ಕಲಘಟಗಿ: ಗ್ರಾಮೀಣ ಜನರ ಹಾಗೂ ಬಡವರ ಆರೋಗ್ಯದ ದೃಷ್ಟಿಯಿಂದ ಸಂಸದ ಪ್ರಹ್ಲಾದ ಜೋಶಿ ಬೃಹತ್ ಉಚಿತ ವೈದ್ಯಕೀಯ ಶಿಬಿರ ಆಯೋಜಿದ್ದಾರೆ. ತಾವೆಲ್ಲರೂ ವೈದ್ಯಕೀಯ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದು ವಿಪ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಹೇಳಿದರು.
ಶಿಬಿರದಲ್ಲಿ ಹೃದಯ ಕಾಯಿಲೆ, ಕಣ್ಣಿನ ತಪಾಸಣೆ, ಸ್ತ್ರೀ ರೋಗ, ಎಲುಬು ಮತ್ತು ಕೀಲು, ಚಿಕ್ಕ ಮಕ್ಕಳ ತಜ್ಞರು ಸೇರಿದಂತೆ ವಿಶೇಷ ತಜ್ಞರಿದ್ದು ಉಚಿತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಶಿಬಿರದಲ್ಲಿ ಡಾ. ಅಮಿತ್ ಸತ್ತೂರ, ಡಾ. ಶ್ರೀನಿವಾಸ ಜೋಶಿ, ಡಾ. ಮೂಲ್ಕಿ ಪಾಟೀಲ, ಡಾ. ಆನಂದ ವರ್ಮಾ, ಆಯುಶ್ ವಿಭಾಗದ ಡಾ. ರವೀಂದ್ರ ಸೇರಿದಂತೆ ಪ್ರಖ್ಯಾತ ವೈದ್ಯರು ತಪಾಸಣೆ ನಡೆಸಿದರು. ಎಂ.ಎಂ. ಜೋಶಿ ಆಸ್ಪತ್ರೆ ತಂಡ ಕಣ್ಣು ಪರೀಕ್ಷೆ, ಡಾ. ಜೀವಣ್ಣವರ ಆಸ್ಪತ್ರೆ ತಂಡ, ಹೃದಯರೋಗ, ಶುಗರ್ ಮತ್ತು ಬಿಪಿ ಸೇರಿದಂತೆ ವಿವಿಧ ಪರೀಕ್ಷೆ ನಡೆಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾವರಗೇರಿ ಗ್ರಾಪಂ ಅಧ್ಯಕ್ಷೆ ಅನಸವ್ವ ಕಾಮಧೇನು ವಹಿಸಿದ್ದದರು. ಸಾನಿಧ್ಯವನ್ನು ತಾವರಗೇರಿ ಸಿದ್ದಾರೂಡಮಠದ ನಿರ್ಗುಣಾನಂದ ಸ್ವಾಮಿಗಳು ವಹಿಸಿದ್ದರು. ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕಾಧ್ಯಕ್ಷ ಬಸವರಾಜ ಶೇರೆವಾಡ, ಎಸ್ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಹೊನ್ನಿಹಳ್ಳಿ, ಗುರುನಾಥಗೌಡ್ರ ಬಸನಗೌಡ್ರ, ಮೌನೇಶ ರಾ. ಬಡಿಗೇರ, ಗ್ರಾ ಪಂ ಉಪಾಧ್ಯಕ್ಷ ಮಮತಾ ತಿಪ್ಪಣ್ಣವರ, ಭಾರತಿ ಕ. ಪುಟ್ಟಪ್ಪನವರ,