ಕನ್ನಡಪ್ರಭ ವಾರ್ತೆ ಶಿರಸಿ
ಸೋಮವಾರ ನಗರದ ರಂಗಧಾಮದಲ್ಲಿ ಬೆಂಗಳೂರಿನ ಆಲ್ ಯೂನಿಫಾರ್ಮ್ ಟ್ರೈನಿಂಗ್ ಅಕಾಡೆಮಿ ಮತ್ತು ಭಾರತ್ ಭಾರತಿ ಟ್ರಸ್ಟ್ ಸಹಯೋಗದಲ್ಲಿ ಶಿರಸಿಯ ನಿವೃತ್ತ ಸೈನಿಕ ತಂಡದಿಂದ ಏರ್ಪಡಿಸಲಾದ ಅಗ್ನಿವೀರ್ ಆಕಾಂಕ್ಷಿಗಳಿಗೆ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಹೊಟ್ಟೆಪಾಡಿಗಾಗಿ ಸೈನ್ಯಕ್ಕೆ ಬರಬಾರದು. ದೇಶದ ಭದ್ರತೆ ಹಾಗೂ ಚಿಂತನೆಯನ್ನಿಟ್ಟುಕೊಂಡು ದೇಶ ಸೇವೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ದೇಶದಲ್ಲಿ ಜನಸಂಖ್ಯೆ ಕಡಿಮೆ ಇಲ್ಲ. ಒಳ್ಳೆಯ ಅವಕಾಶ ಬಳಸಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಸಬಲರಾಗಬೇಕಾದರೆ ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು. ಉತ್ತರಭಾರತದ ಪ್ರತಿ ಕುಟುಂಬದಲ್ಲಿ ಸೈನಿಕರನ್ನು ಕಾಣುತ್ತೇವೆ. ಜವಾಬ್ದಾರಿ ಅರಿತು ಕೆಲಸ ಮಾಡಿರೆ ವಿಫುಲ ಅವಕಾಶವಿದೆ. ದಕ್ಷಿಣ ಭಾರತದವರು ಸೈನ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳಬೇಕು ಎಂಬ ಉದ್ದೇಶದಿಂದ ನಿವೃತ್ತ ಸೈನಿಕರ ತಂಡವು ನಡೆಸುತ್ತಿರುವ ಪ್ರಯತ್ನ ಶ್ಲಾಘನೀಯ ಎಂದರು.ದೇಶದ ಗಡಿಭಾಗದ ರಾಜ್ಯದಲ್ಲಿ ಮಾದಕ ದ್ರವ್ಯ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಉತ್ತರ ಭಾರತದ ಯುವಕರನ್ನು ನಿರ್ವಿರ್ಯರನ್ನಾಗಿ ಮಾಡಲ ಸಂಚು ವಿರೋಧಿಗಳಿಂದ ನಡೆಯುತ್ತಿದೆ. ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ನಮ್ಮ ದೇಶವನ್ನು ಆಳ್ವಿಕೆ ನಡೆಸಿದ್ದಾರೆ. ಆದ್ದರಿಂದ ನಮ್ಮ ಜಗಳದಿಂದ ಮೂರನೇ ವ್ಯಕ್ತಿ ಲಾಭ ಪಡೆಯದಂತೆ ನಾವು ಎಚ್ಚರಿಕೆಯಿಂದ ಇರಬೇಕು. ಸೈನ್ಯದಲ್ಲಿ ವಿಫುಲ ಅವಕಾಶವಿದೆ. ಅಗ್ನಿವೀರಕ್ಕೆ ಸೇರಿದವರು ಮುಂದೆ ಅಧಿಕಾರಿಗಳಾಗಿ ಮುಂದುವರೆಯಬಹುದು. ಶಿರಸಿಯಲ್ಲಿ ತರಬೇತಿ ಶಿಬಿರ ಆಯೋಜಿಸಿರುವುದು ಹೆಮ್ಮೆಯ ವಿಷಯ.
ನಿವೃತ್ತ ಸೈನಿಕ, ಭಾರತ ಭಾರತಿ ಟ್ರಸ್ಡ್ ಬೆಂಗಳೂರು ಘಟಕದ ಅಧ್ಯಕ್ಷ ಮೇಜರ್ ಗಣಪತಿ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.