ಕನ್ನಡಪ್ರಭ ವಾರ್ತೆ ನಂಜನಗೂಡು
ತಾಲೂಕಿನ ತಾಂಡವಪುರ ಎಂಐಟಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವಾರ್ಷಿಕ ಪುನಶ್ಚೇತನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಚಾಲಕನಿಲ್ಲದ ಸ್ವಯಂಚಾಲಿತ ವಾಹನಗಳು ಬರಲಿವೆ, ಬಯೊಟೆಕ್ನಾಲಜಿ ಮುಂದುವರೆದು ಮನುಷ್ಯನ ಆಯಸ್ಸನ್ನು ಹೆಚ್ಚಿಸಿ ಸಾವನ್ನು ಮುಂದೂಡಬಹುದಾಗಿದೆ, ಆಧುನಿಕ ತಂತ್ರಜ್ಞಾನದ ಅವಿಷ್ಕಾರಗಳಿಂದಾಗಿ ಮುಂದಿನ ಜೀವನಮ ಅಧ್ಬುತಗಳನ್ನು ಸೃಷ್ಠಿಸಲಿದೆ, ವಿದ್ಯಾರ್ಥಿಗಳು ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಕಲಿಯಬೇಕು, ವಿದ್ಯಾರ್ಥಿಗಳು ತಮ್ಮ ಜೀವನದ ನಾಲ್ಕು ವರ್ಷಗಳಲ್ಲಿ ಕಲಿಯಲು ಮುತುವರ್ಜಿ ವಹಿಸಿದರೆ ವಿತಂತ್ರಜ್ಞಾನದ ಮೂಲಕ ವಿಶ್ವದ ಬದಲಾವಣೆಗೆ ಕಾರಣರಾಗಲಿದ್ದಾರೆ ಎಂದು ಹೇಳಿದರು.ಸಾನಿಧ್ಯ ವಹಿಸಿದ್ದ ರಾಮಕೃಷ್ಣಮಠದ ಸರ್ವಜಯನಂದಜೀ ಸ್ವಾಮೀಜಿ ಮಾತನಾಡಿ, ಇಂದಿನ ಮೆಡಿಕಲ್, ಎಂಜಿನಿಯರಿಂಗ್ ಶಿಕ್ಷಣ ವ್ಯಾಪರೀಕರಣಗೊಂಡಿದೆ, ಉಪನ್ಯಾಸಕರೆ ಕೂಡಿ ಕಟ್ಟಿರುವ ಎಂಐಟಿ ಕಾಲೇಜು ಅಪರೂಪದ ಶಿಸ್ತು ,ಸೇವಾ ಮನೋಭಾವನೆಯನ್ನು ಹೊಂದಿದೆ,ಇಲ್ಲಿನ ಉಪನ್ಯಾಸಕರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ತುಡಿತ ಹೊಂದಿದ್ದಾರೆ, ವಿದ್ಯಾರ್ಥಿಗಳು ಓದಿನ ಜೊತೆಗೆ ನಮ್ಮ ಭಾರತೀಯ ಹೃದಯದಲ್ಲಿಟ್ಟು ಪೋಷಿಸಬೇಕು, ತನ್ಮೂಲಕ ದೇಶದ ಸಂಸ್ಕೃತಿಯನ್ನು ಬೆಳಗಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಡಾ.ಬಿ.ಜಿ. ನರೇಶ್ ಕುಮಾರ್, ಉಪಾಧ್ಯಕ್ಷ ಡಾ.ಜಿ. ಹೇಮಂತ್ ಕುಮಾರ್, ಡಿ.ಎಸ್. ಗುರು, ಎಸ್. ಮುರುಳಿ, ಟಿ. ವಾಸುದೇವ್, ಅನಂತ್ ಆರ್. ಕೊಪ್ಪಾರ್, ಡಾ.ಎಚ್.ಕೆ. ಚೇತನ್, ಪ್ರೊ. ಸಲಾಮತ್ ಇದ್ದರು.