ಸರ್ಕಾರದಲ್ಲಿ ಸುರ್ಜೇವಾಲಾ ಹಸ್ತಕ್ಷೇಪವಿಲ್ಲ: ಡಾ.ಪರಂ

KannadaprabhaNewsNetwork |  
Published : Jul 28, 2025, 12:30 AM IST
(ಡಾ.ಜಿ. ಪರಮೇಶ್ವರ) | Kannada Prabha

ಸಾರಾಂಶ

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ರಾಜ್ಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಯಾವುದೇ ಅಧಿಕಾರಿಗಳನ್ನು ಕರೆದು ಮಾತನಾಡಿಲ್ಲ, ಯಾವುದೇ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ.

- ಸೂಪರ್ ಸಿಎಂ ವರ್ತನೆ ಎಂಬುದು ವಿಪಕ್ಷದವರ ಆರೋಪ: ಗೃಹ ಸಚಿವ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ರಾಜ್ಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಯಾವುದೇ ಅಧಿಕಾರಿಗಳನ್ನು ಕರೆದು ಮಾತನಾಡಿಲ್ಲ, ಯಾವುದೇ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರ್ಜೇವಾಲಾ ರಾಜ್ಯದಲ್ಲಿ ಸೂಪರ್ ಸಿಎಂ ರೀತಿ ವರ್ತಿಸುತ್ತಾರೆ ಎಂಬುದು ವಿಪಕ್ಷಗಳ ಆರೋಪ. ವಿಪಕ್ಷದವರದು ಆರೋಪ ಅಷ್ಟೇ ಅಲ್ವಾ? ಅದರಲ್ಲಿ ಸತ್ಯಾಂಶವಿಲ್ಲ ಎಂದರು.

ರಣದೀಪ ಸುರ್ಜೇವಾಲಾ ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ. ಇದೇನೂ ಹೊಸದೇನಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳನ್ನು ರಾಜ್ಯಗಳ ಉಸ್ತುವಾರಿಯಾಗಿ ಮಾಡುತ್ತಾರೆ. ನಮ್ಮ ಪಕ್ಷದ ಶಾಸಕರು, ಸಚಿವರ ಜೊತೆಗೆ ರಣದೀಪ ಸುರ್ಜೇವಾಲಾ ಒನ್‌ ಟು ಒನ್ ಮೀಟಿಂಗ್ ಮಾಡಿದ್ದಾರೆಂದರೆ ಅದು ನಮ್ಮ ಪಕ್ಷದ ಆಂತರಿಕ ವಿಚಾರವಾಗಿದೆ. ಅದಕ್ಕೂ ವಿಪಕ್ಷ ಬಿಜೆಪಿಯವರಿಗೆ ಏನು ಸಂಬಂಧ? ಅದೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಇಲ್ಲಿಗೆ ಬರುವುದಿಲ್ಲವೇ? ನಾವು ಜನರಿಗೆ ನೀಡಿದ್ದ ಭರವಸೆ ಜಾರಿಗೆ ತರುತ್ತಿದ್ದೇವಾ, ಕೊಟ್ಟ ಭರವಸೆಯಂತೆ ಕೆಲಸ ಮಾಡುತ್ತಿದ್ದೇವಾ ಎಂಬುದನ್ನು ನಮ್ಮ ಪಕ್ಷ ನೋಡಬೇಕಲ್ವಾ? ಅದಕ್ಕೆ ಬರುತ್ತಾರೆಂದು ಸುರ್ಜೇವಾಲಾ ರಾಜ್ಯ ಭೇಟಿಯನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ ಸಮರ್ಥಿಸಿಕೊಂಡರು.

- - -

(ಬಾಕ್ಸ್‌)

* ಧರ್ಮಸ್ಥಳ ಪ್ರಕರಣ: ಎಸ್ಐಟಿ ವರದಿ ಬರೋವರೆಗೂ ಏನೂ ಹೇಳಲ್ಲ

ದಾವಣಗೆರೆ: ಧರ್ಮಸ್ಥಳದ ಪ್ರಕರಣಗಳ ಕುರಿತಂತೆ ಜನರ ಅಪೇಕ್ಷೆಯಂತೆ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಶನಿವಾರದಿಂದಲೇ ನಮ್ಮ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ವರದಿ ಬರುವವರೆಗೂ ಹೇಳಿಕೆ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಸುದ್ದಿಗಾರರಿಗೆ ಹೇಳಿದರು.

ಬೆಂಗಳೂರಿನಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣವನ್ನೂ ಈಗಾಗಲೇ ಸಿಐಡಿಗೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಮಾಜಿ ಸಚಿವ ಬೈರತಿ ಬಸವರಾಜ ಪಾತ್ರ ಇದೆಯೋ, ಇಲ್ಲವೋ ಎಂಬುದರ ಬಗ್ಗೆ ಪರಿಶೀಲನೆ ನಡೆದಿದೆ. ಕೊಲೆ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ. ಯಾವುದಕ್ಕೂ ಯಾವುದೇ ರಾಜಕೀಯ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು.

- - -

(ಟಾಪ್‌ ಕೋಟ್‌)

* ಕೇಳಿದಷ್ಟು ಯೂರಿಯಾ ಕೇಂದ್ರವೇ ಕೊಟಿಲ್ಲ

ನಾವು ಕೇಳಿದಷ್ಟು ಯೂರಿಯಾ ರಸಗೊಬ್ಬರ ಕೇಂದ್ರ ಸರ್ಕಾರವೇ ನೀಡಿಲ್ಲ. ಹಾಗಾಗಿ, ರಸಗೊಬ್ಬರದ ಪ್ರಮಾಣ ಕಡಿಮೆ ಇದೆ. ರೈತರು ಸ್ವಾಭಾವಿಕವಾಗಿಯೇ ಯೂರಿಯಾ ಕೇಳುತ್ತಿದ್ದಾರೆ. ನಮ್ಮಲ್ಲಿ ಏನು ಸ್ಟಾಕ್ ಇತ್ತೋ ಅದನ್ನು ರೈತರಿಗೆ ಹಂಚುತ್ತಿದ್ದೇವೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗೆ ಪಿ-ಕ್ಯಾಪ್ ಕೊಡಲು ಬದ್ಧರಿದ್ದೇವೆ. ಈಗಾಗಲೇ ಆರ್ಡರ್ ಸಹ ಮಾಡಿದ್ದು, ಆದಷ್ಟು ಬೇಗನೆ ನೀಡುತ್ತೇವೆ.

- ಡಾ. ಜಿ.ಪರಮೇಶ್ವರ, ಗೃಹ ಸಚಿವ

- - -

(ಫೋಟೋ- ಡಾ. ಜಿ.ಪರಮೇಶ್ವರ)

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’