ಕನ್ನಡಪ್ರಭ ವಾರ್ತೆ ಬೆಳಗಾವಿ
1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 39ನೇ ಅಧಿವೇಶನ ನಡೆದ ಸ್ಥಳವಾದ ಬೆಳಗಾವಿ ಟಿಳಕವಾಡಿಯಲ್ಲಿನ ವೀರಸೌಧಕ್ಕೆ ಭೇಟಿ ನೀಡಿ ಗಾಂಧೀಜಿ ಪುತ್ಥಳಿ ಅನಾವರಣ, ನವ ಸತ್ಯಾಗ್ರಹ ಬೈಠಕ್ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದರು. ಅಂದಿನ ಅಧಿವೇಶನದ ವಿಶೇಷತೆಯಲ್ಲೊಂದಾದ ಕಾಂಗ್ರೆಸ್ ಬಾವಿ ಎಂದೇ ಈಗಲೂ ಜನಮಾನಸದಲ್ಲಿ ಸ್ಮರಣೀಯವಾಗಿ ಉಳಿದ ಪಂಪಾ ಸರೋವರದ ವೀಕ್ಷಣೆ ನಡೆಸಿದರು. ಬಳಿಕ ವೀರಸೌಧ ಒಳಾಂಗಣದಲ್ಲಿ ಹಾಕಿರುವ 39ನೇ ರಾಷ್ಟ್ರೀಯ ಕಾಂಗ್ರೆಸ್ ಮಹಾಸಭೆಯ ಛಾಯಾಚಿತ್ರಗಳನ್ನು ವೀಕ್ಷಿಸಿದರು. ಇದೆ ವೇಳೆ ಸಚಿವರು, ಸಂಸದರು, ಶಾಸಕರು ಮುಖ್ಯಮಂತ್ರಿಗಳೊಂದಿಗೆ ಗ್ರೂಪ್ ಫೋಟೊ ತೆಗೆಯಿಸಿಕೊಂಡರು.
ಈ ವೇಳೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ಸಚಿವರಾದ ಡಾ.ಜಿ.ಪರಮೇಶ್ವರ, ಹೆಚ್.ಸಿ. ಮಹಾದೇವಪ್ಪ, ಲಕ್ಷ್ಮೀ ಹೆಬ್ಬಾಳಕರ, ಮುಖಂಡರಾದ ಡಿ.ಕೆ.ಸುರೇಶ, ವಾರ್ತಾ ಇಲಾಖೆಯ ಆಯುಕ್ತ ಹೇಮಂತ ನಿಂಬಾಳ್ಕರ್ ಮತ್ತಿತರರು ಉಪಸ್ಥಿತರಿದ್ದರು.