ನಾವು ಯಾವ ದೃಷ್ಟಿಕೋನದಲ್ಲೂ ನೋಡಿದಾಗ 12ನೇ ಶತಮಾನವು ಬೆಳಕಿನ ಯುಗವಾಗಿದೆ

KannadaprabhaNewsNetwork |  
Published : May 22, 2026, 01:15 AM IST
57 | Kannada Prabha

ಸಾರಾಂಶ

ಬಸವಣ್ಣನವರ ಬದುಕಿನ ಕಾಲವೇ ಒಂದು ಅದ್ಭುತ ಕಾಲವಾಗಿದೆ, ಇಂದಿನ ಜನಸಾಮಾನ್ಯರಿಗೆ ಬಸವಣ್ಣನವರ ತತ್ವ ಆದರ್ಶಗಳನ್ನು ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಅದನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಬದುಕು ನಡೆಸಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ರಾವಂದೂರು

ಯಾವ ದೃಷ್ಟಿಕೋನದಲ್ಲೂ ನಾವು ನೋಡಿದಾಗ 12ನೇ ಶತಮಾನವು ಬೆಳಕಿನ ಯುಗವಾಗಿದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಬಸವ ಬಳಗದ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಮತ್ತು ಸಾಹಿತ್ಯವಾಗಿ ಈ ಎಲ್ಲಾ ರಂಗಕ್ಕೂ ಬೆಳಕನ್ನು ನೀಡಿದ ಬಸವಾದಿ ಶರಣರ ಕಾಲವೇ 12ನೇ ಶತಮಾನವಾಗಿದೆ, ಬಸವಣ್ಣನವರ ಬದುಕಿನ ಕಾಲವೇ ಒಂದು ಅದ್ಭುತ ಕಾಲವಾಗಿದೆ, ಇಂದಿನ ಜನಸಾಮಾನ್ಯರಿಗೆ ಬಸವಣ್ಣನವರ ತತ್ವ ಆದರ್ಶಗಳನ್ನು ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಅದನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದರು.

ಬಸಣ್ಣನವರ ತತ್ವ ಆದರ್ಶಗಳನ್ನ ಈಗಿನಿಂದಲೂ ಪ್ರೋತ್ಸಾಹಿಸಿ ಬೆಳೆಸುವುದರಲ್ಲಿ ನಮ್ಮ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿರುತ್ತದೆ ಏಕೆಂದರೆ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವನ್ನು ಕಲಿಸುವುದೇ ತಾಯಿಂದಿರಾಗಿರುತ್ತಾರೆ, ಆದ್ದರಿಂದ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಹಾಗೂ ಶರಣರ ತತ್ವ ಆದರ್ಶಗಳನ್ನು ಬೆಳೆಸುವಲ್ಲಿ ಶಿವಶರಣೆಯರ ಕೊಡುಗೆ ಬಹಳ ಮುಖ್ಯ ಹಾಗೂ ಪ್ರಸ್ತುತ ಪ್ರಪಂಚದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಬಸವಣ್ಣನವರ ತತ್ವ ಆದರ್ಶಗಳೇ ಬಹಳ ಮುಖ್ಯ ಎಂದು ಇಡೀ ವಿಶ್ವವೇ ಇವರನ್ನು ಕೊಂಡಾಡುತ್ತಿದೆ ಎಂದರು.

ಪಾಂಡವಪುರದ ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಬೇರೆ ದೇಶದ ಜನರನ್ನು ನಾವು ಮಂಗನಿಂದ ಮಾನವ ಎಂದು ಕರೆಯುತ್ತೇವೆ. ಆದರೆ ಭಾರತೀಯರನ್ನು ಋಷಿಮುನಿಗಳು ದೇವತೆಗಳ ಸಾಧು ಸಂತರು ಹಾಗೂ ಶಿವಶರಣರು ಅನುಯಾಯಿಗಳು ಆಗಿ ನಾವಿದ್ದೇವೆ, ಅವರ ಸಂತತಿಯೇ ನಾವುಗಳಾಗಿದ್ದೇವೆ, ಆದ್ದರಿಂದಲೇ ಭಾರತವನ್ನು ಸ್ವರ್ಗದ ನಾಡು ಎಂದು 12ನೇ ಶತಮಾನದ ಶಿವಶರಣರು ಬಣ್ಣಿಸಿದ್ದಾರೆ ಎಂದರು.

ಗಾವಡಗೆರೆ ಮಠದ ನಟರಾಜ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಎಲ್ಲ ವರ್ಗದ ಮತ್ತು ಸಮಾಜದವರಿಗೆ ಬಸವಣ್ಣನ ವಿಚಾರಗಳು ಬಹಳ ಅಗತ್ಯತೆ ಇದೆ, ಇದು ಒಂದು ಸಮಾಜಕ್ಕೆ ಮೀಸಲಾಗಿರದೆ ಇಂತಹ ವಿಚಾರಧಾರೆಗಳು ಪ್ರತಿಯೊಂದು ಸಮಾಜಕ್ಕೂ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಶಿವಶರಣರ ಆದರ್ಶಗಳು ಬಹಳ ಮುಖ್ಯವಾಗಿವೆ, ಪ್ರಸ್ತುತ ಜನರು ತಮ್ಮ ಬದುಕನ್ನು ಗೊಂದಲ ಗೂಡಿನಿಂದ ಬದುಕು ನಡೆಸುತ್ತಿದ್ದಾರೆ ಅವರ ನೆಮ್ಮದಿ ಮತ್ತು ಉತ್ತಮ ಬದುಕಿಗೆ ಇಂತಹ ಶಿವಶರಣರ ವಿಚಾರಧಾರೆಗಳು ಬಹಳ ಮುಖ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಾವಂದೂರು ಮುರುಘಮಠದ ಮೋಕ್ಷ ಪತಿ ಸ್ವಾಮೀಜಿ ಮಾತನಾಡಿ, ಕನ್ನಡ ಸಾಹಿತ್ಯವನ್ನು ಇವತ್ತು ಶ್ರೀಮಂತ ಗೊಳಿಸಿದೆ ಎಂದರೆ ಅದಕ್ಕೆ ಮೂಲ ಕಾರಣವೇ ಬಸವಣ್ಣನವರು, 12ನೇ ಶತಮಾನದ ಶಿವಶರಣರ ವಚನಗಳೇ ಮೂಲ ಕಾರಣವಾಗಿದೆ, ಇಡೀ ವಿಶ್ವಕ್ಕೆ ಮೊದಲ ಸಂಸತ್ತನ್ನ ನೀಡಿದ್ದೆ 12ನೇ ಶತಮಾನದ ಬಸವಣ್ಣನವರು ಆದುದರಿಂದ ಇವರ ತತ್ವ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಪಾಲಿಸುವುದರ ಜೊತೆಗೆ ಉತ್ತಮ ಬದುಕಿಗೆ ದಾರಿದೀಪವಾಗಬೇಕು ಎಂದು ತಿಳಿಸಿದರು.

ಗ್ರಾಮದ ಆರ್.ಎನ್. ಪ್ರಭು ಲಂಡನ್ ಕಾನ್ಸಿಸ್ ನಗರದ ಸರ್ಕಾರದ ಗವರ್ನರ್ ನನ್ನ ಮನವಲಸಿ ಏ. 20 ರಂದು ಬಸವ ದಿನ ಎಂದು ಘೋಷಣೆ ಮಾಡುವಲ್ಲಿ ಗ್ರಾಮದ ಯುವಕರ ಶ್ರಮ ಬಹಳ ಮುಖ್ಯ ಎಂದು ಅಭಿನಂದಿಸಿದರು.

ಕೆಂಪೇಗೌಡ ಪ್ರಶಸ್ತಿ ವಿಜೇತ ಪತ್ರಕರ್ತ ಪ್ರವೀಣ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಶ್ರಮಿಸಿದ ದಾನಿಗಳು ಮತ್ತು ಯುವಕರನ್ನು ಅಭಿನಂದಿಸಿದರು.

ಉಕ್ಕಿನ ಕಂತೆ ಮಠದ ಸಾಂಬ ಸದಾಶಿವ ಸ್ವಾಮೀಜಿ ಮಾತನಾಡಿದರು. ಅಂಕನಹಳ್ಳಿ ಮಠದ ವಿಜಯಕುಮಾರ ಸ್ವಾಮೀಜಿ, ದಿಂದಗಾಡು ಮಠದ ನಟರಾಜ ಸ್ವಾಮಿಜಿ, ಮಾದಾಪುರದ ಮಲ್ಲಿಕಾರ್ಜುನ ಸ್ವಾಮೀಜಿ, ಕರ್ಪೂರವಳ್ಳಿ ಮಠದ ಅಭಿನವ ಚಂದ್ರಶೇಖರ ಸ್ವಾಮೀಜಿ, ಕಲ್ಮಟ್ಟದ ಮಹಾಂತ ಸ್ವಾಮೀಜಿ, ತೊರೆನೂರು ಮಲ್ಲೇಶ್ವರ ಸ್ವಾಮೀಜಿ, ತಾಲೂಕು ವೀರಶೈವ ಸಮಾಜದ ಘಟಕದ ಅಧ್ಯಕ್ಷ ಪರಮೇಶ್, ಆರ್.ಎಸ್. ಕುಮಾರ್, ವಿಜಯ್, ಡಾ. ಆರ್.ಡಿ. ಸತೀಶ್ ಕೆ. ಹೊಲದಪ್ಪ, ಆರ್.ಟಿ. ಸತೀಶ್, ಮಾಜಿ ಜಿಪನ್ ಸದಸ್ಯ ಆರ್.ಎಸ್. ಚಿಕ್ಕವೀರಪ್ಪ, ಕೂರ್ಗಲ್ ಶಿವಕುಮಾರ್, ಉಪನ್ಯಾಸಕ ಲಕ್ಷ್ಮಿಕಾಂತ್, ತಾಲೂಕಿನ ವಿವಿಧ ಗಣ್ಯರು, ಬಸವ ಬಳಗದ ಸದಸ್ಯರು, ಬಸವ ಅನ್ಯಾಯಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರಸಭೆ ಅಧ್ಯಕ್ಷರಾಗಿ ಭವ್ಯಾ ಮಂಜುನಾಥ್ ಅವಿರೋಧ ಆಯ್ಕೆ
ಬಿಜೆಪಿ-ಕಾಂಗ್ರೆಸ್‌ ಹೈಡ್ರಾಮ: ಕೈ ಕೈ ಮಿಲಾಯಿಸಿದ ಕಾರ್ಯಕರ್ತರು