ರಾಮನಗರ: ಬಿಡದಿ ಪುರಸಭಾ ಕಚೇರಿಯ ಬೀಗ ಮುರಿದು ಬಿರುವಿನಲ್ಲಿದ್ದ ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಿರುವ ಕಳ್ಳನೊಬ್ಬ ಕಡತಗಳನ್ನು ಕಳವು ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಇದಲ್ಲದೆ ಕಬ್ಬಿಣದ ಡ್ರಾಯಾರ್ ಗಳನ್ನು ಸಹ ಹೊಡೆದು ಅಲ್ಲು ಹುಡುಕಾಟ ಮಾಡಿದ್ದಾನೆ. ಪುರಸಭಾ ಕಚೇರಿಗೆ ಕಳ್ಳ ಬರುವ ದೃಶ್ಯ ಹೊರಗಿನ ಲ್ಯಾಬ್ ಗ ಅಳವಡಿಕೆ ಮಾಡಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮರು ದಿನ ಬೆಳಗ್ಗೆ ಪುರಸಭೆಯ ಪ್ರಭಾರ ಮೇಲ್ವಿಚಾರಕ ಛಲಪತಿ ಬಂದು ನೋಡಲಾಗಿ ಕಚೇರಿಯ ಮುಖ್ಯ ದ್ವಾರದ ಬೀಗ ಹೊಡೆದಿರುವುದು ಕಂಡು ಬಂದಿದೆ. ತಕ್ಷಣ ಪುರಸಭಾ ಮುಖ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಪುರಸಭಾ ಮುಖ್ಯಾಧಿಕಾರಿಗಳಾದ ಕೆ.ಜಿ.ರಮೇಶ್ ಹಾಗೂ ಸಿಬ್ಬಂದಿಗಳು ಬಂದು ನೋಡಿದಾಗ ಕಳ್ಳತನ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಆನಂತರ ಕಳ್ಳತನ ನಡೆದಿರುವ ಮಾಹಿತಿಯನ್ನ ಪೊಲೀಸರಿಗೆ ತಿಳಿಸಿದ್ದಾರೆ.ಮಾಹಿತಿ ಪಡೆದ ಪೊಲೀಸರು ಕಚೇರಿಗೆ ಬಂದು ಪರಿಶೀಲನೆ ಮಾಡಿ ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಕರೆಯಿಸಿ ತಪಾಸಣೆ ನಡೆಸಿದರು. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಕೆ.ಜಿ.ರಮೇಶ್ ದೂರು ದಾಖಲಿಸಿದ್ದಾರೆ.
ಪುರಸಭಾ ಕಚೇರಿಯಲ್ಲಿ ನಡೆದಿರುವ ಕಳವು ಪ್ರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ. ಕಚೇರಿಯಲ್ಲಿ ಯಾವುದೇ ಹಣವನ್ನು ಇಡುವುದಿಲ್ಲ ಕೇವಲ ಸರ್ಕಾರಿ ದಾಖಲೆಗಳು ಮಾತ್ರ ಇರುತ್ತವೆ. ಇಂತಹ ಕಚೇರಿಯಲ್ಲಿ ಕಳ್ಳತನ ಮಾಡಿರುವುದನ್ನು ನೋಡಿದರೆ ಮೇಲ್ನೋಟಕ್ಕೆ ಯಾವುದೋ ಕಡತಗಳಿಗಾಗೆ ಕಳ್ಳತನ ನಡೆದಿರುವ ಅನುಮಾನ ಮೂಡಿದೆ. ಅಲ್ಲದೆ ಬೀರುಗಳು ಹಾಗೂ ಡೇಬಲ್ ಡ್ರಾಯರ್ ಗಳನ್ನು ಹೊಡೆದು ಕಡತಗಳನ್ನಷ್ಟೆ ಹುಡುಕಾಟ ಮಾಡಿರುವುದನ್ನ ಗಮನಿಸಿದರೆ ಇದೊಂದು ಯಾವುದೋ ಪ್ರಮುಖ ಕಡತಕ್ಕಾಗಿಯೆ ಕಳ್ಳತನ ನಡೆದಿರುವುದು ಗೊತ್ತಾಗುತ್ತಿದೆ.
ಸಿಸಿಟಿವಿ ವೈರ್ಗಳ ಕಟ್
ಕೋಟ್ ................
-ರಮೇಶ್, ಮುಖ್ಯಾಧಿಕಾರಿ, ಬಿಡದಿ ಪುರಸಭೆ
ಬಿಡದಿ ಪುರಸಭೆ ಕಚೇರಿ ಬಾಗಿಲ ಬೀಗ ಒಡೆದಿರುವುದು.