ದೇವನಹಳ್ಳಿ: ದೇಶದ ಉಜ್ವಲ ಭವಿಷ್ಯ ರೂಪಿಸುವ ಶಕ್ತಿ ಯುವಪಡೆಗಿದ್ದು, ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಶಕ್ತಿ ಶಿಕ್ಷಕರಿಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ ತಿಳಿಸಿದರು.
ಶ್ರೀಕೃಷ್ಣ ಬಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಆರ್.ಬಿ.ದೇಸಾಯಿ ಮಾತನಾಡಿ, ಹಿಂದಿನ ಶಿಕ್ಷಣ ವ್ಯವಸ್ಥೆ ಈಗಿನ ಶಿಕ್ಷಣ ವ್ಯವಸ್ಥೆಗು ಅಜಗಜಾಂತರ ವ್ಯತ್ಯಾಸವಿದೆ. ಕಾಲ ಮುಂದುವರಿದಂತೆ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೈಟೆಕ್ ಆಗಿದ್ದಾರೆ. ವಿದ್ಯಾರ್ಥಿಗಳು ಗುರುಹಿರಿಯರಿಗೆ ಗೌರವ ನೀಡಬೇಕು. ಗುರುಗಳ ಮಾರ್ಗದರ್ಶನ ಪಡೆದರೆ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಲಿದ್ದಾರೆ. ೨೩ ವರ್ಷಗಳ ನಂತರ ವಿದ್ಯಾರ್ಥಿಗಳು ಎಲ್ಲಾ ಗುರುಗಳನ್ನು ಒಂದೆಡೆ ಸೇರಿಸಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಮಾಗಮ ಮಾಡಿರುವುದು ಸಂತೋಷವಾಗಿದೆ. ಇದು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಉಪನ್ಯಾಸಕರನ್ನು ಗೌರವಿಸಿದರು. ಉಪನ್ಯಾಸಕರಾದ ಬಿ.ಎನ್.ಕೃಷ್ಣಪ್ಪ, ವೆಂಕಟೇಶಗೌಡ, ರಾಮಸ್ವಾಮಿ, ಈಶ್ವರಪ್ಪ, ವೈ.ವಿ.ಚಂದ್ರಶೇಖರ್, ಪಾರ್ವತಮ್ಮ, ರಾಘವೇಂದ್ರ ದೇಸಾಯಿ, ಮಂಜುನಾಥ್, ಲಕ್ಷ್ಮೀಕಾಂತ್, ಸಾವಿತ್ರಮ್ಮ ಪ್ರಶಿಕ್ಷಣಾರ್ಥಿಗಳಾದ ವೀಣಾ.ವೈಪಿ, ಸಿದ್ದೇಶ್.ಬಿ.ಎನ್, ದೀಪ.ಡಿ.ಸಿ, ಚನ್ನೇಶಪ್ಪ.ಕೆ.ಎಚ್, ಭಾರತಿ, ಸ್ವಾಮಿ.ಕೆ.ವೈ.ಎಸ್, ಉಮಾ, ಅನಂದ್, ಶ್ರೀಧರ್, ಹನುಮಂತಪ್ಪ.ಡಿ.ಎಂ. ಹರೀಶಕುಮಾರ್.ಕೆ.ಟಿ, ಗೋವಿಂದ.ಬಿ, ಮಮತ, ಪುಷ್ಪ, ಅಶ್ವಿನಿ, ವರಲಕ್ಷ್ಮೀ, ಯೋಗೇಶ್ವರಪ್ಪ, ಕೃಷ್ಣ, ತಿಮ್ಮೇಶ್, ಆನಂದ್, ಶ್ರೀಧರ್, ರಾಮಮೂರ್ತಿ ಸುನಂದ ಮತ್ತಿತರರು ಉಪಸ್ಥಿತರಿದ್ದರು.೩ ದೇವನಹಳ್ಳಿ ಚಿತ್ರಸುದ್ದಿ:೦೧