ಪುಟ...4ಕ್ಕೆ ಸಮಸ್ಯೆ ತಿಳಿದ ತಕ್ಷಣ ಕ್ರಮ ಕೈಗೊಳ್ಳಿ

KannadaprabhaNewsNetwork |  
Published : Apr 21, 2024, 02:22 AM IST
ಟಾಸ್ಕ್ ಪೋರ್ಸ್‌ | Kannada Prabha

ಸಾರಾಂಶ

ಇಂಡಿ: ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಸಮಸ್ಯೆ ಉದ್ಭವಿಸಬಹುದು ಎಂದು ಗೊತ್ತಾದ ತಕ್ಷಣ ಟ್ಯಾಂಕರ್‌ಗೆ ಬೇಡಿಕೆ ಇಟ್ಟು ಪ್ರಪೋಜಲ್ ಕಳುಹಿಸಿಕೊಡಿ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ್ ಸೂಚನೆ ನೀಡಿದರು.

ಇಂಡಿ: ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಸಮಸ್ಯೆ ಉದ್ಭವಿಸಬಹುದು ಎಂದು ಗೊತ್ತಾದ ತಕ್ಷಣ ಟ್ಯಾಂಕರ್‌ಗೆ ಬೇಡಿಕೆ ಇಟ್ಟು ಪ್ರಪೋಜಲ್ ಕಳುಹಿಸಿಕೊಡಿ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ್ ಸೂಚನೆ ನೀಡಿದರು.ಪಟ್ಟಣದ ಆಡಳಿತಸೌಧ ಸಭಾಭವನದಲ್ಲಿ ನಡೆದ ಟಾಸ್ಕ್‌ ಫೋರ್ಸ್‌ ಸಭೆಯಲ್ಲಿ ಅವರು ಮಾತನಾಡಿ, ಈಗಾಗಲೇ ಬಹುತೇಕ ಹಳ್ಳಿಗಳಿಗೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ವಸತಿ ಪ್ರದೇಶಗಳಲ್ಲಿಯೂ ನೀರಿನ ಸಮಸ್ಯೆ ಉದ್ಭವಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಜನ, ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.ನೀರು ಕೊಡುವಂತೆ ಮನವಿ:ಕುಡಿಯಲು ನೀರು ಕೊಡುವುದು ಪುಣ್ಯದ ಕೆಲಸ ಗ್ರಾಮೀಣ ಪ್ರದೇಶಗಳಲ್ಲಿ ನಿಮ್ಮ ಬಾವಿ, ಕೊಳವೆ ಬಾವಿಗೆ ನೀರಿದ್ದರೆ ಬೇಸಿಗೆ ಮುಗಿಯುವವರೆಗೂ ನಿಮ್ಮೂರಿನ ಜನತೆಗೆ ಕುಡಿಯುವ ನೀರು ಕೊಟ್ಟು ಪುಣ್ಯ ಕಟ್ಟಿಕೊಳ್ಳಿ, ಗ್ರಾಮದಿಂದ ದೂರವಿದ್ದರೆ ಟ್ಯಾಂಕರ್‌ಗಳಿಗಾದರೂ ನೀರು ತುಂಬಿಸಿಕೊಡಿ ಎಂದು ಗ್ರಾಮೀಣ ಭಾಗದ ಜನರಿಗೆ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮನವಿ ಮಾಡಿದರು.ಈಗಾಗಲೇ ಟ್ಯಾಂಕರ್ ಮೂಲಕ ನೀರು ಪೂರೈಸಿದರೂ ಹೆಚ್ಚಿನ ಟ್ಯಾಂಕರ್‌ಗಳಿಗೆ ಬೇಡಿಕೆ ಬರುತ್ತಿದೆ. ಅಭಿವೃಧ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ಸ್ಥಾನಿಕ ಚೌಕಾಶಿ ಮಾಡಿ ಅವಶ್ಯವಿದ್ದಲ್ಲಿ ಪ್ರಪೋಜಲ್ ಕಳುಹಿಸಿ ಎಂದರು.ವೇದಿಕೆಯಲ್ಲಿ ತಹಸೀಲ್ದಾರ್‌ ಮಂಜುಳಾ ನಾಯಿಕ್, ತಾಪಂ ಇಒ ನೀಲಾಂಬಿಕೆ ಭುಯ್ಯಾರ ಇದ್ದರು. ಸಭೆಯಲ್ಲಿ ಎಸ್.ಆರ್.ರುದ್ರವಾಡಿ, ಎಚ್.ಎಸ್.ಪಾಟೀಲ, ಮಹಾದೇವಪ್ಪ ಏವೂರ, ವೀಣಾ ಕೊಳೂರಗಿ, ಎಸ್.ಆರ್.ಮುಜಗೊಂಡ, ಎಚ್.ಎಸ್.ಗುನ್ನಾಪೂರ ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ