ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ದಾರಿ ತಪ್ಪುತ್ತಿರುವ ಮಕ್ಕಳು
ತಂದೆತಾಯಿಗಳ ಈ ಉದಾಸೀನತೆ ಅಥವಾ ನಂಬಿಕೆಯಿಂದಾಗಿ ಮಕ್ಕಳು ಹಾಳಾಗಲು, ದಾರಿತಪ್ಪಲು ಕಾರಣವಾಗುತ್ತಿದೆ. ಜಿಲ್ಲಾ ಕೇಂದ್ರದ ಪ್ರತಿಷ್ಠಿತ ಶಾಲೆ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಓದಿಗೆ ತಿಲಾಂಜಲಿಯಿಟ್ಟು ಕಾಂಡಿಮೆಂಟುಗಳು, ಗೂಡಂಗಡಿಗಳು, ಕಾಫೀಬಾರ್ಗಳಿಗೆ ಹೋಗಿ ದುಶ್ಚಟ ಗಳಿಗೆ ದಾಸರಾಗಿ, ಅಲ್ಲಯೇ ಹೆಚ್ಚು ಕಾಲ ಕಳೆಯುವ ಮೂಲಕ ಓದನ್ನು ಮರೆತು ಸಮಾಜಘಾತುಕರಾಗಿ ಬದಲಾಗು ತ್ತಿರುವುದು ಆಶ್ಚರ್ಯವಾದರೂ ಸತ್ಯ.ಬೆಳಿಗ್ಗೆಯೇ ಶಾಲೆ-ಕಾಲೇಜಿಗೆ ಹೋಗವುದಾಗಿ ಮನೆಯಲ್ಲಿ ಹೇಳಿ ಬರುವ ಸಾಕಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಚಕ್ಕರ್ ಹೊಡೆದು ನೇರ ಧೂಮಪಾನ ಕೇಂದ್ರಗಳಾದ ಕಾಂಡಿಮೆಂಟ್ಸ್, ಗೂಡಂಗಡಿ ಮತ್ತು ಟೀಸ್ಟಾಲ್ ಗಳು ಗಳಿಗೆ ಬಂದು ಠೀಕಾಣಿ ಹೂಡಿದರೆ ಮತ್ತೆ ಮನೆಗೆ ಹೋಗುವುದು ಸಂಜೆಯೇ. ಅಲ್ಲಿಯವರೆಗೆ ಒಂದು ಕೈಯಲ್ಲಿ ಸಿಗರೇಟು ಹಿಡಿದರೆ, ಮತ್ತೊಂದು ಕೈಯಲ್ಲಿ ಮೊಬೈಲ್ ಹಿಡಿದು,ಅದರಲ್ಲಿ ವಿಡಿಯೋ, ಆನ್ಲೈನ್ ಗೇಮ್ಗಳನ್ನು ಆಡಿಯೋ ಕಾಲಹರಣ ಮಾಡುತ್ತಿದ್ದಾರೆ.
ಸ್ವಸ್ಥ ಸಮಾಜ ನಿರ್ಮಿಸಿಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವೊಂದರಲ್ಲಿಯೇ 300ಕ್ಕೂ ಹೆಚ್ಚು ಕಾಂಡಿಮೆಂಟ್ಸ್, ಕಾಫೀ ಟೀ ಕೇಂದ್ರಗಳಿವೆ. ಇಲ್ಲಿ ತಿನ್ನುವ ಕುಡಿಯುವ ಪದಾರ್ಥಗಳ ಮಾರಾಟಕ್ಕೆ ಮಾತ್ರ ನಗರಸಭೆ ಆರೋಗ್ಯ ಇಲಾಖೆ, ಪರಿಸರ ಇಲಾಖೆ ಅನುಮತಿ ನೀಡಬೇಕು. ಇದನ್ನು ಮೀರಿ ತಂಬಾಕು, ಗಾಂಜಾ ಇತ್ಯಾದಿ ನಿಷೇಧಿತ ಹಾನಿಕಾರಕ ವಸ್ತುಗಳನ್ನು ಮಾರಾಟ ಮಾಡಿದರೆ ಅಂಗಡಿಯನ್ನು ಸೀಜ್ ಮಾಡಬೇಕು. ಆತಂಕಕಾರಿ ಸಂಗತಿಯೆಂದರೆ ಗೂಡಂಗಡಿಗಳಲ್ಲಿ ಗಾಂಜಾ ಮಾರಾಟ ಕೂಡ ನಡೆಯುತ್ತಿದೆ ಎಂಬ ಅನುಮಾನವನ್ನು ಜನಪರ ಸಂಘಟನೆಗಳ ಮುಖಂಡರು ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಕೂಡಲೇ ಕ್ರಮವಹಿಸಿ ಅಕ್ರಮ ದಂಧೆಯನ್ನು ತಡೆಯಬೇಕು. ಇಲ್ಲವಾ ದಲ್ಲಿ ಭವಿಷ್ಯದಲ್ಲಿ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ ಎನ್ನುವುದು ಜನಸಾಮಾನ್ಯರು ನೀಡುವ ಎಚ್ಚರಿಕೆ ಮಾತಾಗಿದೆ.