ಸಿದ್ದರಾಮೇಶ್ವರರು ಸಮಾಜ ಸುಧಾರಕರು: ಶಾಸಕ ತುನ್ನೂರು

KannadaprabhaNewsNetwork |  
Published : Feb 06, 2026, 01:15 AM IST
ಯಾದಗಿರಿಯ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಸಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. | Kannada Prabha

ಸಾರಾಂಶ

Swamiji is a social reformer: MLA Thunnur

- ಜಿಲ್ಲಾಡಳಿತದಿಂದ ಸಂಭ್ರಮದ ಸಿದ್ದರಾಮೇಶ್ವರ ಜಯಂತಿ

--

ಕನ್ನಡಪ್ರಭ ವಾರ್ತೆ ಯಾದಗಿರಿ

ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರರು 12ನೇ ಶತಮಾನದ ವಚನಕಾರ, ಸಮಾಜ ಸುಧಾರಕ ಮತ್ತು ಮಹಾನ್ ಶಿವಯೋಗಿಗಳಾಗಿದ್ದರೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ, ಭೋವಿ ವಡ್ಡರ ಸಮಾಜ ಜಿಲ್ಲಾ ಸಮಿತಿ ಹಾಗೂ‌ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಮಾಜಿಕ ಕಳಕಳಿಯುಳ್ಳರಾಗಿದ್ದ ಸಿದ್ದರಾಮೇಶ್ವರ ಅವರು, ಬಡವರಿಗಾಗಿ ಹಗಲಿರುಳು ದುಡಿದು, ಕೆರೆ-ಕಟ್ಟೆಗಳು ಕಟ್ಟಿದಲ್ಲದೇ, ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ಆಗಿನ ಕಾಲದಲ್ಲಿಯೇ ಸಾಮೂಹಿಕ ವಿವಾಹಗಳ ಕಲ್ಪನೆ ಜಾರಿಗೆ ತಂದ ಮಹಾನ್ ಪುರುಷರಾಗಿದ್ದಾರೆಂದು ಬಣ್ಣಿಸಿದರು.

ನಿಸ್ವಾರ್ಥ ಸೇವೆಗೆ ಹೆಸರುವಾಸಿಯಾಗಿದ್ದ ಇವರು ಸಾಮಾಜಿಕ ಕಾರ್ಯಗಳ ಮೂಲಕ ಕರ್ಮಯೋಗಿಯಾಗಿದ್ದರು. ಚೆನ್ನಬಸವಣ್ಣನವರಿಂದ ದೀಕ್ಷೆ ಪಡೆದು ಲಿಂಗಾಂಗ ಸಾಮರಸ್ಯದ "ಶಿವಯೋಗಿ "ಯಾಗಿ ಬಸವಣ್ಣನವರ ಕಲ್ಯಾಣ ಕ್ರಾಂತಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾಮಾಜಿಕ ಹರಿಹಾರರಾಗಿದ್ದರೆಂದು ಶಾಸಕರು ವಿವರಿಸಿದರು.

ಸಿದ್ದರಾಮೇಶ್ವರರು ಕರ್ಮ (ಕೆಲಸ) ಮತ್ತು ಯೋಗ (ಆಧ್ಯಾತ್ಮಿಕತೆ) ಗಳೆರಡನ್ನೂ ಸಮಾನವಾಗಿ ನಿರ್ವಹಿಸಿದ ವಿಶಿಷ್ಟ ಶಿವಶರಣರಾಗಿದ್ದಾರೆಂದು ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ, 12ನೇ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಇವರೊಬ್ಬರು. ಇವರ ಜೀವನ ಚರಿತ್ರೆಗೆ ಸಂಬಂಧಿಸಿದ ಅನೇಕ ಆಧಾರಗಳು ವಚನ, ಕಾವ್ಯ ಶಾಸನ, ಐತಿಹ್ಯಗಳಲ್ಲಿ ದೊರೆಯುತ್ತವೆ. ಲಿಂಗಸ್ಥಾಪನೆ, ಸಕಲ ಜೀವಾವಳಿಯ ನೆಮ್ಮದಿಯ ಬದುಕಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಕಾಯಕದಲ್ಲಿ ತೊಡಗಿ ಕರ್ಮಯೋಗಿ ಎನಿಸಿದ್ದರೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಸಕನಳ್ಳಿ ವಿಷ್ಣು ಆಶ್ರಮದ ಮಾರುತಿ ತಾತಾ, ಕೆಂಭಾವಿಯ ಬಂಗಾರಪ್ಪ ರಂಗನಾಥ ಸ್ವಾಮಿ,

ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರು, ಬಿಜೆಪಿ ನಾಯಕ ರಾಚಣ್ಣಗೌಡ ಮುದ್ನಾಳ್, ಭೋವಿ ವಡ್ಡರ ಸಮಾಜದ ಜಿಲ್ಲಾಧ್ಯಕ್ಷ ಮಾರೆಪ್ಪ ವರ್ಕನಳ್ಳಿ ಇದ್ದರು. ಭೋವಿ ವಡ್ಡರ ಸಮಾಜದ ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ಹಣಮಂತ ವಲ್ಲಾಪೂರೆ ಸ್ವಾಗತಿಸಿದರು. ಜ್ಯೋತಿಲಕ್ಷ್ಮಿ ತಡಿಬಿಡಿ ನಿರೂಪಿಸಿದರು.

ಬಿ.ಟಿ.ಚಂದ್ರಶೇಖರ, ಹಳ್ಳೆಪ್ಪ ದೊತ್ರೆ, ಗೋಪಾಲ ಕಡೆಕಲ್, ನರಸಿಂಹ ತಡಿಬಿಡಿ, ದೇವರಾಜ ಮಸಕನಳ್ಳಿ, ಭೀಮರಾಯ ಕಿಲ್ಲನಕೇರಾ, ಮಹಾದೇವಪ್ಪ ಗೋಪಾಳಾಪುರ, ಬಸವರಾಜ ಶಾರದಳ್ಳಿ, ರಾಜು ದೊತ್ರೆ, ವಿಶ್ವನಾಥ ಮಂಜಳಕರ್, ಬಸವರಾಜ ಮುದ್ನಾಳ್, ಗ್ಯಾನಪ್ಪ ಮಂಜುಳಕರ್‌ ಸೇರಿದಂತೆ ಇತರರಿದ್ದರು.

ಭವ್ಯ ಮೆರವಣಿಗೆ: ಜಯಂತಿ ನಿಮಿತ್ಯ ಗುರುವಾರ ಬೆಳಗ್ಗೆ ಇಲ್ಲಿನ ಭೋವಿ ವಡ್ಡರ ಗಲ್ಲಿಯಿಂದ ಕಾರ್ಯಕ್ರಮದ ವೇದಿಕೆಯವರೆಗೂ ಸಿದ್ದರಾಮೇಶ್ವರರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಸಮಾಜದ ಅಪಾರ ಜನರು, ವಿಶೇಷವಾಗಿ‌ ಮಹಿಳೆಯರು, ಮಕ್ಕಳು,ಯುವಕರು ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

-

5ವೈಡಿಆರ್4 :

ಯಾದಗಿರಿಯ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಸಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಯಿಯ ಆರೈಕೆಗೆ ಮಗನ ಅಸಡ್ಡೆ: ಎಸಿ ಮಹತ್ವದ ತೀರ್ಪು
ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿ: ಮುನಿಲಕ್ಷ್ಮಯ್ಯ