ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಮುರಗೋಡ ಕೇಂಗೇರಿ ಮಠದ ದಿವಾಕರ ದಿಕ್ಷೀತ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ರಾಜ್ಯದಲ್ಲಿ ಈಚೆಗೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿ ಧಾರ್ಮಿಕ ದೌರ್ಜನ್ಯ ನಡೆಸಿರುವುದು ಅಕ್ಷಮ ಅಪರಾಧವಾಗಿದೆ. ಕಲಬುರ್ಗಿಯಲ್ಲಿ ವಿದ್ಯಾರ್ಥಿಗೆ ಜನಿವಾರ ತೆಗೆಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದು ಸನಾತನ ಜನಿವಾರ ಸಮುದಾಯಕ್ಕೆ ಮನಸ್ಸಿಗೆ ತುಂಬಾ ಘಾಸಿಯಾಗಿದೆ ಎಂದರು.
ಈ ಹಿಂದೆ ರಾಜ್ಯದಲ್ಲಿ ಯಾವುದೇ ಸಮುದಾಯಕ್ಕೆ ಇಂಥ ಧಾರ್ಮಿಕ ತೇಜೋವಧೆ ಘಟನೆಗಳು ಜರುಗಿರುವುದಿಲ್ಲ. ಇತ್ತಿಚಿನ ದಿನಮಾನಗಳಲ್ಲಿ ಸನಾತನ ಹಿಂದೂ ಧರ್ಮಗಳ ಮೇಲೆ ಪದೇ ಪದೇ ಅವಹೇಳನಕಾರಿ ಘಟನೆಗಳು ಜರಗುತ್ತಿದ್ದು, ಬೇರೆ ರಾಜ್ಯಗಳಲ್ಲಿ ಇಲ್ಲದ ಕಾನೂನು ಕರ್ನಾಟಕದಲ್ಲಿ ಮಾತ್ರ ಏಕೆ? ಈ ಕೃತ್ಯದ ಹಿಂದೆ ಕಾಣದ ಕೈಗಳ ಕೈವಾಡವಿದೆ. ಇದಕ್ಕೆ ರಾಜಕೀಯ ಪ್ರೇರಿತವೇ ಮೂಲಕಾರಣವಾಗಿದೆ. ಇದನ್ನು ಕೂಡಲೇ ಪತ್ತೆ ಮಾಡಿ ತಪ್ಪಿತಸ್ಥರ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಶಿಕ್ಷಿಗೆ ಗುರಿಪಡಿಸಬೇಂದು ಆಗ್ರಹಿಸುತ್ತೇವೆ ಎಂದರು.ಈ ವೇಳೆ ತಾಲೂಕು ಜನಿವಾರ ಧಾರಣೆಗಳ ಒಕ್ಕೂಟದ ಮುಖಂಡರಾದ ರಾಜು ಬಡಿಗೇರ, ಮುಕ್ಕುಂದ ಕುಲಕರ್ಣಿ, ವಿಜಯ ಪತ್ತಾರ, ಡಾ.ರೋಹಿಣಿ ನೇಗಿನಹಾಳ, ರಾಜು ಬೋಂಗಾಳೆ ಮಾತನಾಡಿ, ಪ್ರತಿಯೊಬ್ಬ ಹಿಂದೂ ಜನಿವಾರವನ್ನು ಧರಿಸಬಹುದು ಅದಕ್ಕೆ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರ ಧರಿಸಿದ ಮೇಲೆ ಅದರ ನಿಯಮ ಪಾಲಿಸಬೇಕು. ಅಂದಾಗ ಅದರ ಉದ್ಧೇಶ ಸಫಲವಾಗುತ್ತದೆ. ಈಚೆಗೆ ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಧರಿಸಿದ ವಿದ್ಯಾರ್ಥಿಗಳಿಗೆ ಜನಿವಾರ ತೆಗಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿರುವ ಕ್ರಮ ತ್ರೀವ ಖಂಡನೀಯವಾಗಿದೆ. ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶಿಸಿ ತಪ್ಪಿಸ್ಥತರ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರಲ್ಲದೆ, ಇಂತಹ ಕೃತ್ಯಗಳು ಇದೇ ರೀತಿ ಮುಂದುವರಿದರೆ ರಾಜ್ಯಾದ್ಯಂತ ಸಮಾಜದಿಂದ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.ಉಪವಿಭಾಗಾಧಿಕಾರಿ ಅನೂಪ ಸ್ಥಿತಿಯಲ್ಲಿ ತಹಸೀಲ್ದಾರ್ ಹಣಮಂತ ಶಿರಹಟ್ಟಿ ಮನವಿ ಸ್ವಿಕರಿಸಿ, ತಮ್ಮ ಮನವಿಯನ್ನು ಸರ್ಕಾರದ ಮೂಲಕ ರಾಜ್ಯಪಾಲರಿಗೆ ರವಾನಿಸಲಾಗುವುದು ಎಂದರು.