ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಜ.೧೨ ರ ಘಟನೆಗೆ ಅನಗತ್ಯ ಹಾಗೂ ತಪ್ಪಾದ ಕಥೆ ಜೋಡಿಸಿ ಹರಿಯ ಬಿಟ್ಟಿದ್ದಾರೆ. ಎಲ್ಲಾ ರಾಜ್ಯಗಳ ಪ್ರಯಾಣಿಕರು ಹಾಗೂ ವಾಹನಗಳ ಸುರಕ್ಷತೆ, ಭದ್ರತೆ ಹಾಗೂ ಗೌರವ ಕಾಪಾಡಲು ತಮಿಳುನಾಡಿನ ಪೊಲೀಸ್ ಇಲಾಖೆ ದೃಢವಾಗಿ ಬದ್ಧವಾಗಿದೆ. ಈ ಪ್ರತ್ಯೇಕ ಘಟನೆಯನ್ನು ಅಂತರ ರಾಜ್ಯ ಸಮಸ್ಯೆಯಂತೆ ಬಿಂಬಿಸಲು ಹೊರಟ ಯಾವುದೇ ಪ್ರಯತ್ನವು ವಾಸ್ತವಿಕವಾಗಿ ತಪ್ಪು ಮತ್ತು ದಾರಿ ತಪ್ಪಿಸುವಂತಾದ್ದು ಎಂದಿದ್ದಾರೆ.
ಇದು ಸಾಮಾನ್ಯ ಸಂಚಾರ ಅಪಘಾತದಿಂದ ಉಂಟಾದ ಒಂದು ಘಟನೆ ಮಾತ್ರವಾಗಿದೆ. ಕಾನೂನು ಪ್ರಕಾರ ನ್ಯಾಯ ಸಮ್ಮತವಾಗಿ ಮತ್ತು ಪಕ್ಷಪಾತವಿಲ್ಲದೆ ತಮಿಳುನಾಡಿನ ಪೊಲೀಸರು ಕೆಲಸ ನಿರ್ವಹಿಸಿದ್ದಾರೆ.ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಸಲಹೆ ನೀಡಲಾಗಿದೆ. ವಿಷಯವನ್ನು ಶೀಘ್ರವಾಗಿ ಮುಕ್ತಾಯಗೊಳಿಸಲಾಗಿದೆ. ವಾಸ್ತವಿಕ ಸ್ಥಿತಿಯನ್ನು ಸ್ಪಷ್ಟಪಡಿಸುವ ಮತ್ತು ತಪ್ಪು ಮಾಹಿತಿಯಿಂದ ಅನಗತ್ಯ ಗೊಂದಲ ಉಂಟಾಗದಂತೆ ತಡೆಯುವ ಉದ್ದೇಶದಿಂದ ಈ ಪತ್ರ ಬರೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಜ.೧೨ ರಂದು ಸಂಜೆ ೪.೩೦ ರ ಸಮಯದಲ್ಲಿ ಲಾರಿ ಹಾಗೂ ಕರ್ನಾಟಕದ ವ್ಯಾನ್ನ ಹಿಂಬದಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಯಾರಿಗೂ ಗಾಯವಾಗಿಲ್ಲ. ವ್ಯಾನ್ ಹಿಂಭಾಗದ ಲೈಟ್ಗೆ ಮಾತ್ರ ಸಣ್ಣ ಹಾನಿಯಾಗಿತ್ತು. ಅಪಘಾತದ ಬಳಿಕ ಎರಡು ಗುಂಪಿನ ನಡುವೆ ಸ್ವಲ್ಪ ವಾಗ್ವಾದ ನಡೆದಿದೆ. ತಮಿಳುನಾಡಿನ ಸ್ಥಳೀಯ ಪೊಲೀಸರು ಆಗಮಿಸಿ ಸಮಾಧಾನಪಡಿಸಿ, ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಅಪಘಾತ ಮಾಡಿದ ಹಾಗೂ ಅಪಘಾತವಾದ ಎರಡು ಕಡೆಯವರ ಒಪ್ಪಿಗೆ ಮೇರೆಗೆ ಸ್ನೇಹ ಪೂರ್ವಕವಾಗಿ ಸಮಸ್ಯೆ ಬಗೆಹರಿದಿದೆ.ಕರ್ನಾಟಕ ವ್ಯಾನ್ಗೆ ಉಂಟಾದ ಸಣ್ಣ ಹಾನಿಯಾದ ಹಿನ್ನಲೆ ತಮಿಳುನಾಡಿನ ಡಿಕ್ಕಿ ಹೊಡೆದ ಲಾರಿ ಚಾಲಕನಿಂದ ವ್ಯಾನ್ ಚಾಲಕನಿಗೆ ₹1000 ಪಾವತಿಯಾಗಿದೆ. ಅಪಘಾತದ ಸಂಬಂಧ ಯಾವುದೇ ದೂರು ಎರಡು ಕಡೆಯವರಿಂದ ದೂರು ಬಾರದ ಕಾರಣ ಸ್ವಯಂ ಪ್ರೇರಣೆಯಿಂದ ಅಲ್ಲಿನ ಪೊಲೀಸರು ಕೇಸು ದಾಖಲಿಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಂಡಿದ್ದಾರೆ.
ಸಣ್ಣ ರಸ್ತೆ ಅಪಘಾತದಿಂದ ಉಂಟಾದ ಈ ಘಟನೆ ಯಾವುದೇ ಉದ್ದೇಶ ಅಥವಾ ದುರುದ್ದೇಶ ಇಲ್ಲ.ದರೆ ಘಟನೆಯ ವೇಳೆ ಶಾಂತಿ ಭಂಗ ಉಂಟಾದಲ್ಲಿ ಅದಕ್ಕೆ ಹೊಣೆಗಾರರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ.ನ್ಯಾಯ ಸಮ್ಮತ ದೃಷ್ಠಿಯಿಂದ ಘಟನಾ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಪಾತ್ರ ಮತ್ತು ವರ್ತನೆ ಕುರಿತು ತನಿನೆ ಕೂಡ ನಡೆಸಲು ಥೇನಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ಸ್ನೇಹ ಪ್ರಿಯಾ ಆದೇಶಿಸಿದ್ದಾರೆ. ಅಂದಿನ ಘಟನೆ ಸಂಬಂಧ ಅಗತ್ಯವಿದ್ದಲ್ಲಿ ಇಲಾಖಾ ನಿಯಮಾವಳಿ ಪ್ರಕಾರ ಕಟ್ಟು ನಿಟ್ಟಾದ ಆಡಳಿತಾತ್ಮಕ ಕ್ರಮವನ್ನು ಖಂಡಿತ ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.ಕನ್ನಡ ಭಾವುಟಕ್ಕೆ ಅಹಿತಕರ ಘಟನೆ ನಡೆದಿಲ್ಲ:ಜ.೧೨ ರಂದು ತಮಿಳುನಾಡಿನಲ್ಲಿ ನಮಗೆ ಹಾಗೂ ಕನ್ನಡ ಭಾವುಟಕ್ಕೆ ಅಹಿತಕರ ಘಟನೆ ನಡೆದಿಲ್ಲ ಎಂದು ತಾಲೂಕಿನ ಅಣ್ಣೂರು ಕೇರಿ ಗ್ರಾಮದ ಚಿಕ್ಕಮಾದಶೆಟ್ಟಿ,ಸಿದ್ದರಾಜು, ಸಿದ್ದಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಗ್ರಾಮದಿಂದ ೨೪೩ ಮಂದಿ ಶಬರಿ ಮಲೆ ಯಾತ್ರೆಗೆ ತೆರಳಿ ವಾಪಸ್ ಬರುವಾಗ ಜ.೧೨ ರ ಮಧ್ಯಾಹ್ನ ೩.೩೦ ರ ಸಮಯದಲ್ಲಿ ತಮಿಳುನಾಡಿನ ಲಾರಿಯೊಂದು ನಮ್ಮ ಜೊತೆಗೆ ತೆರಳುತ್ತಿದ್ದ ಟಿಟಿಗೆ ಡಿಕ್ಕಿ ಹೊಡೆದು ಇಂಡಿಕೇಟರ್ ಹಾನಿಯಾಯಿತು ಎಂದಿದ್ದಾರೆ.
ಅಲ್ಲದೆ ಸ್ಥಳೀಯ ತಮಿಳುನಾಡಿನ ಪೊಲೀಸರು ಸ್ಥಳಕ್ಕಾಗಮಿಸಿ ಲಾರಿ ಚಾಲಕನಿಂದ ೧೦೦೦ ರುಪಾಯಿಯನ್ನು ಟಿಟಿ ಇಂಡಿಕೇಟರ್ ಹಾನಿಯಾಗಿದ್ದಕ್ಕೆ ಪರಿಹಾರ ಕೊಡಿಸಿದರು. ಅಂದು ನಮಗೆ ಹಾಗೂ ಕನ್ನಡ ಭಾವುಟಕ್ಕೆ ಏನು ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ತಮಿಳುನಾಡಿನಲ್ಲಿ ಕನ್ನಡಿಗರ ವಾಹನದ ಮೇಲಿದ್ದ ಕನ್ನಡ ಭಾವುಟ ಕಿತ್ತು ಹಾಕಿಸಿದ್ರು ಹಾಗೂ ಕನ್ನಡಿಗ ಶಬರಿ ಮಲೆ ಯಾತ್ರಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ರು ಎಂದು ಪಟ್ಟಣದಲ್ಲಿ ಶನಿವಾರ ಕರವೇ ಪ್ರತಿಭಟನೆ ನಡೆಸಿತ್ತು.