ಕನ್ನಡಪ್ರಭ ವಾರ್ತೆ ಶಿರಾ
ಅವರು ನಗರದ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಾಲಾ ಕಾಲೇಜುಗಳಲ್ಲಿ ಕೇವಲ ನಿಯೋಜಿತ ಪಠ್ಯ ಮಾತ್ರ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗದು. ಪಠ್ಯದ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು ವ್ಯಕ್ತಿತ್ವ ನಿರ್ಮಿಸುವಲ್ಲಿ ಸಹಕಾರಿಯಾಗಬಲ್ಲವು ಎಂದರು.
ಸಮಾರೋಪ ಭಾಷಣ ಮಾಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ ಹೊನ್ನಾಂಜನೇಯ ಅವರು, ವಿದ್ಯಾರ್ಥಿನಿಯರು ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಇವರ ತತ್ವಾದರ್ಶ ರೂಢಿಸಿಕೊಳ್ಳಿ. ಭವಿಷ್ಯ ನೀವು ತಿಳಿದಷ್ಟು ಸುಲಭವಿರದು. ಬದ್ಧತೆ, ಸತತ ಪರಿಶ್ರಮದ ವ್ಯಕ್ತಿಗೆ ಭವಿಷ್ಯ ಉತ್ತಮವಾಗಿರುವುದೆಂದು ತಿಳಿಸಿದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಚಂದ್ರಯ್ಯ, ಜಾಗತೀಕರಣ, ಉದಾರೀಕರಣ ನಮಗೆ ವಿಪುಲ ಉದ್ಯೋಗ ದೊರಕಿಸಿಕೊಟ್ಟಿವೆಯಾದರೂ ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಸೇವಾ ಮನೋಭಾವ ಮರೆತು ಸುಲಿಗೆ ಕೇಂದ್ರಗಳಾಗಿ, ಉದ್ಯಮಗಳಾಗಿ ರೂಪಾಂತರಗೊಂಡಿರುವುದು ಆತಂಕಕಾರಿ. ಬೆಳೆಯುವ ಮಕ್ಕಳಾದ ನೀವು ವೈಜ್ಞಾನಿಕ, ವೈಚಾರಿಕ ವಿಚಾರಗಳ ಕಡೆ ಗಮನಹರಿಸಿ, ಮೌಢ್ಯವನ್ನು ಬಿಟ್ಟು ಪ್ರಶ್ನಿಸುವ ಗುಣ ನಿಮ್ಮದಾಗಲೆಂದು ತಿಳಿಸಿದರು.