ಕನ್ನಡಪ್ರಭ ವಾರ್ತೆ ನಂಜನಗೂಡು
ಕಚೇರಿ ಪ್ರವೇಶದ್ವಾರದ ಬಾಗಿಲು ಬಂದ್ ಮಾಡಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ತಾಲೂಕಿನ ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಚರಂಡಿಗಳು ಹೂಳಿನಿಂದಾವೃತಗೊಂಡಿದ್ದು, ಸ್ವಚ್ಚತೆ ಕಾಪಾಡುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಹಾಗೂ ಬೀದಿ ದೀಪಗಳ ಸಮಸ್ಯೆ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.ಇನ್ನೂ ಗ್ರಾಪಂ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ಇ ಸ್ವತ್ತು ನೀಡಲು ಜನರನ್ನು ಅಲೆದಾಡಿಸುತ್ತಿದ್ದಾರೆ. ಸರಿಯಾದ ದಾಖಲೆಗಳಿದ್ದರೂ ನಮೂನೆ 9 ಮತ್ತು 11ಎ ನೀಡುತ್ತಿಲ್ಲ. ತಾಲೂಕಿನ ಎಲ್ಲಾ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ನಗರ ಪ್ರದೇಶದಲ್ಲಿ ವಾಸ್ತವ್ಯ ಹೂಡಿದ್ದು, ಕೇಂದ್ರ ಸ್ಥಳದಲ್ಲಿ ಯಾರೊಬ್ಬರೂ ವಾಸವಿರುವುದಿಲ್ಲ. ಇದರಿಂದಾಗಿ ನಾಗರೀಕರ ಕುಂದು ಕೊರತೆಗಳು ನಿವಾರಣೆಯಾಗುತ್ತಿಲ್ಲ. ಹೀಗಾಗಿ, ಕೇಂದ್ರ ಸ್ಥಳದಲ್ಲಿ ವಾಸವಿಲ್ಲದ ಸಿಬ್ಬಂದಿ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಹಾಡ್ಯ ರವಿ, ಕೆರೆಹುಂಡಿ ರಾಜಣ್ಣ, ಚಿಕ್ಕಸ್ವಾಮಿ, ಹನುಮಯ್ಯ, ಕಸುವಿನಹಳ್ಳಿ ಮಂಜೇಶ್, ಹಂಡುವಿನಹಳ್ಳಿ ರವಿ, ದೇವೀರಮ್ಮನಹಳ್ಳಿ ಹುಂಡಿ ಮಹೇಶ್, ಸಿದ್ದರಾಜು, ವಳಗೆರೆ ಗಣೇಶ, ಅಂಬಳೆ ಮಹದೇವಸ್ವಾಮಿ, ಹದಿನಾರು ಭುಜಂಗಪ್ಪ, ಮುದ್ದಹಳ್ಳಿ ಕುಮಾರ್, ಮರಿಸ್ವಾಮಿ, ದೇವಣ್ಣ ಮೊದಲಾದವರು ಇದ್ದರು.