ಕೊಳಕೇರಿಯಿಂದ ಕೊಕೇರಿಗೆ ಸಂಪರ್ಕಿಸುವ ಕುಪ್ಪೋಟು ರಸ್ತೆ ಉದ್ಘಾಟನೆ

KannadaprabhaNewsNetwork |  
Published : Feb 13, 2025, 12:46 AM IST
ನಾಪೋಕ್ಲು ಗ್ರಾಮ ಪಂಚಾಯತಿಯ ಕೊಳಕೇರಿ ಗ್ರಾಮದದಿಂದ ಕೊಕೇರಿಗೆ ಸಂಪರ್ಕಿಸುವ ಕುಪ್ಪೋಟು  ಪೂರ್ಣಗೊಂಡ ರಸ್ತೆಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರು ಉದ್ಘಾಟನೆ ಮಾಡಿದರು .12-ಎನ್ಪಿ ಕೆ-2.ಕೊಳಕೇರಿ ಗ್ರಾಮದ ತೊತ್ತಿಯoಡ ಬಾರಿಕೆ ಕಡೆ ತೆರಳುವ ರಸ್ತೆಯ 13.ಲಕ್ಷ ರೂ ಸೇರಿದಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಒಟ್ಟು 65 ಲಕ್ಷರೂಪಾಯಿಯ ಕಾಮಗಾರಿಗಳಿಗೆ ವಿರಾಜಪೇಟೆ ಶಾಸಕರು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರು  ಗುದ್ದಲಿ ಪೂಜೆ ಯನ್ನು ನೆರವೇರಿಸಿದರು.  | Kannada Prabha

ಸಾರಾಂಶ

ಕುಪ್ಪೋಟ್ಟು ರಸ್ತೆಯನ್ನು ಶಾಸಕ ಎ.ಎಸ್‌. ಪೊನ್ನಣ್ಣ ಉದ್ಘಾಟನೆ ಮಾಡಿದರು. ಈ ಸಂದರ್ಭ ಶಾಸಕರು ಕಾಮಗಾರಿ ವೀಕ್ಷಿಸಿ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಯ ಗ್ರಾಮ ಪಂಚಾಯಿತಿಯ ಕೊಳಕೇರಿ ಗ್ರಾಮದಿಂದ ಕೊಕೇರಿಗೆ ಸಂಪರ್ಕಿಸುವ ಕುಪ್ಪೋಟು ರಸ್ತೆಯನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಂಗಳವಾರ ಸಂಜೆ ಉದ್ಘಾಟನೆ ಮಾಡಿದರು.

ಅಭಿವೃದ್ಧಿ ಕಾಣದ ಈ ರಸ್ತೆಯನ್ನು ಶಾಸಕರು ಇತ್ತೀಚೆಗೆ ಬಿಡುಗಡೆ ಮಾಡಿದ 60 ಲಕ್ಷ ರು. ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿದೆ. ಶಾಸಕರು ಕಾಮಗಾರಿ ವೀಕ್ಷಿಸಿ ಕೆಲಸ ನಿರ್ವಹಿಸುವ ಸಂದರ್ಭ ಸ್ಥಳೀಯರು ಗುಣಮಟ್ಟದ ಬಗ್ಗೆ ಗಮನಹರಿಸಬೇಕು ಎಂದು ಶಾಸಕರು ಸಲಹೆ ನೀಡಿದರು.

ಬಳಿಕ ಕೊಳಕೇರಿ ಗ್ರಾಮದ ತೊತ್ತಿಯಂಡ ಬಾರಿಕೆ ಕಡೆ ತೆರಳುವ ರಸ್ತೆಗೆ 13 ಲಕ್ಷ ರು. ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 65 ಲಕ್ಷ ರು. ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಮಾತನಾಡಿ, ಶಾಸಕ ಎ.ಎಸ್. ಪೊನ್ನಣ್ಣ ಜನರ ಬೇಡಿಕೆ ಮತ್ತು ನಿರೀಕ್ಷೆಯಂತೆ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಿಗೆ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ರವರಿಗೂ ಕೊಳಕೇರಿ ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಪಂಚಾಯಿತಿ ಅಧ್ಯಕ್ಷರಾದ ವನಜಾಕ್ಷಿ ರೇಣುಕೇಶ್, ಕಾಂಗ್ರೆಸ್ ವಲಯ ಅಧ್ಯಕ್ಷರಾದ ಮಾಚೇಟಿರ ಕುಸು ಕುಶಾಲಪ್ಪ, ಸದಸ್ಯರಾದ ಕುಲ್ಲೇಟಿರ ಅರುಣ್ ಬೇಬ, ಹೇಮಾ ಅರುಣ್, ಅಶ್ರಫ್ ಕೆ. ವೈ, ಇಬ್ರಾಹಿಂ, ಆಮಿನ, ಎಮ್ ಎ ಮೊಯಿದು, ಬಿ ಆರ್ ಗಂಗಮ್ಮ ಎಲ್ತಂಡ ಶಾಂತಿ, ನಾಯಕಂಡ ಕುಞ್ಞಣ್ಣ ಮತ್ತು ಜಮಾಹತ್ ಅಧ್ಯಕ್ಷರಾದ ಅಶ್ರಫ್ ಎ. ಎ, ಹಾರಿಸ್ ಎ.ಕೆ. ಕಾದರ್, ಗ್ರಾಮಸ್ಥರಾದ ಎಮ್. ಎಮ್ ಮಹಮ್ಮದ್ , ಹಾರಿಸ್ ಪಿ. ಎಮ್, ರಝಕ್ ಎಮ್. ಎಮ್, ಗಫೂರ್ ಸಿ. ವೈ, ಮಜೀದ್ ಹಾಜಿ ಪಿ, ರಹೀಮ್ ಎಮ್. ಎಮ್, ಬಷೀರ್ ಕೋಕೇರಿ ಗ್ರಾಮಸ್ಥರಾದ ಚೆಂನಂಡ ಗಿರೀಶ್ ಪೂನಚ್ಚ, ಚೆಂನಂಡ ಜೆಪ್ಪು ದೇವಯ್ಯ, ಪೊನ್ನಚಂಡ ಟೀನ ಡಿವಿನ್ ಮತ್ತು ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ