ತಾತ್ಯಾಸಾಬ್‌ 4ನೇ ಬಾರಿಗೆ ಅಧ್ಯಕ್ಷ, ರಾಜೇಂದ್ರ 2ನೇ ಬಾರಿಗೆ ಉಪಾಧ್ಯಕ್ಷ

KannadaprabhaNewsNetwork | Published : Mar 9, 2025 1:47 AM

ಕಾಗವಾಡ ತಾಲೂಕಿನ ಜುಗೂಳ ಗ್ರಾಮದ ಮಲ್ಲಿಕಾರ್ಜುನ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿ ಚುನಾವಣೆ ಜರುಗಿದ್ದು, ಸಹಕಾರಿ ಧುರೀಣ ತಾತ್ಯಾಸಾಬ್‌ ಅಣ್ಣಾಸಾಬ್‌ ಪಾಟೀಲರು 4ನೇ ಬಾರಿಗೆ ಅಧ್ಯಕ್ಷರಾಗಿ ಹಾಗೂ ರಾಜೇಂದ್ರ ಕಲ್ಲಪ್ಪ ಕಡೋಲೆಯವರು 2ನೇ ಬಾರಿಗೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.

ಕನ್ನಡಪ್ರಭ ವಾರ್ತೆ ಕಾಗವಾಡ

ತಾಲೂಕಿನ ಜುಗೂಳ ಗ್ರಾಮದ ಮಲ್ಲಿಕಾರ್ಜುನ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿ ಚುನಾವಣೆ ಜರುಗಿದ್ದು, ಸಹಕಾರಿ ಧುರೀಣ ತಾತ್ಯಾಸಾಬ್‌ ಅಣ್ಣಾಸಾಬ್‌ ಪಾಟೀಲರು 4ನೇ ಬಾರಿಗೆ ಅಧ್ಯಕ್ಷರಾಗಿ ಹಾಗೂ ರಾಜೇಂದ್ರ ಕಲ್ಲಪ್ಪ ಕಡೋಲೆಯವರು 2ನೇ ಬಾರಿಗೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.

1994ರಲ್ಲಿ ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಹೆಸರಿನ ಮೇಲೆ ಸ್ಥಾಪನೆಗೊಂಡಿರುವ ಮಲ್ಲಿಕಾರ್ಜುನ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸೈಟಿಗೆ ಇತ್ತೀಚಿಗೆ ಚುನಾವಣೆ ಜರುಗಿತ್ತು. ಶನಿವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆದಿದ್ದು, ಎರಡೂ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿರುವದರಿಂದ ಸಹಕಾರಿ ಧುರೀಣ ತಾತ್ಯಾಸಾಬ್‌ ಅಣ್ಣಾಸಾಬ್‌ ಪಾಟೀಲ ಅವರು 4ನೇ ಬಾರಿಗೆ ಅಧ್ಯಕ್ಷರಾಗಿ ಹಾಗೂ ರಾಜೇಂದ್ರ ಕಲ್ಲಪ್ಪ ಕಡೋಲೆ 2ನೇ ಬಾರಿಗೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾನಾವಣಾಧಿಕಾರಿ ರಾಘವೇಂದ್ರ ನೂಲಿ, ಸಹಾಯಕರಾದ ಎ.ಎ,ಜಾಧವ ಅವರು ಘೋಷಿಸಿದರು.

ಅವಿರೋಧವಾಗಿ ಆಯ್ಕೆಗೊಂಡ ನಂತರ ಸಂಘ ಹಾಗೂ ಗ್ರಾಮಸ್ಥರ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ನೂತನ ಅಧ್ಯಕ್ಷ ತಾತ್ಯಾಸಾಬ ಪಾಟೀಲ, ಉಪಾಧ್ಯಕ್ಷ ರಾಜೇಂದ್ರ ಕಡೋಲೆ, ನಿರ್ದೇಶಕರಾದ ಬಾಳಾಸಾಬ ಪಾಟೀಲ ದಾದಾಸಾಬ ಪಾಟೀಲ, ಕಲ್ಲಪ್ಪ ಮಿಣಚೆ, ಬಾಳಗೌಡ ಪಾಟೀಲ, ಶೇಖರ ದೇಸಾಯಿ, ಗುರುಗೌಡ ಪಾಟೀಲ, ರಾಜು ಮಿರ್ಜೆ, ಸಾಧನಾ ಪಾಟೀಲ, ಸಾರೀಕಾ ಪಾಟೀಲನಾರಾಯಣ ಮಾನೆ,ಫಾರುಕ ಜುಗಳೆ, ಸಿದಗೌಡ ಕಾಡಾಪೂರೆ, ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪಿಕೆಪಿಎಎಸ್ ಅಧ್ಯಕ್ಷ ಅಣ್ಣಾಸಾಬ ಪಾಟೀಲ ,ಗ್ರಾಮ ಪಂಚಾಯತಿ ಅಧ್ಯಕ್ಷ ಕಾಕಾಸಾಬ್‌ ಪಾಟೀಲ ಮುಖಂಡರಾದ ಬಾಬಗೌಡ ಪಾಟೀಲ, ರವೀಂದ್ರ ವ್ಹಾಂಟೆ, ಸುರೇಶ ಪಾಟೀಲ, ಭಾಸ್ಕರ ಪಾಟೀಲ, ಅನೀಲ ಕಡೋಲೆ, ಅನೀಲ ಸುಂಕೆ, ಪ್ರಕಾಶ ಪಾಟೀಲ, ಬಾಬು ಜಾಧವ, ಪ್ರಮೊದ ಪಾಟೀಲ,ಅವಿನಾಶ ಪಾಟೀಲ ಬಾಬಾಸಾಬ ತಾರದಾಳೆ, ಸೇರಿದಂತೆ ಅನೇಕರು ಇದ್ದರು. ಶಾಖಾ ವ್ಯವಸ್ಥಾಕರಾದ ರುದ್ರಗೌಡ ಪಾಟೀಲ ಸ್ವಾಗತಿಸಿ, ವಂದಿಸಿದರು.ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಹಾಗೂ ನಡೆದಾಡುವ ದೇವರೆಂದೇ ಖ್ಯಾತಿಯಾಗಿರುವ ಸಿದ್ದೇಶ್ವರ ಮಹಾಸ್ವಾಮಿಗಳ ಕೃಪಾ ಆಶೀರ್ವಾದದಿಂದ ನಮ್ಮ ಬ್ಯಾಂಕ್‌ ಕಳೆದ 31 ವರ್ಷಗಳಿಂದ ಅತ್ಯುತ್ತಮವಾಗಿ ನಡೆದುಕೊಂಡು ಬಂದಿದೆ. ನಾನು ಕಳೆದ 20 ವರ್ಷಗಳಿಂದ ಸಂಘದ ಅಧ್ಯಕ್ಷನಾಗಿ ಸ್ವಚ್ಛ ಹಾಗೂ ಪಾರದರ್ಶಕ ಆಡಳಿತ ನಡೆಸುತ್ತ ಬಂದಿರುವುದರಿಂದ ನನಗೆ ಮತ್ತೊಂದು ಬಾರಿ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಆಡಳಿತ ಮಂಡಳಿಗೆ ಹಾಗೂ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುವೆ.

-ತಾತ್ಯಾಸಾಬ್‌ ಅಣ್ಣಾಸಾಬ್‌ ಪಾಟೀಲ ನೂತನ ಅಧ್ಯಕ್ಷರು.ಸಂಘದಲ್ಲಿ ₹16 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ₹10 ಕೋಟಿ ಸಾಲ ವಿತರಿಸಲಾಗಿದೆ. ₹10 ಕೋಟಿ ಠೇವು ಹೊಂದಿದ್ದು, ಸದಸ್ಯರಿಗೆ ಶೇ.25 ರಷ್ಟು ಲಾಭಾಂಶ ಹಂಚಲಾಗಿದ್ದು, ಈ ವರ್ಷ ₹58 ಲಕ್ಷ ಲಾಭವಾಗಿದೆ. ಇಷ್ಟೆಲ್ಲ ಲಾಭವಾಗಲು ಆಡಳಿತ ಮಂಡಳಿಯ ಪಾರದರ್ಶಕ ಆಡಳಿತ, ಶಿಬ್ಬಂದಿ ವರ್ಗದವರ ಸೇವಾನಿಷ್ಠೆ ಹಾಗೂ ಗ್ರಾಹಕರ ಪ್ರಮಾಣಿಕತೆಯೇ ಕಾರಣ.

-ರಾಜೇಂದ್ರ ಕಡೋಲೆ,

ಉಪಾಧ್ಯಕ್ಷರು.