ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರಾಧ್ಯಾಪಕ ಪ್ರೊ.ಶಿಂಧೆ ಮಾತನಾಡಿ, ಬಸವಾದಿ ಶಿವಶರಣರು ಮನುಕುಲಕ್ಕೆ ನೀಡಿದ ಶ್ರೇಷ್ಟ ಕೊಡುಗೆಗಳೆಂದರೆ ವಚನಗಳು, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ನೈತಿಕ ತಳಹದಿಯ ಮೇಲೆ ಆದಶ೯ ಸಮಾಜ ನಿಮಿ೯ಸಿಕೊಟ್ಟ ವಚನಕಾರರ ಸಂದೇಶ ನಮ್ಮ ಜೀವನಕ್ಕೆ ದಿವ್ಯ ಔಷಧವಿದ್ದಂತೆ ಎಂದು ಸ್ಮರಿಸಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಮಾತನಾಡಿ, ಹೆಣ್ಣಿನ ಬಗ್ಗೆ ಅಭಿಮಾನದಿಂದ ಧ್ವನಿ ಎತ್ತಿದ ಬಸವಣ್ಣನವರು ಸ್ತ್ರೀ ಸಮಾನತೆ, ಕಾಯಕ, ದಾಸೋಹ ಮತ್ತು ಶ್ರಮ ಸಿದ್ಧಾಂತದ ಮೂಲಕ ವಿಶ್ವ ಸಂವಿಧಾನಕ್ಕೆ ಬಸವಣ್ಣನವರು ನೀಡಿದ ಜೀವನದ ಮೌಲ್ಯಗಳನ್ನು ಅವರ ವಚನಗಳ ಮೂಲಕ ಹಲವಾರು ದೃಷ್ಟಾಂತಗಳನ್ನು ವಿವರಿಸಿದರು. ಅಲ್ಲದೇ,ಇಂದು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.ಸಾಹಿತಿ ಶಿಲ್ಪಾ ಭಸ್ಮೆ ಮಾತನಾಡಿದರು. ಬಸವ ಅಧ್ಯಯನ ಪೀಠದ ಸಂಯೋಜಕ ಡಾ.ರಾಜಕುಮಾರ ಮಾಲಿಪಾಟೀಲ ಹಾಗೂ ಶಿಕ್ಷಕಿ ಶೋಭಾ ಬಡಿಗೇರ ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ ನೇತ್ರಾ ಸ್ವಾಗತಿಸಿದರು. ಲಕ್ಷ್ಮೀ ಪಾಟೀಲ ಪರಿಚಯಿಸಿದರು. ಮುತ್ತಮ್ಮ ನಿರೂಪಿಸಿದರು. ಶೋಭಾ ವಂದಿಸಿದರು. ಎರಡನೇ ವರ್ಷದ ಪ್ರಶಿಕ್ಷಣಾರ್ಥಿಗಳು ಮಹಿಳಾ ಗೀತೆಯನ್ನು ಪ್ರಸ್ತುತ ಪಡಿಸಿದರು. ಸುಮಾರು ಎರಡು ನೂರು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.