ಕನ್ನಡಪ್ರಭ ವಾರ್ತೆ ಹೊಸಪೇಟೆ
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಲತಲಾಂತರದಿಂದ ಶೋಷಿತ ಅಸ್ಪೃಶ್ಯ ಸಮುದಾಯಗಳನ್ನು ಮೂಢನಂಬಿಕೆ ಹೆಸರಿನಲ್ಲಿ ಶೋಷಣೆ ಮಾಡಿಕೊಂಡು ಬರಲಾಗಿತ್ತು. ತಿಳಿವಳಿಕೆ ಕೊರತೆ, ಅನಕ್ಷರತೆ ಮತ್ತು ದೊಡ್ಡ ಸಮುದಾಯದ ದಬ್ಬಾಳಿಕೆಯಿಂದ ನಡೆದಿದೆ. ನಿಷೇಧ ಕಾಯಿದೆ ಜಾರಿಗೆ ಬಂದ ಬಳಿಕ 1993-94 ಮತ್ತು 2007-08ರಲ್ಲಿ ಸಮೀಕ್ಷೆ ಮಾಡಲಾಗಿತ್ತು. ಈ ಸಮೀಕ್ಷೆಗಳಿಂದ ಹೊರಗುಳಿದವರನ್ನು ಸೇರಿಸಲು ಮರು ಸಮೀಕ್ಷೆ ಆರಂಭಿಸಲಾಗಿದೆ. ಇದರಲ್ಲಿ ಮೂರು ಪೀಳಿಗೆ ಹೆಸರು ನೋಂದಾಯಿಸಬಹುದು. ಯಾರೂ ಇದರಿಂದ ವಂಚಿತರಾಗಬಾರದು ಎಂದರು.
ಈ ಪದ್ದತಿ ಇನ್ನೂ ಜೀವಂತವಿದೆ. ಇನ್ನೂ ಅದರಲ್ಲೇ ಹೋಗುತ್ತಿರುವವರನ್ನು ಬಿಡುಗಡೆ ಮಾಡಬೇಕು. ಸಾಮಾಜಿಕ ನ್ಯಾಯ ಒದಗಿಸಲು ಅವರಿಗೆ ನೆರವಾಗಿರಲು, ಆರ್ಥಿಕ, ಸಾಮಾಜಿಕವಾಗಿ ಸದೃಢಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಅವಕಾಶ ವಂಚಿತರಿಗೆ ಸರ್ಕಾರ ಸಮೀಕ್ಷೆ ನಡೆಸುತ್ತಿದೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರದ ಸಿಡಿಪಿಒ ಕಚೇರಿಗಳಲ್ಲಿ ಸಮೀಕ್ಷೆ ವರದಿ ಬಂದ ಮೇಲೆ ಮೂರು ಪೀಳಿಗೆಗೆ ಅನುಕೂಲವಾಗಲಿದೆ. ಮೂರು ತಲೆಮಾರು ಸೌಲಭ್ಯ ಒದಗಿಸಲು ನಿರ್ಧರಿಸಿ ಸರ್ಕಾರ ಸಮೀಕ್ಷೆ ನಡೆಸುತ್ತಿದೆ ಎಂದರು.ಒಡೆದಾಳುವ ನೀತಿ:
ಸೆ.22ರಿಂದ ನಡೆಯಲಿರುವ ಸಮೀಕ್ಷೆಯಲ್ಲಿ ಮಾದಿಗರಲ್ಲಿ ಗೊಂದಲ ಬೇಡ, ಮುಚ್ಚು ಮರೆಯಿಲ್ಲದೆ ಮಾದಿಗರು ಅಂತ ಬರೆಸಬೇಕು ಎಂದರು.