
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಬಸವ ಸಂಘಟನೆಗಳ ಸಂಯುಂಕ್ತಾಶ್ರಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಕೇವಲ ಸಾಂಸ್ಕ್ರತಿಕ ನಾಯಕ ಎಂದು ಘೋಷಿಸಿ, ಎಲ್ಲ ಕಚೇರಿಗಳಲ್ಲಿ ಫೋಟೊ ಇದ್ದರೆ ಉಪಯೋಗವಿಲ್ಲ. ರಾಜ್ಯದ ಏಕೈಕ ಮಹಿಳಾ ವಿವಿಯಾಗಿರುವ ವಿಜಯಪುರದ ರಾಜ್ಯ ಮಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಬಸವ ಅಧ್ಯಯನ ಪೀಠ ಆರಂಭಿಸಿ, ವಚನಗಳ ಸಂಶೋಧನೆ, ಪರಿಷ್ಕರಣೆ, ಅಧ್ಯಯನ ಕೆಲಸ ಆಗಬೇಕಿದೆ. ಪೀಠಕ್ಕೆ ಹೇರಳವಾಗಿ ಅನುದಾನ ನೀಡಿ, ಬಸವಣ್ಣ ಮತ್ತು ಶರಣ ಸಾಹಿತ್ಯದ ಸಂಶೋಧನೆ, ಪರಿಷ್ಕರಣೆ, ಪ್ರಕಟಣೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಅಷ್ಟೆ ಅಲ್ಲದೆ ರಾಜ್ಯ ಸರ್ಕಾರ ರಾಜ್ಯದ ವಿವಿಗಳಲ್ಲಿಯೂ ಸಹ ಬಸವ ಅಧ್ಯಯನ ಕೇಂದ್ರ ಸ್ಥಾಪಿಸಬೇಕು. ಖಾಲಿ ಇರುವ ಎಲ್ಲ ವಿವಿಗಳಲ್ಲಿನ ಹುದ್ದೆಗಳ ಭರ್ತಿ ಮಾಡಬೇಕು ಎಂದರು.
ಮಹಿಳಾ ವಿವಿಯ ಎದುರಿಗಿರುವ ಅಕ್ಕಮಹಾದೇವಿಯವರ ಅರೆಬೆತ್ತಲೆ ಪ್ರತಿಮೆಯನ್ನು ತೆರವುಗೊಳಿಸಿ, ಆ ಸ್ಥಳದಲ್ಲಿ ಶುಭ್ರವಾದ ಸೀರೆಯನ್ನುಟ್ಟ ಅಕ್ಕಮಹಾದೇವಿ ಅವರ ಮೂರ್ತಿ ಇಡಬೇಕು. ಇದಕ್ಕಾಗಿ ಸರ್ಕಾರ ತಜ್ಞರ ಸಮಿತಿ ರಚಿಸಿ ಮೂರು ತಿಂಗಳೊಳಗೆ ಈಗಿರುವ ಅಕ್ಕಮಹಾದೇವಿಯ ಅರೆಬೆತ್ತಲೆ ಪ್ರತಿಮೆ ತೆರವಾಗಿಸಿ ಬೇರೆ ಬಟ್ಟೆಯಿರುವ ಪ್ರತಿಮೆ ಇಡುವಂತಾಗಬೇಕು ಎಂದು ಒತ್ತಾಯಿಸಿದರು.ವಿಜಯಪುರ ಜಿಲ್ಲೆಯಲ್ಲಿ 50 ರಿಂದ 60 ಶರಣರು ಹುಟ್ಟಿದ್ದರೂ, ಜಿಲ್ಲೆಯಲ್ಲಿ ಯಾವುದೇ ಜನವಸತಿ ಬಡಾವಣೆಗಳಿಗೆ ಶರಣರ ಹೆಸರನ್ನಿಟ್ಟಿಲ್ಲ. ಬಸವಣ್ಣನವರ ಕಲ್ಯಾಣ ಕ್ರಾಂತಿಯ ಜಿಲ್ಲೆಯಲ್ಲಿ ಬಡಾವಣೆಗಳಿಗೆ ಶರಣರ ಹೆಸರು ಇಡಬೇಕು. ಇದಕ್ಕೆ ಜಿಲ್ಲಾಡಳಿತ, ಮಹಾನಗರ ಪಾಲಿಕೆಯ ಆಡಳಿತ ಮಂಡಳಿ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ರತ್ನಕ್ಕ ಬಿರಾದಾರ, ಡಾ.ಸರಸ್ವತಿ ಪಾಟೀಲ, ವಿ.ಸಿ.ನಾಗಠಾಣ, ಜಂಬುನಾಥ ಕಂಚ್ಯಾಣಿ, ಸಿದ್ದಪ್ಪ ಪಡ್ನಾಡ, ಶಾರದಾಮಣಿ ಹುಣಶ್ಯಾಳ, ಆರ್.ಎಸ್.ಬಿರಾದಾರ ಸೇರಿದಂತೆ ನೀಲಮ್ಮನ ಬಳಗ, ಶರಣ ಸಾಹಿತ್ಯ ಪರಿಷತ್ತು, ಇತರೆ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.