- ಸಂತೆಬೆನ್ನೂರಲ್ಲಿ ಅಂಬೇಡ್ಕರ್ ಮಹಾಪರಿನಿರ್ವಾಣ ಕಾರ್ಯಕ್ರಮ- - - ಚನ್ನಗಿರಿ: ಇಂದಿನ ವಿದ್ಯಾರ್ಥಿಗಳಿಗೆ ಮತ್ತು ಯುವಸಮೂಹಕ್ಕೆ ಸಮಾನತೆ ಹರಿಕಾರರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಗಳನ್ನು ಅರಿಯುವ ಅಗತ್ಯ ಹಿಂದೆಂದಿಗಿಂತ ಪ್ರಸ್ತುತ ಮುಖ್ಯವಾಗಿದೆ ಎಂದು ಪ್ರಾಚಾರ್ಯ ಗಿರಿಸ್ವಾಮಿ ಹೇಳಿದರು.
ಈ ದೇಶದ ಭವಿಷ್ಯ ಮತ್ತು ಭರವಸೆಗಳು ಯುವಜನತೆ ಸಾಧನೆ ಅವಲಂಭಿಸಿದೆ. ಅವರ ಚಿಂತನೆಗಳು, ಪ್ರಯೋಗಗಳು, ಹೋರಾಟಗಳು, ಮಹತ್ವ ಪಡೆದು ಸಮಸಮಾಜ ಮತ್ತು ಸಹಬಾಳ್ವೆ ವಾತಾವರಣ ನಿರ್ಮಾಣಕ್ಕೆ ಪೂರಕವಾಗಿವೆ. ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ತತ್ವ ಆದರ್ಶ, ಚಿಂತನೆಗಳನ್ನು ಪ್ರತಿಯೊಬ್ಬರು ಆಳವಡಿಸಿಕೊಂಡಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಬ್ ಇನ್ಸ್ಪೆಕ್ಟರ್ ಜಿ.ಜಗದೀಶ್, ಯುವ ಸಾಹಿತಿ ಹುಚ್ಚಂಗಿ ಪ್ರಸಾದ್, ಜಿಲ್ಲಾ ಸಂಚಾಲಕ ಲಕ್ಷ್ಮಣ್ ರಾಮವತ್, ಪ್ರಭು, ಪ್ರಶಾಂತ್, ಮಾದಿಗ ಸಮಾಜದ ಅಧ್ಯಕ್ಷ ನಾಗರಾಜಪ್ಪ, ಗ್ರಾಪಂ ಉಪಾಧ್ಯಕ್ಷೆ ಮೀನಾಕ್ಷಮ್ಮ, ಕರಿಯಪ್ಪ, ವಿ.ಎಸ್.ಎಸ್. ಸಂಘದ ಕೃಷ್ಣಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್, ಪಿಡಿಒ ಮಾರುತಿ, ರಘು, ಗೊವಿಂದಪ್ಪ, ದೇವರಾಜ್, ಅಭಿ, ಮಂಜು, ಶಿಕ್ಷಕ ಮಂಜುನಾಥ್ ಹಾಜರಿದ್ದರು.- - - -6ಕೆಸಿಎನ್ಜಿ1.ಜೆಪಿಜಿ: