-ಸುನಂದಮ್ಮ ಜಯದೇವಯ್ಯ ಮುಧೋಳ್ ಮಠ ಸಹಸ್ರ ಚಂದ್ರದರ್ಶನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಹೆತ್ತ ತಂದೆ, ತಾಯಿ, ಭೂತಾಯಿ ಸ್ವರ್ಗಕ್ಕೆ ಸಮಾನ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮಿಗಳು ತಿಳಿಸಿದರು. ಸುನಂದಮ್ಮ ಜಯದೇವಯ್ಯ ಮುಧೋಳ್ ಮಠರವರ ಸಹಸ್ರ ಚಂದ್ರ ದರ್ಶನದ ಸಾನಿಧ್ಯವಹಿಸಿ, ಆಶೀರ್ವಚನ ನೀಡಿದ ಅವರು, ತಾಯಿ ಮಗುವಿಗೆ ಜನ್ಮ ನೀಡಿ, ಸಂಸ್ಕೃತಿ ಕಲಿಸಿ, ಸಮಾಜದಲ್ಲಿ ಧರ್ಮದ ತಳಹದಿಯ ಮೇಲೆ ಜೀವನ ರೂಪಿಸಿಕೊಳ್ಳುವ ಮೊದಲ ಗುರುವಾಗಿದ್ದು, ಈ ದಂಪತಿಗಳ ಆದರ್ಶ ಬದುಕು ಕುಟುಂಬಕ್ಕೆ, ಸಮಾಜಕ್ಕೆ ಮಾದರಿ ಎಂದು ತಿಳಿಸಿದರು.ನಿತ್ಯ ತಂದೆ ತಾಯಿ ಸೇವೆ ಮಾಡಿ ಅವರ ಮಾರ್ಗದರ್ಶನದಲ್ಲಿ ಜೀವನ ರೂಪಿಸಿ ಕೊಂಡು ಧರ್ಮ ಮಾರ್ಗದಲ್ಲಿ ಸಾಗಬೇಕೆಂದರು.
ವೀರಶೈವ ಸಮಾಜ, ಸುರಭಿ ಬಳಗ, ಮುಂತಾದ ಸಂಸ್ಥೆಯವರು ಜಯದೇವಯ್ಯ ದಂಪತಿ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಿಸಿದರು.
---------------ಫೋಟೋ: 29ಎಸ್ಕೆಪಿ01
ಸುನಂದಮ್ಮ ಜಯದೇವಯ್ಯ ಮುಧೋಳ್ ಮಠ ಅವರ ಸಹಸ್ರ ಚಂದ್ರದರ್ಶನ ಕಾರ್ಯಕ್ರಮವನ್ನು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮಿಗಳು ಉದ್ಘಾಟಿಸಿದರು.