ಯಡಹಳ್ಳಿಗೆ ತಹಸೀಲ್ದಾರ್‌ ಭೇಟಿ: ಕಾಮಗಾರಿ ಪರಿಶೀಲನೆ

KannadaprabhaNewsNetwork |  
Published : Feb 05, 2024, 01:45 AM IST
(ಫೋಟೋ 4ಬಿಕೆಟಿ5, ಬಾಗಲಕೋಟೆ ತಾಲೂಕಿನ ಯಡಹಳ್ಳಿ ಗ್ರಾಮದ ಅಜಾತ ನಾಗಲಿಂಗೇಶ್ವರ ಮಠಕ್ಕೆ ಬಾಗಲಕೋಟ ತಹಸಿಲ್ದಾರ್ ಅಮರೇಶ ಪಮ್ಮಾರ ಶನಿವಾರ ಬೇಟಿ ನೀಡಿ ದತ್ತಿ ಇಲಾಖೆಯಡಿ ಕೈಗೊಂಡ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು.) | Kannada Prabha

ಸಾರಾಂಶ

ಬಾಗಲಕೋಟೆ: ತಾಲೂಕಿನ ಯಡಹಳ್ಳಿ ಗ್ರಾಮದ ಅಜಾತ ನಾಗಲಿಂಗೇಶ್ವರ ಮಠಕ್ಕೆ ಬಾಗಲಕೋಟೆ ತಹಸೀಲ್ದಾರ್ ಅಮರೇಶ ಪಮ್ಮಾರ ಶನಿವಾರ ಭೇಟಿ ನೀಡಿ ದತ್ತಿ ಇಲಾಖೆಯಡಿ ಕೈಗೊಂಡ ಕಾಮಗಾರಿ ಪರಿಶೀಲನೆ ಮಾಡಿದರು.ಶ್ರೀಮಠದಲ್ಲಿ ಇತ್ತೀಚಿಗೆ ಕೈಗೊಳ್ಳಲಾದ ಧರ್ಮದತ್ತಿ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ ಮಠದ ಪೌಳಿಯ ಕಾರ್ಯ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ತಾಲೂಕಿನ ಯಡಹಳ್ಳಿ ಗ್ರಾಮದ ಅಜಾತ ನಾಗಲಿಂಗೇಶ್ವರ ಮಠಕ್ಕೆ ಬಾಗಲಕೋಟೆ ತಹಸೀಲ್ದಾರ್ ಅಮರೇಶ ಪಮ್ಮಾರ ಶನಿವಾರ ಭೇಟಿ ನೀಡಿ ದತ್ತಿ ಇಲಾಖೆಯಡಿ ಕೈಗೊಂಡ ಕಾಮಗಾರಿ ಪರಿಶೀಲನೆ ಮಾಡಿದರು.

ಶ್ರೀಮಠದಲ್ಲಿ ಇತ್ತೀಚಿಗೆ ಕೈಗೊಳ್ಳಲಾದ ಧರ್ಮದತ್ತಿ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ ಮಠದ ಪೌಳಿಯ ಕಾರ್ಯ ವೀಕ್ಷಿಸಿದರು. ಮುಜರಾಯಿ ಇಲಾಖೆಯಿಂದ ಮಂಜೂರಾದ ಹಣದ ಸಮರ್ಪಕವಾದ ಮಾಹಿತಿ ಪಡೆದು ಕಟ್ಟಡಗಳ ಬಗ್ಗೆ ಅವಲೋಕಿಸಿ ಮಠದಲ್ಲಿ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಿದರು. ಇನ್ನುಳಿದ ಕಾರ್ಯಗಳನ್ನು ಕೂಡಲೇ ಮಾಡಿಕೊಡುವುದಾಗಿ ಭರವಸೆ ನೀಡಿದರು.

ತಹಸೀಲ್ದಾರ್‌ ಅವರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರುದ್ರಪ್ಪ ಮೆಣಸಗಿ, ಗ್ರಾಪಂ ಸದಸ್ಯ ಶಿವಪ್ಪ ಕೋವಳ್ಳಿ, ಮಾಜಿ ಸದಸ್ಯ ಮಹೇಶ ಮೇಟಿ, ಕಂದಾಯ ನಿರೀಕ್ಷಕ ಪ್ರಕಾಶ ನಾಯಕ, ಗ್ರಾಮಲೆಕ್ಕಾಧಿಕಾರಿ ರವಿ ಚಲವಾದಿ, ಗ್ರಾಮದ ಪ್ರಮುಖರಾದ ಹನುಮಂತ ಪಸಂದವರ, ನಾಗೇಶ ನೀಲನ್ನವರ, ಕರಿಯಪ್ಪ ವಾಲಿಕಾರ, ನಾಗಲಿಂಗಪ್ಪ ಕಟಗೇರಿ, ಪರುಶುರಾಮದಲ್ಲಿ ಸೇರಿದಂತೆ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು