)
ರಜನಿ ಎಂ.ಜಿ. ಸುವರ್ಣ ನ್ಯೂಸ್
ಇದಕ್ಕೆ ಬೇಕಾಗುವ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಕೊಡುವುದು ಮಾತ್ರವಲ್ಲ, ಆ ಕ್ಷಣವೇ ಆ್ಯಂಬುಲೆನ್ಸ್ಗೆ ಮಾಹಿತಿ ನೀಡುವುದು, ತಜ್ಞ ವೈದ್ಯರ ಕರೆಸುವುದು ಮೊದಲಾದವನ್ನು ಮಾಡಬಹುದು. ಇದು ಎಐ ಅಲ್ಲ, ಅದರ ಮುಂದುವರಿದ ಹಂತ ಪಿಐ. (ಫಿಸಿಕಲ್ ಇಂಟೆಲಿಜೆನ್ಸ್). ಕ್ಯಾಮೆರಾ, ಸೆನ್ಸಾರ್, ಡ್ರೋನ್, ರೋಬೋಟ್ಸ್ ಮೊದಲಾದ ತಂತ್ರಜ್ಞಾನ ಬಳಸಿ ನಮ್ಮ ಭೌತಿಕ ಜಗತ್ತಿನ್ನು ಅರ್ಥ ಮಾಡಿಕೊಂಡು ಆಯಾ ಕ್ಷಣದಲ್ಲೇ ನಿರ್ಧಾರ ತೆಗೆದುಕೊಳ್ಳುವುದು. ಇದುವರೆಗೂ ಮಾಹಿತಿ, ದಾಖಲೆ, ಫೋಟೋ, ವಿಡಿಯೋ ಆಧರಿಸಿ ಡಿಜಿಟಲ್ ಜಗತ್ತಿನಲ್ಲಿ ಕೆಲಸ ಮಾಡುತ್ತಿದ್ದ ಎಐ ಇದೀಗ ಭೌತಿಕ ಪ್ರಪಂಚಕ್ಕೂ ಕಾಲಿಟ್ಟಿದೆ.
ಭಾರತದಲ್ಲಿ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಜ್ಞಾನವನ್ನು ವಾಸ್ತವ ಜಗತ್ತಿನೊಂದಿಗೆ ಸಂಯೋಜಿಸುವ ಮಹತ್ವಾಕಾಂಕ್ಷಿ ಹೆಜ್ಜೆಯಾಗಿ, ಮೆಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಂಇಐಎಲ್) ಹಾಗೂ ಅನಲಾಗ್ ಕಂಪನಿಗಳು ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ. ಹೈದರಾಬಾದ್ನ ಪ್ರಮುಖ ಮೂಲ ಸೌಕರ್ಯ ಒದಗಿಸುವ ಹೈದರಾಬಾದ್ನ ಬೃಹತ್ ಸಂಸ್ಥೆ ಎಂಇಐಎಲ್ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾರೆಡ್ಡಿ ಹಾಗೂ ಅನಲಾಗ್ ಕಂಪನಿಯ ಸಂಸ್ಥಾಪಕ ಅಲೆಕ್ಸ್ ಕಿಪ್ಮನ್ ಒಪ್ಪಂದಕ್ಕೆ ಸಹಿ ಹಾಕಿದರು.ಮೈಕ್ರೋಸಾಫ್ಟ್ ಸಂಸ್ಥೆಯ ಸಂಸ್ಥಾಪಕ ಪ್ರಮುಖರಲ್ಲಿ ಒಬ್ಬರಾಗಿದ್ದ ಅಲೆಕ್ಸ್ ಕಿಪ್ಮನ್ ಇದೀಗ ಅನಲಾಗ್ ಕಂಪನಿಯನ್ನು ಸ್ಥಾಪಿಸಿದ್ದು, ಫಿಸಿಕಲ್ ಇಂಟೆಲಿಜೆನ್ಸ್ ಮೂಲಕ ಹೈದ್ರಾಬಾದ್ ನಗರವನ್ನು ಸ್ಮಾರ್ಟ್ ಸಿಟಿ ಮಾಡುವ ಕನಸಿಗೆ ಕೈ ಜೋಡಿಸಿದ್ದಾರೆ. ಈಗಾಗಲೇ ಅಬುಧಾಬಿಯಲ್ಲಿ ಈ ಬಗ್ಗೆ ಕೆಲಸ ಮಾಡುತ್ತಿರುವ ಅನಲಾಗ್ ಕಂಪನಿ ಯಶಸ್ಸಿನ ಹಾದಿಯಲ್ಲಿದೆ.
ಎಂಇಐಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ವಿ.ಕೃಷ್ಣಾರೆಡ್ಡಿ ಮಾತನಾಡಿ, ಮೂಲಸೌಕರ್ಯ ಅಭಿವೃದ್ಧಿಯೇ ದೇಶದ ಪ್ರಗತಿಯ ಆಧಾರವಾಗಿದೆ. ಮುಂದಿನ ದಿನಗಳಲ್ಲಿ ಮೂಲಸೌಕರ್ಯಗಳು ಬುದ್ಧಿಮತ್ತೆ ಹೊಂದಿದ್ದು ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತಿರಬೇಕು. ಭಾರತಕ್ಕೆ ಫಿಸಿಕಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಪರಿಚಯಿಸುವಲ್ಲಿ ನಾವು ಹೆಮ್ಮೆಪಡುತ್ತೇವೆ ಎಂದು ಪ್ರತಿಪಾದಿಸಿದರು.
ಎಂಇಐಎಲ್:
-ಬಾಕ್ಸ್-
ಮುಂದಿನ ದಿನಗಳಲ್ಲಿ ‘ಭೌತಿಕ ಬುದ್ಧಿಮತ್ತೆ’ (ಫಿಸಿಕಲ್ ಇಂಟಲಿಜೆನ್ಸ್) ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಮೇಗ ಎಂಜಿನಿಯರಿಂಗ್ ಇನ್ಫಾಸ್ಟ್ರಕ್ಚರ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾರೆಡ್ಡಿ ಪ್ರತಿಪಾದಿಸಿದರು. ''''''''ಅನಲಾಗ್'''''''' ನೊಂದಿಗಿನ ಒಡಂಬಡಿಕೆ ವೇಳೆ ಮಾತನಾಡಿದ ಅವರು ಭವಿಷ್ಯದಲ್ಲಿ ಮೂಲ ಸೌಕರ್ಯ ಯೋಜನೆಗಳನ್ನು ಕಬ್ಬಿಣ ಮತ್ತು ಸಿಮೆಂಟ್ ಜೊತೆಗೆ ''''''''ಬುದ್ಧಿವಂತಿಕೆ''''''''ಯೊಂದಿಗೆ ನಿರ್ಮಾಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬೌತಿಕ ಬುದ್ಧಿಮತ್ತೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ಜೊತೆಗಿನ ಸಮೀಕರಣದ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಕಲಿದೆ ಎಂದರು. -ಬಾಕ್ಸ್-
*ಟ್ರಾಫಿಕ್ ಸಮಸ್ಯೆ: ರಸ್ತೆಯಲ್ಲಿರುವ ಸೆನ್ಸಾರ್, ಕ್ಯಾಮೆರಾ ಎಲ್ಲವನ್ನೂ ಸೇರಿಸಿ ಸಿಗ್ನಲ್ ಸಮಯವನ್ನೇ ಬದಲಾಯಿಸಿ ಟ್ರಾಫಿಕ್ ಜಾಮ್ ಕಡಿಮೆ ಮಾಡುವುದು
*ಇಂಧನ ಸೋರಿಕೆ: ಎಲ್ಲೆಲ್ಲಿ ಇಂಧನ ಸೋರಿಕೆಯಾಗುತ್ತದೆ ಎಂದು ಪತ್ತೆ ಹಚ್ಚುವುದು ಮಾತ್ರವಲ್ಲ, ಸೋರಿಕೆ ಆಗದಂತೆ ಮೊದಲೇ ಕ್ರಮ ಕೈಗೊಳ್ಳುತ್ತದೆ
*ಸ್ಮಾರ್ಟ್ ಸಿಟಿ: ಡ್ರೋನ್, ರೋಬೋಟ್ಸ್, ನಗರದ ಕ್ಯಾಮೆರಾಗಳು ಸೇರಿಸಿ ಆಯಾ ಕ್ಷಣದಲ್ಲೇ ಕಸ, ಮಾಲಿನ್ಯ, ಸುರಕ್ಷತೆಯ ಬಗ್ಗೆ ನಿಗಾ ಇಡುತ್ತದೆ.