ಸಂಸ್ಕರಣಾ ಘಟಕ ಸ್ಥಳಾಂತರಕ್ಕೆ ಸರ್ವೆ ನಂಬರ್ ೪೪೧ ನಿವಾಸಿಗಳ ಮನವಿ

KannadaprabhaNewsNetwork |  
Published : Feb 02, 2024, 01:01 AM IST
1ಎಚ್ಎಸ್ಎನ್6 : ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಬಂದಿದ್ದ ನಿವಾಸಿಗಳು. | Kannada Prabha

ಸಾರಾಂಶ

ಹಾಸನ ಕಸಬಾ ಹೋಬಳಿಯ ಸರ್ವೆ ನಂಬರ್ ೪೪೧ ರಲ್ಲಿ, ಕೊಳಚೆ ಮತ್ತು ಒಳಚರಂಡಿ ನಿರ್ಮೂಲನ ಮಂಡಳಿಯಿಂದ ನಡೆಯುತ್ತಿರುವ ಕೊಳಚೆ ನೀರು ಸಂಸ್ಕರಣಾ ಘಟಕದ ಕಾಮಗಾರಿಯನ್ನು ಸ್ಥಗಿತಗೊಳಿಸಿ ಘಟಕವನ್ನು ಸ್ಥಳಾಂತರಗೊಳಿಸುವಂತೆ ಆಗ್ರಹಿಸಿ ಆ ಭಾಗದ ನಿವಾಸಿಗಳು ಗುರುವಾರ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಸತ್ಯಭಾಮ ಅವರಿಗೆ ಪತ್ರಕನ್ನಡಪ್ರಭ ವಾರ್ತೆ ಹಾಸನ

ಹಾಸನ ಕಸಬಾ ಹೋಬಳಿಯ ಸರ್ವೆ ನಂಬರ್ ೪೪೧ ರಲ್ಲಿ, ಕೊಳಚೆ ಮತ್ತು ಒಳಚರಂಡಿ ನಿರ್ಮೂಲನ ಮಂಡಳಿಯಿಂದ ನಡೆಯುತ್ತಿರುವ ಕೊಳಚೆ ನೀರು ಸಂಸ್ಕರಣಾ ಘಟಕದ ಕಾಮಗಾರಿಯನ್ನು ಸ್ಥಗಿತಗೊಳಿಸಿ ಘಟಕವನ್ನು ಸ್ಥಳಾಂತರಗೊಳಿಸುವಂತೆ ಆಗ್ರಹಿಸಿ ಆ ಭಾಗದ ನಿವಾಸಿಗಳು ಗುರುವಾರ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.

ನಿವಾಸಿ ಸಯ್ಯದ್ ನದೀಮ್ ಮಾಧ್ಯಮದೊಂದಿಗೆ ಮಾತನಾಡಿ, ಈ ಜಾಗವು ಸರ್ಕಾರದ ದಿಶಾಂಕ್ ಆ್ಯಪ್‌ನಲ್ಲಿ ಪರಿಶೀಲಿಸಿದಾಗ ಅದು ಕೆರೆಯ ಜಾಗವಾಗಿದೆ. ಅಲ್ಲಿ ಹಾಸನ ನಗರದ ವಾರ್ಡ್ ನಂ ೧೬,೧೭,೧೮ ರಲ್ಲಿ ಸಾರ್ವಜನಿಕರು ವಾಸವಾಗಿದ್ದು, ಹಾಲಿ ಈದ್ಗಾ ಮೈದಾನದ ಮುಂಭಾಗದಲ್ಲಿದೆ. ಸರ್ಕಾರಿ ನಿಯಮದಂತೆ ಕೆರೆಯ ಜಾಗವು ಸರ್ಕಾರದ ಸ್ವತ್ತಾಗಿದ್ದು, ಕೆರೆಯ ಜಾಗದಲ್ಲಿ ಯಾವುದೇ ಇತರೆ ಕಾಮಗಾರಿಗಾಗಲೀ, ಕಟ್ಟಡಗಳಿಗಾಗಲೀ ನೀಡಲು ಅವಕಾಶವಿರುವುದಿಲ್ಲ ಎಂದು ಸಾರ್ವಜನಿಕರು.

ಕೆರೆಯ ಜಾಗದಲ್ಲಿ ಕರ್ನಾಟಕ ಕೊಳಚೆ ಮತ್ತು ಒಳಚರಂಡಿ ನಿರ್ಮೂಲನಾ ಮಂಡಳಿಯಿಂದ, ಕೊಳಚೆ ನೀರು ಸಂಸ್ಕರಣೆ ಕೇಂದ್ರ ಮಾಡುವ ಉದ್ದೇಶವಿದೆ. ಇದರಿಂದ, ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತದೆ. ಈ ಜಾಗದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಜಮೀನಿನಲ್ಲಿ, ಸರ್ಕಾರಿ ಶಾಲೆಯಾಗಲಿ, ಉದ್ಯಾನವಾಗಲಿ, ಆಸ್ಪತ್ರೆಯಾಗಲಿ, ನಿರ್ಮಿಸಿದಲ್ಲಿ ಅಭ್ಯಂತರವಿರುವುದಿಲ್ಲ. ಆದರೆ ಸಾರ್ವಜನಿಕರಿಗೆ ತೊಂದರೆಯಾಗುವ ಕೊಳಚೆ ನೀರು ಸಂಸ್ಕರಣಾ ಕೇಂದ್ರ ತೆರೆಯಲು ಅವಕಾಶ ಕೊಡಬಾರದು ಎಂಬುದು ಎಲ್ಲಾ ಸಾರ್ವಜನಿಕರ ಅಭಿಪ್ರಾಯವಾಗಿದೆ ಎಂದು ಪತ್ರದಲ್ಲಿ ಸಾರ್ವಜನಿಕರು ಹೇಳಿದ್ದಾರೆ.

ನಿವಾಸಿಗಳಾದ ಇಸ್ಮಾಯಿಲ್, ಅಮಾನುಲ್ಲಾ ಶರೀಫ್, ಆಸೀಫ್, ರಶೀದ್, ಶಾರುಕ್, ನದೀಮ್, ಅಲೀಮ್ ಇದ್ದರು.ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲು ಬಂದಿದ್ದ ನಿವಾಸಿಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ