ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಕನ್ನಡಪ್ರಭ ವಾರ್ತೆ, ಸುರಪುರ
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ನಿವೃತ್ತ ಉಪ ಲೋಕಾಯುಕ್ತ ಎಸ್ಪಿ ಸಿ.ಎನ್. ಭಂಡಾರೆ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮೊದಲ ಮೆಟ್ಟಿಲಾಗಿದೆ. ಸಮಯ ವ್ಯರ್ಥ ಮಾಡದೇ ನಿರಂತರ ಅಧ್ಯಯನದಿಂದ ಯಶಸ್ಸು ಪಡೆಯಲು ಸಾಧ್ಯ ಎಂದರು.
ಈ ವೇಳೆ ರುಕ್ಮಾಪುರ ಗ್ರಾಮದ ಹಿರಿಯ ಪತ್ರಕರ್ತ ಸುಭಾಸ ಬಣಗಾರ ಹಾಗೂ ಪತ್ನಿ ಶಾರದಾ ಅವರನ್ನು ಸನ್ಮಾನಿಸಲಾಯಿತು. ಸುರಪುರದ ಐತಿಹಾಸಿಕ ದೇಶಭಕ್ತರು ಹಾಗೂ ದೇಶ ದ್ರೋಹಿಗಳು ಭಾಷಾಂತರ ಕೃತಿ ರಚಿಸಿದ ರಂಗನಗೌಡ ಅಂಜಳ ಅವರನ್ನು ಸತ್ಕರಿಸಲಾಯಿತು. ಈ ವೇಳೆ ಸಂಗಣ್ಣ ಶಿರೇಗೋಳ, ಶಿಕ್ಷಕಿ ಪ್ರಭಾವತಿ, ಬಸಪ್ಪ ಸಲೇಗಾರ, ಸಂಗಣ್ಣ ಮಿಣಜಿಗಿ, ಗಿರಿಜಾ ದೇವಿ ಮಿಣಜಿಗಿ ಸೇರಿ ಇತರರಿದ್ದರು.