ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸೋಮವಾರ ರಬಕವಿ ನಗರದ ಸ್ಲಂ ಏರಿಯಾಗಳಲ್ಲಿ ಬಿಸಿಲಿನಿಂದಾಗುವ ಹಾನಿಗಳು ಮತ್ತು ಅದರಿಂದ ಹೇಗೆ ರಕ್ಷಿಸಿಕೊಳ್ಳಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಿ ಒಆರ್ಎಸ್ ಪ್ಯಾಕೆಟ್ ವಿತರಿಸಿ ಮಾತನಾಡಿದ ಅವರು, ಕಾಟನ್ ಬಟ್ಟೆಯನ್ನೇ ಧರಿಸಿ, ರಸ್ತೆ ಬದಿಯಲ್ಲಿ ಕತ್ತರಿಸಿ ಇಟ್ಟ ಹಣ್ಣು ಅಥವಾ ಆಹಾರ ತಿನ್ನಬೇಡಿ. ಆಗಾಗ ನೀರು ಸೇವಿಸಿ. ಬಿಸಿಲಿನಿಂದ ಏನಾದರೂ ತೊಂದರೆಯಾದರೆ ೧೦೭೭ ಸಹಾಯವಾಣಿಗೆ ಕರೆ ಮಾಡಲು ತಿಳಿಸಿದರು.
ಆಶಾ ಕಾರ್ಯಕರ್ತೆ ಬೇಬಿಶ್ರೀ ಹಾಸಿಲಕರ ಮಾತನಾಡಿ, ಬಿಸಿಲಿನ ತಾಪಕ್ಕೆ ವಯೋವೃದ್ಧರಿಗೆ ತುಂಬಾ ತೊಂದರೆಯಾಗುವ ಸಾಧ್ಯತೆ ಇದೆ. ಆದಕಾರಣ ಅವರನ್ನು ತಂಪಾದ ಸ್ಥಳಗಳಲ್ಲಿ ಇರುವಂತೆ ನೋಡಿಕೊಳ್ಳಿ. ನಿಂಬೆ ರಸ, ಒಆರ್ಎಸ್ ಕುಡಿಸಿರಿ ಎಂದು ತಿಳಿಹೇಳಿದರು.ಈ ವೇಳೆ ಸಾವಿತ್ರಿ ಪವಡಶೆಟ್ಟಿ, ಲಕ್ಷ್ಮೀ ತಳವಾರ, ಭಾರತಿ ಸಿರಗೂರ, ಶೋಭಾ ಗುಣಕಿ, ಸಕ್ಕೂಬಾಯಿ ಪೂಜಾರಿ, ಸವಿತಾ ಬಾವಲತ್ತಿ, ಸವಿತಾ ಔವರಸಂಗ, ಶೀವಲೀಲಾ ಪಾಟೀಲ, ಕವಿತಾ ಆಲಗೂರ, ಯಲ್ಲವ್ವ ಉಂಕಿ, ಲಕ್ಷ್ಮೀ ಹಳ್ಳಿ, ಪೂಜಾ ಅಡವಿತೋಟ, ಗೀತಾ ಆರಗಿ ಸೇರಿದಂತೆ ಅನೇಕರಿದ್ದರು.