ಕನ್ನಡಪ್ರಭ ವಾರ್ತೆ ಸೊರಬ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ೪ ಜನ ಟಾಪರ್ ವಿದ್ಯಾರ್ಥಿಗಳನ್ನು ವೇದಿಕೆಯ ವತಿಯಿಂದ ಸನ್ಮಾನಿಸಿ ಗೌರವಿಸಿ ಮಾತನಾಡಿದರು.
ರಾಜ್ಯಾದಾದ್ಯಂತ ವಿದ್ಯಾರ್ಥಿನಿಯರು ಹೆಚ್ಚು ತೇರ್ಗಡೆಗೊಂಡಿದ್ದು ಈ ದಿಶೆಯಲ್ಲಿ ಸೊರಬ ತಾಲೂಕಿನ ಭಾಗ್ಯಶ್ರೀ ಕೃಷ್ಣಮೂರ್ತಿ ಶೇಟ್ ಆನವಟ್ಟಿ, ೫೭೭ (ವಿಜ್ಞಾನ), ಸಂಗೀತ ಬಿ ಆನವಟ್ಟಿ ೫೭೪ (ವಾಣಿಜ್ಯ) ಮತ್ತು ಕಲಾವಿಭಾಗದಲ್ಲಿ ಪ್ರಿಯಾಂಕ ಎಸ್. ಆನವಟ್ಟಿ ೫೭೩, ಜ್ಯೋತಿ ಎಸ್. ನಿಸರಾಣಿ ೫೭೩ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದು, ಪೋಷಕರಿಗೆ ಶಿಕ್ಷಕರುಗಳಿಗೆ ಒಟ್ಟಾರೆ ತಾಲೂಕಿನ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಅಭಿನಂದಿಸಿದರು.ಕಳೆದ ೫ ವರ್ಷಗಳಿಂದ ವೇದಿಕೆ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದವರನ್ನು ತಮ್ಮ ವೇದಿಕೆಯ ವತಿಯಿಂದ ಸನ್ಮಾನಿಸುತ್ತಾ ಬಂದಿದ್ದೇವೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯ ಸಾಧನೆ ಮೆಚ್ಚುವಂತಾಗಿದೆ. ಆತ್ಮ ವಿಶ್ವಾಸದಿಂದ ಮುನ್ನುಗಿದರೆ ಯಶಸ್ಸು ಕಟಿಟ್ಟಬುತ್ತಿ ಎಂಬುದನ್ನು ಇವರು ತೋರಿಸಿದ್ದಾರೆ ಎಂದರು.
ಶಂಕರ ಶೇಟ್ ಕಳೆದ ೫ ವರ್ಷಗಳಿಂದ ಪ್ರತಿಭಾವಂತರಿಗೆ ಸನ್ಮಾನಿಸಿ ಪ್ರೋತ್ರಾಹಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ಒಂದು ಸುವರ್ಣ ಅವಕಾಶ. ಜೀವನದಲ್ಲಿ ಸಾಧನೆ ಮಾಡಲು ಭಯವಿರಬಾರದು. ಸಾಧನೆ ಸಂಭ್ರಮದ ಖುಷಿ ಮುಂದುವರಿಸಿಕೊಂಡು ಹೋಗಿ ಎಂದರು.