ಮಕ್ಕಳಿಗೆ ಶರಣರ ತತ್ವಾದರ್ಶಗಳನ್ನು ತಿಳಿಸಿ: ಅಜೀತ್ ಮನ್ನಿಕೇರಿ

KannadaprabhaNewsNetwork |  
Published : Feb 03, 2025, 12:30 AM IST
ಮೂಡಲಗಿ: ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಜರುಗಿದ ಶರಣ ಮಡಿವಾಳ ಮಾಚಿದೇವರ ಜಯಂತಿಯಲ್ಲಿ ಬಿಇಓ ಅಜೀತ್ ಮನ್ನಿಕೇರಿ ಮಾತನಾಡಿದರು.  | Kannada Prabha

ಸಾರಾಂಶ

ಹನ್ನೆರಡನೆಯ ಶತಮಾನದಲ್ಲಿ ಶರಣರು ಲಿಂಗ ಪೂಜೆ ಮಾಡುತ್ತಿದ್ದ ಹಾಗೆ ಇವತ್ತು ನಾವೆಲ್ಲರೂ ನಮ್ಮ ಮಕ್ಕಳಿಗೆ ಶಿಕ್ಷಣ ಎಂಬ ಲಿಂಗವನ್ನು ಪೂಜಿಸುವ ಜೊತೆಗೆ ಶರಣರ ಬಗ್ಗೆ ತಿಳಿಹೇಳಬೇಕೆಂದು ಬಿಇಒ ಅಜೀತ್ ಮನ್ನಿಕೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಹನ್ನೆರಡನೆಯ ಶತಮಾನದಲ್ಲಿ ಶರಣರು ಲಿಂಗ ಪೂಜೆ ಮಾಡುತ್ತಿದ್ದ ಹಾಗೆ ಇವತ್ತು ನಾವೆಲ್ಲರೂ ನಮ್ಮ ಮಕ್ಕಳಿಗೆ ಶಿಕ್ಷಣ ಎಂಬ ಲಿಂಗವನ್ನು ಪೂಜಿಸುವ ಜೊತೆಗೆ ಶರಣರ ಬಗ್ಗೆ ತಿಳಿಹೇಳಬೇಕೆಂದು ಬಿಇಒ ಅಜೀತ್ ಮನ್ನಿಕೇರಿ ಹೇಳಿದರು.

ಶನಿವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಶರಣ ಮಡಿವಾಳ ಮಾಚಿದೇವರ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಯಾವುದೇ ಒಂದು ಸಮಾಜ ಮುಂದೆ ಬರಲು ಶಿಕ್ಷಣವಂತರಾಗಬೇಕು. ಆ ನಿಟ್ಟಿನಲ್ಲಿ ಮಡಿವಾಳ ಸಮಾಜದವರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿಬೇಕೆಂದರು.

ಹಿರಿಯ ಮುಖಂಡ ಬಸವರಾಜ ಮಡಿವಾಳ, ಮಡಿವಾಳ ಸಮಾಜದ ತಾಲೂಕಾಧ್ಯಕ್ಷ ಶಿವಾನಂದ ಮಡಿವಾಳ ಮಾತನಾಡಿ, ಶರಣರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ತಹಸೀಲ್ದಾರ್ ಕಚೇರಿಯ ಸಿರಸ್ತೇದಾರ ಪರಶುರಾಮ ನಾಯಕ, ತಾಪಂ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನ್ನವರ, ಪಿಎಸ್‍ಐ ಬಿ.ಎಚ್. ಕುಂಬಾರ, ಹೆಸ್ಕಾಂ ಕಚೇರಿಯ ಅಧಿಕಾರಿ ಪರಶುರಾಮ ಚವ್ಹಾಣ್ , ವಸತಿ ನಿಲಯ ಪಾಲಕ ಎಸ್.ಎಸ್. ಸೋರಗಾಂವಿ, ಸಮಾಜದ ಮುಖಂಡರಾದ ಬಸವರಾಜ ಆಗಸರ, ರವಿ ಮಡಿವಾಳರ, ಮಂಜುನಾಥ ಮಡಿವಾಳರ, ಜಗದೀಶ ಮಡಿವಾಳರ, ಶ್ರೀಶೈಲ ಮಡಿವಾಳರ, ಬಸವರಾಜ ಮಡಿವಾಳರ, ಪುಂಡಲೀಕ ಮಡಿವಾಳರ, ಸಂಜು ಮಡಿವಾಳರ, ಹನುಮಂತ ಮಡಿವಾಳರ, ಸುರೇಶ ಮಡಿವಾಳರ, ಸಂತೋಷ ಮಡಿವಾಳ, ಈರಪ್ಪ ಢವಳೇಶ್ವರ, ಗುರುನಾಥ ಗಂಗನ್ನವರ, ಸುರೇಶ ನಾಯಕ, ಸಂಗಪ್ಪ ಕಾಳಿಗುದ್ದಿ ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!