗಬೇಕು. ಇವುಗಳೊಂದಿಗೆ ಕೌಶಲವನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಸಾಧನೆ ಸಾಧ್ಯವಾಗುತ್ತದೆ ಎಂದರು.ವಿದ್ಯಾರ್ಥಿಗಳು ಕಾಲೇಜಿನಲ್ಲಿ ಎನ್.ಎಸ್.ಎಸ್ಗೆ ಸೇರಿವುದರಿಂದ ಎಲ್ಲರನ್ನು ಒಳಗೊಂಡು ಕಾರ್ಯಚಟುವಟಿಕೆಯಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ವಿವಿ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಡೆಯಬೇಕು ಎಂದು ಉತ್ತೇಜಿಸಿದರು.
ಉತ್ತಮ ಕಾರ್ಯಾಕ್ರಮಾಧಿಕಾರಿ ಪ್ರಶಸ್ತಿಯನ್ನು ಎಚ್.ಡಿ. ಕೋಟೆಯ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಎಂ.ಆರ್. ರಾಮಚಂದ್ರ, ರತ್ನಾಪುರಿಯ ವಿ.ಎಸ್.ಎಸ್. ಪ್ರಥಮ ದರ್ಜೆ ಕಾಲೇಜಿನ ಸುಧಾಕರ, ಟೆರೀಷಿಯನ್ಕಾಲೇಜಿನ ಬಿ. ರೇಖಾ ಪಡೆದುಕೊಂಡರೆ, ಉತ್ತಮ ಸ್ವಯಂ ಸೇವಕ ಪ್ರಶಸ್ತಿಯನ್ನು ಹುಣಸೂರಿನ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಿ. ತೇಜಸ್, ಮಹಾರಾಜ ಕಾಲೇಜಿನ ಯಶಸ್ಕೆ. ರಾಜ್ಪಡೆದುಕೊಂಡರು. ಉತ್ತಮ ಸ್ವಯಂ ಸೇವಕಿ ಪ್ರಶಸ್ತಿಯನ್ನು ಶೇಷಾದ್ರಿಪುರಂ ಪದವಿ ಕಾಲೇಜಿನ ಲತಾ ಸಿಂಗ್ಪಡೆದರು.
2024- 25ನೇ ಸಾಲಿನ ವಿವಿ ಮಟ್ಟದ ಪ್ರಶಸ್ತಿಯ ಉತ್ತಮ ಘಟಕ ಬಹುಮಾನವನ್ನು ನಗರದ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜು, ಮಹಾರಾಜ ಕಾಲೇಜು ಘಟಕ 1 ಮತ್ತು ಮಹಾರಾಜ ಕಾಲೇಜು ಘಟಕ 2 ಪ್ರಶಸ್ತಿ ಪಡೆದವು.
ಉತ್ತಮ ಸ್ವಯಂ ಸೇವಕರು, ಸ್ವಯಂ ಸೇವಕಿಯರು ಪ್ರಶಸ್ತಿಯನ್ನು ಮಹಾರಾಜ ಕಾಲೇಜಿನ ಎಂ. ಭಾರ್ಗವ್ಮತತ್ು ಎಂಐಟಿ ಪ್ರಥಮ ದರ್ಜೆ ಕಾಲೇಜಿನ ಪಿ.ಎನ್. ಸೋಹಾನ್, ಉತ್ತಮ ಸ್ವಯಂ ಸೇವಕಿ ಪ್ರಶಸ್ತಿಯನ್ನು ಕಾವೇರಿ ಪ್ರಥಮ ದರ್ಜೆ ಆಕಲೇಜಿನ ಭಾಗ್ಯಲಕ್ಷ್ಮೀ ಮತ್ತು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಎಸ್. ಲೇಖನ ಅರಸು ಪಡೆದುಕೊಂಡರು.
ವಿಶ್ರಾಂತ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಬಿ.ಕೆ. ಶಿವಣ್ಣ, ಪ್ರೊ.ಎಂ. ರುದ್ರಯ್ಯ, ಪ್ರೊ.ಎಂ.ಬಿ. ಸುರೇಶ ಇದ್ದರು.