ಶಶಿಕಾಂತ ಮೆಂಡೆಗಾರ
ಒಂದೆಡೆ ಗುಂಡಿನ ಸದ್ದು, ಮತ್ತೊಂದೆಡೆ ಕಳ್ಳರ ಕಾಟ. ಇನ್ನೊಂದೆಡೆ ಈ ಬಿಸಿಗಾಳಿಯ ಧಗೆಯಿಂದ ಗುಮ್ಮಟ ನಗರಿ ಜನತೆ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಈ ಬಾರಿ ಕಳೆದ ನಾಲ್ಕು ದಿನಗಳಿಂದ ಆರಂಭವಾಗಿರುವ ಮಿತಿಮೀರಿದ ಬಿಸಿಲಿನಿಂದಾಗಿ ಜಿಲ್ಲೆಯ ಜನರು ಶಾಕ್ಗೆ ಒಳಗಾಗಿದ್ದಾರೆ. ಅವಧಿಗೂ ಮುನ್ನವೇ ಇಷ್ಟೊಂದು ಬಿಸಿಲು ತಲೆ ಸುಡುತ್ತಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ತಾಪಮಾನ ಏರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಿಸಿಲಿನ ರಕ್ಷಣೆಗೆ ನಾನಾ ಕಸರತ್ತು:ವಿಜಯಪುರ, ರಾಯಚೂರು, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಬೇಸಿಗೆಗೂ ಮುನ್ನವೇ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲಿನ ತಾಪಮಾನ (ಉಷ್ಣಾಂಶ) ಆಗಮಿಸಿದೆ. ಬೆಳಗ್ಗೆ 8ಕ್ಕೆ ಶುರುವಾಗುವ ಬಿಸಿಲು ಸಂಜೆ 6 ಗಂಟೆಯಾದರೂ ಮೈ ಸುಡುತ್ತಿದೆ. ಹೀಗಾಗಿ ಬಿಸಿಲಿನಿಂದ ಪಾರಾಗಲು ಮಧ್ಯಾಹ್ನದ ವೇಳೆ ಶ್ರೀಮಂತರು ಎಸಿ, ಕೂಲರ್ಗಳ ಮೊರೆ ಹೋದರೆ ಬಡವರು, ಮಧ್ಯಮ ವರ್ಗದವರು ಉದ್ಯಾನವನ ಮೊರೆ ಹೋಗಿದ್ದಾರೆ. ಇನ್ನೊಂದೆಡೆ ತಂಪು ಪಾನೀಯಗಳು, ಕಲ್ಲಂಗಡಿ ಹಣ್ಣಿನ ಸೇವನೆಗೆ ಮುಂದಾಗಿದ್ದಾರೆ.
ರಾಜ್ಯ ಹವಾಮಾನ ಇಲಾಖೆಯಿಂದ ಬಿಡುಗಡೆಯಾದ ಗರಿಷ್ಟ ಉಷ್ಣಾಂಶ ಮಾಹಿತಿ ಎಲ್ಲರಿಗೂ ಶಾಕ್ ನೀಡಿದೆ. ಫೆ.19ರಂದು ಜಿಲ್ಲೆಯ ಚಡಚಣ ಹೋಬಳಿಯಲ್ಲಿ 39.1 ಡಿ. ಉಷ್ಣಾಂಶ ದಾಖಲಾಗಿದೆ. ರಾಯಚೂರು ಜಿಲ್ಲೆಯ ಕಲ್ಲೂರ ಹೋಬಳಿಯಲ್ಲಿ 39.8 ಡಿಗ್ರಿ, ಹಡಗನಹಾಳ ಹಾಗೂ ಹುಡಾ ಹೋಬಳಿಗಳಲ್ಲಿ 39 ಡಿಗ್ರಿ ಹಾಗೂ ಗುರಗುಂಟಾ ಹೋಬಳಿಯಲ್ಲಿ 39.4 ಡಿಗ್ರಿ ತಾಪಮಾನ ದಾಖಲಾಗಿದೆ.
ಫೆಬ್ರುವರಿ ಕೊನೆಯಲ್ಲಿ ಏರಲಿದೆ ತಾಪಮಾನ:
ಎಲ್ಲೆಲ್ಲಿ ಎಷ್ಟೆಷ್ಟು ಸರಾಸರಿ ತಾಪಮಾನ?:
ಬಿಸಿಲಿನ ರಕ್ಷಣೆಗೆ ಸಲಹೆಗಳು
ದಿನೇದಿನೇ ಬಿಸಿಲು ಹೆಚ್ಚಾಗುತ್ತಿರುವುದರಿಂದ ವೃದ್ಧರು, ಮಕ್ಕಳು ಹೆಚ್ಚಿನ ಜಾಗೃತಿ ವಹಿಸಬೇಕಿದೆ. ಈಗಾಗಲೇ ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಮೇಲ್ವಿಚಾರಣೆ ಕೇಂದ್ರ ಹಾಗೂ ಹವಾಮಾನ ಇಲಾಖೆಗಳಿಂದ ಎಚ್ಚರಿಕೆಗಳು ಬರುತ್ತಲಿವೆ. ಜಿಲ್ಲೆಯ ಜನರು ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಹೊರಗೆ ಬಾರದೆ ಬೆಳಗ್ಗೆ ಹಾಗೂ ಸಾಯಂಕಾಲ ಮಾತ್ರ ತಮ್ಮ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ತೀರ ಅನಿವಾರ್ಯವಿದ್ದಾಗ ಮಾತ್ರ ಮುಂಜಾಗ್ರತಾ ಕ್ರಮಗಳೊಂದಿಗೆ ಮಧ್ಯಾಹ್ನ ಹೊರಗೆ ಬರಬೇಕು.