ಶೋಷಿತರ ಬದುಕಿನ ದಿಕ್ಕು ಬದಲಿಸಿದ್ದು ಸಂವಿಧಾನ: ಡಾ.ಜಿ.ಪರಮೇಶ್ವರ್‌

KannadaprabhaNewsNetwork |  
Published : Aug 18, 2025, 12:00 AM IST
ಸಂಸದರಾಗಿ ನೋಡುವ ಬದಲು ಮಹಾರಾಜರೆಂದೇ  | Kannada Prabha

ಸಾರಾಂಶ

ಅಂಬೇಡ್ಕರ್ ಸಂವಿಧಾನ ಕೊಡದಿದ್ದರೆ ಕೋಟಿ ಕೋಟಿ ಜನ ಬಡತನ ಶೋಷಣೆಯಲ್ಲಿ ನರಳಬೇಕಾಗಿತ್ತು. ವೇದಿಕೆಯಲ್ಲಿ ಕುಳಿತವರು ಕೂಡ ಕೂಲಿ ಮಾಡಬೇಕಿತ್ತು ಎಂದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ನೊಂದವರು ಮತ್ತು ಶೋಷಿತರ ಬದುಕಿನ ದಿಕ್ಕನ್ನೇ ಬದಲಿಸಿದ್ದು ಸಂವಿಧಾನ ಮತ್ತು ಶಿಕ್ಷಣ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಅಭಿಪ್ರಾಯಪಟ್ಟರು.

ತಾಲೂಕಿನ ಬೆಂಡರವಾಡಿಯಲ್ಲಿ ನಡೆದ ಡಾ.ಜಿ. ಪರಮೇಶ್ವರ 75ನೇ ನೆನಪಿನ ಅಮೃತ ಮಹೋತ್ಸವ ಉದ್ಘಾಟನೆ, ಶಿಕ್ಷಣ ಭೀಷ್ಮ ಎಚ್.ಎಂ.ಗಂಗಾಧರಯ್ಯ ಪ್ರತಿಮೆ ಅನಾವರಣ, ಮಹಿಳಾ ಗೃಹ ಕೈಗಾರಿಕಾ ಘಟಕ ನೂತನ ಕಟ್ಟಡ ಉದ್ಘಾಟನೆ, ಡಾ.ಜಿ.ಪರಮೇಶ್ವರ್ ಸಾಲುಮರದ ರಸ್ತೆ ನಾಮಕರಣ, ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇದಕ್ಕಾಗಿಯೇ ದೇವರೇ ಅಂಬೇಡ್ಕರರನ್ನು ಭೂಮಿಗೆ ಕಳುಹಿಸಿದ್ದಾನೆ ಎಂದೆನಿಸುತ್ತಿದೆ ಎಂದರು.

ಸಮಾನತೆ, ಭಾತೃತ್ವದ ವಿಷಯವನ್ನು ಅಂಬೇಡ್ಕರ್ ಸಂವಿಧಾನದ ಮೊದಲ ಪುಟದಲ್ಲೇ ಹೇಳಿದ್ದಾರೆ. ಅಂಬೇಡ್ಕರ್ ಸಂವಿಧಾನ ಕೊಡದಿದ್ದರೆ ಕೋಟಿ ಕೋಟಿ ಜನ ಬಡತನ ಶೋಷಣೆಯಲ್ಲಿ ನರಳಬೇಕಾಗಿತ್ತು. ವೇದಿಕೆಯಲ್ಲಿ ಕುಳಿತವರು ಕೂಡ ಕೂಲಿ ಮಾಡಬೇಕಿತ್ತು ಎಂದರು.

ಸಂವಿಧಾನ, ಶಿಕ್ಷಣ ನಮ್ಮನ್ನು ಬದಲಿಸಿದೆ. ಶಿಕ್ಷಣದಿಂದ ಎಲ್ಲರಿಗೂ ಅನುಕೂಲ ಆಗಿದೆ. ರಾಜಕೀಯದಲ್ಲಿರುವ ಎಲ್ಲರಿಗೂ ಪಕ್ಷ ನಿಮಿತ್ತ. ಬಡವರನ್ನು ಮೇಲೆತ್ತುವ ಕೆಲಸಕ್ಕೆ ಯಾವುದು ಅಡ್ಡಿಯಾಗಬಾರದು ಎಂದರು.

ವಿಶ್ವ ಮಟ್ಟದಲ್ಲಿ ಕೀರ್ತಿ ಗಳಿಸಿದ ಡಾಕ್ಟರ್, ಇಂಜಿನಿಯರ್ ನಮ್ಮ ದೇಶದವರೇ ಆಗಿದ್ದಾರೆ. ನಾನು ಸಾಮಾನ್ಯ ಕುಟುಂಬದ ಹಿನ್ನೆಲೆಯವನಾಗಿದ್ದು, ನನ್ನ ತಂದೆ ಗಂಗಾಧರಯ್ಯ ವಿನೋಬಾ ಭಾವೆ, ಅಂಬೇಡ್ಕರ್ ಇತರೆ ಮಹನೀಯರ ಪ್ರಭಾವಕ್ಕೆ ಒಳಗಾಗಿ ಸಾಧನೆ ಮಾಡಿದರು. ನನ್ನ ಮುತ್ತಾತ ಗಂಗಮರಿಯಪ್ಪ ಮೈಸೂರು ಸಂಸ್ಥಾನದಲ್ಲಿ ಹವಾಲ್ದಾರ್ ಆಗಿದ್ದರು ಎಂದರು.

ಜನರಿಗಾಗಿ ನಾವು ಎಂದು ಹೇಳಿದ ಮೊದಲ ಸಂಸ್ಥಾನ ಮೈಸೂರು, ಬಡವರಿಗೆ ಸ್ವಾಭಿಮಾನ ಬದುಕು ಕಟ್ಟಿಕೊಟ್ಟಿದ್ದಾರೆ. ಅಂಬೇಡ್ಕರ್ ಕೊಡುವ ಮೊದಲೇ ಮೈಸೂರು ಸಂಸ್ಥಾನ ಸಮಾನತೆ ಕೊಟ್ಟಿದೆ. ಹೀಗಾಗಿ ಸೂರ್ಯ ಚಂದ್ರ ಇರುವವರೆಗೂ ಸ್ಮರಿಸಬೇಕು ಎಂದರು.

ಬೆಂಡರವಾಡಿಯಲ್ಲಿ ನಡೆದ ಕಾರ್ಯಕ್ರಮ ನನ್ನ ಹೃದಯ ಮತ್ತು ಮನಸ್ಸಿಗೆ ತಟ್ಟಿದೆ. ಹೀಗಾಗಿ ಮಹಿಳಾ ಕೈಗಾರಿಕೆ ಮತ್ತು ಗ್ರಂಥಾಲಯಕ್ಕೆ 10 ಲಕ್ಷ ಕೊಡುಗೆ ನೀಡುವುದಾಗಿ ಘೋಷಣೆ ಮಾಡಿದರು. ಶಿಕ್ಷಣ ಭೀಷ್ಮ ಎಂದು ನನ್ನ ತಂದೆ ಬಗ್ಗೆ, ಸವ್ಯಸಾಚಿ ಪರಮೇಶ್ವರ ಎಂದು ನನ್ನ ಬಗ್ಗೆ ಪುಸ್ತಕ ಬರೆಯುವ ಮೂಲಕ ಸಮಾಜಕ್ಕೆ ನಮ್ಮ ಬಗ್ಗೆ ತಿಳಿಸಿಕೊಟ್ಟ ಮಹದೇವಭರಣಿ ನನ್ನ ಕಿರಿಯ ಸಹೋದರ ಎಂದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಬಂಡೀಪುರ ಮತ್ತು ಗುಂಡ್ಲುಪೇಟೆ ಹಸಿರಿಗೆ ಹೆಸರಾಗಿದೆ. ತೆರಕಣಾಂಬಿ, ಹಂಗಳ ಮತ್ತು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೂ ಮೈಸೂರು ರಾಜಮನೆತನಕ್ಕೂ ಅವಿನಭಾವ ಸಂಬಂಧವಿದೆ. ಹೀಗಾಗಿ ಕರೆಯದಿದ್ದರೂ ನಾನು ಇಲ್ಲಿಗೆ ಬಂದು ಹೋಗುತ್ತೇನೆ. ಜಿ.ಪರಮೇಶ್ವರ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಮೂಲಕ ಶಿಕ್ಷಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಇವರ ಸೇವೆ ಈಗ ತುಮಕೂರಿನ ಜತೆಗೆ ಗುಂಡ್ಲುಪೇಟೆಗೂ ವಿಸ್ತರಣೆ ಆಗಿರುವುದು ಹೆಮ್ಮೆಯ ವಿಷಯ ಎಂದರು.

ಆಧುನಿಕ ಜೀವನದ ಜೊತೆ ಜೊತೆಗೆ ವನ್ಯಜೀವಿಗಳ ಸಂರಕ್ಷಣೆ ಆಗಬೇಕು ಎಂದು ಇದಕ್ಕಾಗಿ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಯೋಚನೆ ಮಾಡಲಾಗುತ್ತಿದೆ. ವಿಷಯವನ್ನು ಎರಡು ಸಂಸತ್‌ನಲ್ಲಿ ಪ್ರಸ್ತಾಪಿಸಿದ್ದು, ಕೇಂದ್ರ ಸಚಿವ ಭೂಪೇಂದ್ರ ಯಾದವ್ ನಮ್ಮ ಪರ ನಿಲ್ಲುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ನಿವೃತ್ತ ಐಎಫ್‌ಎಸ್ ಅಧಿಕಾರಿ ಡಾ.ರಾಜು ಸಾವಿರ ಹೊಂಗೆ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು.

ಇದೇ ಸಮಾರಂಭದಲ್ಲಿ ಪರಿಸರ ತಜ್ಞ ಸಂಜಯ್ ಗುಬ್ಬಿ, ವನ್ಯಜೀವ ತಜ್ಞರಾದ ಕೃಪಾಕರ, ಸೇನಾನಿ ಮತ್ತು ಸಂಜಯ್ ಗುಬ್ಬಿ, ಚಲನಚಿತ್ರ ಸಾಹಿತಿ ಡಾ.ವಿ.ನಾಗೇಂದ್ರಪ್ರಸಾದ್ ಇನ್ನೂ ಹಲವು ಸಾಧಕರನ್ನು ಸನ್ಮಾನಿಸಲಾಯಿತು. ಸಾಹಿತಿ ನಾಗೇಶ್‌ಸೋಸಲೆರ ಸಾಹಿತ್ಯ ಮತ್ತು ನಿರ್ಮಾಣದ ಡಾ.ಜಿ.ಪರಮೇಶ್ವರ ಧ್ವನಿಸುರುಳಿ ಬಿಡುಗಡೆ ಮಾಡಲಾಯಿತು.

ಹನೂರು ಜೇತವನದ ಮನೋರಖ್ಖಿತ ಭಂತೇಜಿ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಗುಲ್ಬರ್ಗ ಕನ್ನಡ ವಿವಿ ಪ್ರಾಧ್ಯಾಪಕ ಡಾ.ಎಚ್.ಟಿ.ಪೋತೆ, ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕ ಭಾಗ್ಯವಾನ್, ಸಿದ್ದಾರ್ಥ ವಿವಿ ಮೌಲ್ಯಮಾಪನ ಕುಲಸಚಿವ ಡಾ.ಜಿ.ಗುರುಶಂಕರ್, ಜಾರಿ ನಿರ್ದೇಶನಾಲಯ ನಿರ್ದೇಶಕ ಆನಂದ್‌ಕುಮಾರ್, ಎಸ್ಪಿ ಡಾ.ಬಿ.ಟಿ.ಕವಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿ ನಿರ್ದೇಶಕಿ ಡಾ.ಲಕ್ಷ್ಮಮ್ಮ, ಜನಪದ ಕಲಾವಿದ ಮಳವಳಿಮಹದೇವಸ್ವಾಮಿ, ನಿವೃತ್ತ ಪ್ರಾಧ್ಯಾಪಕ ಮತ್ತು ಕಾರ್ಯಕ್ರಮಗಳ ಆಯೋಜಕ ಪ್ರೊ.ಮಹದೇವ್‌ಭರಣಿ ಹಾಜರಿದ್ದರು.

ಸಿಎಚ್‌ಎನ್೧೭ಜಿಪಿಟಿ೧

ಗುಂಡ್ಲುಪೇಟೆ ತಾಲೂಕಿನ ಬೆಂಡರವಾಡಿಯಲ್ಲಿ ನಡೆದ ಡಾ.ಜಿ.ಪರಮೇಶ್ವರ-75 ನೆನಪಿನ ಉತ್ಸವ ಕಾರ್ಯಕ್ರಮವನ್ನು ಗೃಹ ಸಚಿವ ಜಿ.ಪರಮೇಶ್ವರ ಉದ್ಘಾಟಿಸಿದರು.

.. ಬಾಕ್ಸ್‌----

ಸಂಸದರಾಗಿ ನೋಡುವ ಬದಲು ಮಹಾರಾಜರೆಂದೇ ನೋಡುತ್ತೇನೆ

ಗುಂಡ್ಲುಪೇಟೆ : ಮೈಸೂರು ಯಧುವಂಶದ ಕೃಷ್ಣದತ್ತ ಚಾಮರಾಜ ಯದುವೀರ್ ಒಡೆಯರನ್ನು ನಾನು ಸಂಸದರಾಗಿ ನೋಡುವ ಬದಲು ಮಹಾರಾಜರೆಂದೇ ನೋಡುತ್ತೇನೆ. ಮೈಸೂರು ಸಂಸ್ಥಾನದ ಬಗ್ಗೆ ಮಾತನಾಡಲು ನಾನು ಚಿಕ್ಕವ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಯಕೆ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳಗಾವಿ ಅಧಿವೇಶನಕ್ಕೆ ಪೊಲೀಸರ ಸರ್ಪಗಾವಲು
ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ