-ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿ ಮಧ್ಯಭಾಗದಿಂದ 25 ಮೀ. ಬಿಟ್ಟು ಸರ್ವೇ । ಜಮೀನು ಮೇಲ್ನೋಟಕ್ಕೆ ಅತಿಕ್ರಮಣ, ಉಳ್ಳವರ ಪಾಲಾದ ಜಾಗ
ಮಲ್ಲಯ್ಯ ಪೋಲಂಪಲ್ಲಿ
ಕನ್ನಡಪ್ರಭ ವಾರ್ತೆ ಶಹಾಪುರನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ ಕೋಟ್ಯಂತರ ಮೌಲ್ಯದ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಭೂಮಾಪನ ಇಲಾಖೆಯ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿದ್ದರು. ಆದರೆ, ಅಧಿಕಾರಿಗಳು ನಡೆಸಿದ ಸರ್ವೇ ಕಾರ್ಯ ಕಾಟಾಚಾರಕ್ಕಾಗಿ ಮಾಡಿದಂತಿದೆ ಎಂದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.
ಸರ್ವೇ ಕಾರ್ಯ: ಬೀದರ್-ಬೆಂಗಳೂರು ರಾಜ್ಯ ಹೆದ್ದಾರಿಯ ಮಧ್ಯಭಾಗದಿಂದ 25 ಮೀಟರ್ ಬಿಟ್ಟು ಸರ್ವೇ ಕಾರ್ಯ ಮಾಡಲಾಗಿದೆ. ಒಂದು ಭಾಗದಲ್ಲಿ 15 ಮೀಟರ್, ಇನ್ನೊಂದು ಭಾಗದಲ್ಲಿ 7 ಮೀಟರ್ ಜಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ್ದಾಗಿದೆ ಎಂದು ತಾಲೂಕ ಸರ್ವೇಯರ್ ಸೂರ್ಯಕಾಂತ್ ತಿಳಿಸಿದ್ದಾರೆ.
ಕಾಟಾಚಾರದ ಸರ್ವೇ:ಆರೋಪ
---ಬಾಕ್ಸ್---
ಸರ್ವೇ ಅಧಿಕಾರಿ ಹೇಳುವ ಪ್ರಕಾರ ರಾಜ್ಯ ಹೆದ್ದಾರಿ ಮಧ್ಯಭಾಗದಿಂದ 25 ಮೀಟರ್ ಹೆದ್ದಾರಿ ಜಾಗ ಬಿಟ್ಟು ಸರ್ವೇ ಮಾಡಬೇಕು. ಆದರೆ, ರಸ್ತೆ ಮಧ್ಯಭಾಗದಿಂದ ಅಳತೆ ಮಾಡಿ ಗುರುತು ಮಾಡಿ ಸರ್ವೇ ಅಧಿಕಾರಿಗಳು ಹಾಕಿದ ಗುರುತಿನ ಕಲ್ಲುಗಳನ್ನು ನೋಡಿದರೆ ಗೊತ್ತಾಗುತ್ತದೆ. ಈ ಅಧಿಕಾರಿ ಯಾವ ರೀತಿ ಸರ್ವೇ ಮಾಡಿದ್ದಾರೆ ಎಂದು. ಇವರು ಯಾವುದೋ ಪ್ರಭಾವಕ್ಕೆ ಒಳಗಾಗಿ ಸರ್ಕಾರಿ ಜಮೀನು ಸರಿಯಾಗಿ ಸರ್ವೇ ಮಾಡದೆ ನಾಮ್ ಕಾ ವಾಸ್ತೆ ಸರ್ವೇ ಮಾಡಿ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ಒಂದೊಂದು ಅಡಿಗೂ ಈ ಜಾಗಕ್ಕೆ ಬಂಗಾರದ ಬೆಲೆ ಇದೆ. ಇಂಥ ಬೆಲೆ ಬಾಳುವ ಜಮೀನನ್ನು ಒತ್ತುವರಿದಾರರಿಗೆ ಅನುವು ಮಾಡಿಕೊಟ್ಟಂತಿದೆ. ಈ ಜಾಗವನ್ನು ಪುನಃ ಬೇರೆ ಜಿಲ್ಲೆಯ ಸರ್ವೆಯರ್ ಗಳನ್ನು ಕರೆಯಿಸಿ ಹದ್ದುಬಸ್ತು ಮಾಡಿಕೊಡಬೇಕು ಎಂದು ಜಿಲ್ಲಾ ದಲಿತ ಹಾಗೂ ಕಾರ್ಮಿಕ ಮುಖಂಡ ನಿಂಗಣ್ಣ ನಾಟೇಕಾರ್ ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.
ಕೋಟ್-1: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದ ಜಮೀನನ್ನು ಭೂ ಮಾಪನ ಇಲಾಖೆಯವರು ಸರ್ವೇ ಮಾಡಿ ಜಾಗ ಗುರುತಿಸಿ ಕೊಟ್ಟಿದ್ದಾರೆ.
-
ಕೋಟ್-2..ಸ್ಥಳೀಯ ಸರ್ವೇ ಅಧಿಕಾರಿಗಳಿಂದ ಸರಿಯಾದ ಸರ್ವೇ ಕಾರ್ಯ ಸಾಧ್ಯವಿಲ್ಲ. ಬಂಗಾರದ ಬೆಲೆ ಇರುವ ಸರ್ಕಾರಿ ಜಮೀನನ್ನು ಸಂರಕ್ಷಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಆದರೆ, ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತು ಜಮೀನು ಕಬಳಿಕೆಗೆ ಸಾಥ್ ನೀಡಿರುವ ಅನುಮಾನವಿದೆ. ಇದರ ಬಗ್ಗೆ ತನಿಖೆಯಾಗಲಿ.
- ಚಂದ್ರಶೇಖರ್ ಯಾಳಗಿ, ನಗರ ಮಂಡಲ ಬಿಜೆಪಿ ಅಧ್ಯಕ್ಷರು, ಶಹಾಪುರ.---
12ವೈಡಿಆರ್3: ಶಹಾಪುರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಜಾಗ ಸರ್ವೇ ಮಾಡುತ್ತಿರುವ ಅಧಿಕಾರಿಗಳು.--
12ವೈಡಿಆರ್4: ಜಮೀನಿನ ಸರ್ವೇ ನಕ್ಷೆ.----