ದೊಡ್ಡಬಂಡೆಯ ಚಪ್ಪರಕಲ್ಲು ಮಾಯ!

KannadaprabhaNewsNetwork |  
Published : Jan 13, 2024, 01:31 AM IST
ದೇವನಹಳ್ಳಿಒ ಜಿಲ್ಲಾಧಿಕಾರಿ ಕಚಋಿ ಮುಂಭಾಗದಲ್ಲಿ ಐತಿಹಾಸಿಕವಾಗಿ ಗುರುತಿದಿಕೊಂಡಿರುವ ಬಂಡೆಯ ,ಮೇಲಿನ ಚಪ್ಪರದ ಕಲ್ಲೇ ಕಾಣದಂತಾಗಿದೆ ಖಾಸಗಿ ಶಿಕ್ಷಣ ಸಂ₹ಸ್ಥೆ ಕಾಮಗಾರಿಯಿಂದಾಗಿ | Kannada Prabha

ಸಾರಾಂಶ

ದೇವನಹಳ್ಳಿ: ದೇವನಹಳ್ಳಿ- ದೊಡ್ಡಬಳ್ಳಾಪುರ ರಸ್ತೆಯಲ್ಲಿ ಒಂದು ದೊಡ್ಡ ಬಂಡೆ ಸಿಗುತ್ತದೆ. ಆ ಬಂಡೆಯ ಮೇಲೆ ಒಂದು ಕಾಲದಲ್ಲಿ ಕಾಣ ಸಿಗುತ್ತಿದ್ದುದೇ ಚಪ್ಪರಕಲ್ಲು. ಆದರೆ ಅದೀಗ ಮಾಯವಾಗಿದ್ದು, ಅದನ್ನೀಗ ಉಳಿಸಿಕೊಡಬೇಕೆಂಬುದು ಆ ಭಾಗದ ಗ್ರಾಮಸ್ಥರ ಅಂಬೋಣ.

ದೇವನಹಳ್ಳಿ: ದೇವನಹಳ್ಳಿ- ದೊಡ್ಡಬಳ್ಳಾಪುರ ರಸ್ತೆಯಲ್ಲಿ ಒಂದು ದೊಡ್ಡ ಬಂಡೆ ಸಿಗುತ್ತದೆ. ಆ ಬಂಡೆಯ ಮೇಲೆ ಒಂದು ಕಾಲದಲ್ಲಿ ಕಾಣ ಸಿಗುತ್ತಿದ್ದುದೇ ಚಪ್ಪರಕಲ್ಲು. ಆದರೆ ಅದೀಗ ಮಾಯವಾಗಿದ್ದು, ಅದನ್ನೀಗ ಉಳಿಸಿಕೊಡಬೇಕೆಂಬುದು ಆ ಭಾಗದ ಗ್ರಾಮಸ್ಥರ ಅಂಬೋಣ.

ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಸಮೀಪ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಮತ್ತು ವಿಶ್ವನಾಥಪುರ ಪೊಲೀಸ್‌ ಠಾಣೆಗಳ ಸಮೀಪವೇ ಈ ದೊಡ್ಡಬಂಡೆ ಚಪ್ಪರದಕಲ್ಲು ಕೂಡ ಇದೆ. ಪೊಲೀಸ್‌ ಠಾಣೆ ಹಿಂಭಾಗದ ಪ್ರದೇಶದಲ್ಲಿ ದೊಡ್ಡ ಬಂಡೆಯ ಮೇಲೆ ಕಲ್ಲಿನ ಚಪ್ಪರ ಇರುವುದರಿಂದ ಈ ಪ್ರದೇಶಕ್ಕೆ ಚಪ್ಪರ ಕಲ್ಲು ಎಂದು ಹೆಸರು ಬಂದಿದೆ.

ಡಿಸಿ ಕಚೇರಿ, ಪೊಲೀಸ್‌ ಠಾಣೆಯ ಸಮೀಪವೇ ಸರ್ಕಾರಿ ಸ್ಥಳವೊಂದು ಮಾಯವಾಗಿದೆ ಅಂದರೆ, ಇನ್ನು ಸಾಮಾನ್ಯ ಜನರ ಆಸ್ತಿಪಾಸ್ತಿಗಳ ಕಥೆ ಏನು ಎಂಬುದು ಈ ಭಾಗದ ಗ್ರಾಮಸ್ಥರ ಪ್ರಶ್ನೆ.ಈ ಬಂಡೆಗೆ ಸುಮಾರು 500 ವರ್ಷಗಳ ಹಿಂದೆ ನಾಯಕರೊಬ್ಬರು ಕಲ್ಲಿನ ಚಪ್ಪರ ಕಟ್ಟಿಸಿದ್ದರು ಎಂಬ ಪ್ರತೀತಿ ಇದೆ. ಅದಕ್ಕೊಂದು ಇತಿಹಾಸವೇ ಇದೆ. ಇತ್ತೀಚಿನ ದಿನಗಳಲ್ಲಿ ಈ ಬಂಡೆಯ ಮೇಲಿರುವ ಚಪ್ಪರ ಕಾಣದಂತಾಗಿದೆ. ಕಾರಣ ಈ ಪ್ರದೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯವರು ಸರ್ಕಾರಿ ಜಮೀನನ್ನು ಅಲ್ಲದೆ ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣಕ್ಕೆ ಕೈ ಹಾಕಿದ್ದಾರೆನ್ನಲಾಗಿದೆ.

ಶಿಕ್ಷಣ ಸಂಸ್ಥೆಯವರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಈಗಾಗಲೇ ನೋಟಿಸ್‌ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಭಾಗದ ರೈತರು ತಮ್ಮ ಕೃಷಿ ಜಮೀನುಗಳಿಗೆ ಹೋಗಲಾಗುತ್ತಿಲ್ಲ. ದಾರಿಯೇ ಇಲ್ಲದಂತೆ ಸ್ಥಳ ಒತ್ತುವರಿ ಮಾಡಿಕೊಳ್ಳಲಾಗಿದೆ. ಆದ್ದರಿಂದ ಈ ಕೂಡಲೇ ಅತಿಕ್ರಮಣಕಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್‌ಪಿಜಿ ಪೂರೈಕೆ ಸುಧಾರಣೆ: ಸಪ್ಲೈ ಶೇ.20ರಷ್ಟು ಏರಿಕೆ
ಬಾಗಲಕೋಟೆ, ದಾವಣಗೆರೆ ಕ್ಷೇತ್ರಕ್ಕೆ ಏ.9ಕ್ಕೆ ಉಪಸಮರ