ಪರಿಸರವು ನಮ್ಮ ಗ್ರಹದ ಜೀವಾಧಾರಕ ವ್ಯವಸ್ಥೆ: ಮಾದೇವ ನಾಯ್ಕ

KannadaprabhaNewsNetwork |  
Published : Jul 16, 2026, 02:45 AM IST
ಬ್ಯಾಡಗಿ ತಾಲೂಕಿನ ಮಾಸಣಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಮಾದೇವ ನಾಯ್ಕ ಮಾತನಾಡಿದರು. | Kannada Prabha

ಸಾರಾಂಶ

ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಬ್ಯಾಡಗಿ: ಪರಿಸರವು ನಮ್ಮ ಗ್ರಹದ ಜೀವಾಧಾರಕ ವ್ಯವಸ್ಥೆಯಾಗಿದ್ದು, ಆದಾಗ್ಯೂ, ತ್ವರಿತ ಕೈಗಾರಿಕೀಕರಣ, ನಗರೀಕರಣ ಮತ್ತು ಸಮರ್ಥನೀಯವಲ್ಲದ ಮಾನವ ಚಟುವಟಿಕೆ ಇಂತಹ ಸೂಕ್ಷ್ಮ ವ್ಯವಸ್ಥೆಯನ್ನು ಹಾಳು ಮಾಡುತ್ತಿವೆ ಎಂದು ಯೋಜನಾಧಿಕಾರಿ ಮಾದೇವ ನಾಯ್ಕ ಖೇದ ವ್ಯಕ್ತಪಡಿಸಿದರು.

ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನೆಡುವ ಕಾರ್ಯಕ್ರಮನ್ನುದ್ದೇಶಿಸಿ ಅವರು ಮಾತನಾಡಿದರು. ಎಲ್ಲ ಜೀವಿಗಳನ್ನು ಉಳಿಸಿಕೊಳ್ಳುವ ಅಗತ್ಯ ಸಂಪನ್ಮೂಲಗಳಾದ ಗಾಳಿ, ನೀರು, ಮಣ್ಣು ಮತ್ತು ಸೂರ್ಯನ ಬೆಳಕು ನಮಗೆ ಉಚಿತವಾಗಿ ದೊರೆಯುತ್ತಿವೆ. ಆದರೆ ಹವಾಮಾನ ಬದಲಾವಣೆ, ಅರಣ್ಯನಾಶ ಮತ್ತು ಪ್ಲಾಸ್ಟಿಕ್ ಮಾಲಿನ್ಯದಂತಹ ತುರ್ತು ಬಿಕ್ಕಟ್ಟುಗಳು ವಿಶ್ವಾದಾದ್ಯಂತ ಪರಿಸರ ವ್ಯವಸ್ಥೆಗಳ ಉಳಿವಿಗೆ ಅಪಾಯವನ್ನುಂಟು ಮಾಡುತ್ತಿವೆ ಎಂದರು.

ದಾನದ ಐಚ್ಛಿಕ ಕ್ರಿಯೆಯಲ್ಲ: ಪರಿಸರ ಉಳಿಸುವುದು ಇನ್ನು ಮುಂದೆ ದಾನದ ಐಚ್ಛಿಕ ಕ್ರಿಯೆಯಲ್ಲ, ಮಾನವ ಕುಲದ ಉಳಿವಿಗೆ ತುರ್ತು ಅವಶ್ಯಕತೆಯಾಗಿದೆ. ಕೈಗಾರಿಕಾ ತ್ಯಾಜ್ಯ, ಕೃಷಿ ಹರಿವು ಮತ್ತು ಬಳಕೆ ಮಾಡಿದ ಲಕ್ಷಾಂತರ ಟನ್‌ ಪ್ಲಾಸ್ಟಿಕ್‌ಗಳು ನಮ್ಮ ಸಮುದ್ರ ಮತ್ತು ನದಿಗಳನ್ನು ಉಸಿರುಗಟ್ಟಿಸುತ್ತಿವೆ. ಇಂಧನಗಳನ್ನು ಸುಡುವುದರಿಂದ ಇಂಗಾಲದ ಡೈಆಕ್ಸೈಡ್‌ನಂತಹ ಹಸಿರುಮನೆ ಅನಿಲ ಬಿಡುಗಡೆಯಾಗುತ್ತಿದೆ ಎಂದರು.

ಜೀವ ವೈವಿಧ್ಯತೆಯ ನಷ್ಟ: ಅನಿಯಂತ್ರಿತ ಅರಣ್ಯನಾಶ ಕೃಷಿ ಮತ್ತು ಮರ ಕಡಿಯುವಿಕೆಗೆ ಪ್ರಮುಖವಾದ ಕಾಡುಗಳನ್ನು ತೆರವುಗೊಳಿಸುತ್ತದೆ. ಇದು ನೈಸರ್ಗಿಕ ಆವಾಸಸ್ಥಾನಗಳನ್ನು ನಾಶ ಪಡಿಸುತ್ತದೆ ಮತ್ತು ಅಸಂಖ್ಯಾತ ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ಅಳಿವಿನತ್ತ ತಳ್ಳುತ್ತದೆ. ಕಾರಣ ನಾವೆಲ್ಲರೂ ಸಾಮೂಹಿಕ ಜವಾಬ್ದಾರಿ ತೋರುವ ಮೂಲಕ ಚೇತರಿಕೆಗೆ ಕಾರ್ಯಸಾಧ್ಯ ಪರಿಹಾರಗಳನ್ನು ಕಂಡುಕೊಳ್ಳೋಣ. ಮನೆಯಲ್ಲಿ ಹಣ್ಣಿನ ಗಿಡ, ಹೂವಿನ ಗಿಡಗಳನ್ನು ನಾಟಿ ಮಾಡುವ ಕುರಿತು ಪೋಷಕರು ಮಕ್ಕಳಿಗೆ ಪ್ರೇರಣೆ ನಿಡುವಂತೆ ಸಲಹೆ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕ ಹಂಸಭಾವಿ, ಎಂ.ಎನ್. ಮಲ್ಲಾಡದ, ವಲಯದ ಮೇಲ್ವಿಚಾರಕರು ಗಣೇಶ್, ಕೃಷಿ ಮೇಲ್ವಿಚಾರಕ ಜಿ. ಪ್ರಕಾಶ್, ಸೇವಾ ಪ್ರತಿನಿಧಿಗಳಾದ ಶಿಲ್ಪಾ ಮತ್ತು ವಿನೋದ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳೆಯ ವಸ್ತು ಸ್ಥಿತಿ, ಮಳೆಯ ಪ್ರಮಾಣ ಅರಿತು ಸರ್ಕಾರಕ್ಕೆ ವರದಿ: ಡಿಸಿ
ಬೈಕ್‌ಗೆ ಲಾರಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು