ಧಾರ್ಮಿಕ ಆಚರಣೆಯಲ್ಲಿ ಸಂಸ್ಕೃತಿಯ ಅಡಿಪಾಯ

KannadaprabhaNewsNetwork |  
Published : Dec 15, 2025, 02:30 AM IST
ಪೂರ್ವಿಕರು ನೀಡಿದ ಮೌಲ್ಯಗಳನ್ನ ಅರಿತು ನಮ್ಮತನವನ್ನ ಉಳಿಸಿ ಬೆಳಸುವ ಅಗತ್ಯವಿದೆ | Kannada Prabha

ಸಾರಾಂಶ

ಪ್ರತಿಯೊಂದು ಧಾರ್ಮಿಕ ಆಚರಣೆಯಲ್ಲೂ ನಮ್ಮ ಸಂಸ್ಕೃತಿಯ ಅಡಿಪಾಯವಾಗಿದ್ದು, ಪೂರ್ವಿಕರು ನೀಡಿದ ಮೌಲ್ಯಗಳನ್ನ ಅರಿತು ನಮ್ಮತನವನ್ನು ಉಳಿಸಿ ಬೆಳಸುವ ಅಗತ್ಯವಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಪ್ರತಿಯೊಂದು ಧಾರ್ಮಿಕ ಆಚರಣೆಯಲ್ಲೂ ನಮ್ಮ ಸಂಸ್ಕೃತಿಯ ಅಡಿಪಾಯವಾಗಿದ್ದು, ಪೂರ್ವಿಕರು ನೀಡಿದ ಮೌಲ್ಯಗಳನ್ನ ಅರಿತು ನಮ್ಮತನವನ್ನು ಉಳಿಸಿ ಬೆಳಸುವ ಅಗತ್ಯವಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಕೋಳಾಲ ಹೋಬಳಿಯ ವಜ್ಜನಕುರಿಕೆ ಗ್ರಾಮದಲ್ಲಿರುವ ಅರೇ ರಂಗನಾಥ ಸ್ವಾಮಿ ದೇವಸ್ಥಾನದ ೧೫ನೇ ವರ್ಷದ ವಿಷ್ಣು ದೀಪೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.ಮನುಷ್ಯ ಧಾರ್ಮಿಕ ಆಚರಣೆಗಳನ್ನು ಶ್ರದ್ಧೆ ಭಕ್ತಿಯಿಂದ ಮಾಡಿದಾಗ ಮಾತ್ರ ದೈವ ನಮಗೆ ಅಸ್ತು ಎನ್ನುತ್ತಾನೆ. ನಾವು ಆಧ್ಯಾತ್ಮಿಕತೆ ಮತ್ತು ವೈಜ್ಞಾನಿಕ ಅಂಶಗಳನ್ನು ಅರಿತು ಆಚರಣೆ ಮಾಡಿದಾಗ ಮಾತ್ರ ಪ್ರತಿಯೊಂದು ಹಬ್ಬ ಮತ್ತು ಉತ್ಸವಗಳ ಮೌಲ್ಯ ಹೆಚ್ಚುತ್ತದೆ. ಯಾವ ಮಾಸದಲ್ಲಿ ಯಾವ ರೀತಿಯ ಧಾರ್ಮಿಕ ಆಚರಣೆಗಳನ್ನು ಮಾಡಬೇಕು ಆ ಸಮಯದಲ್ಲಿ ನಮ್ಮ ಆಹಾರ ಪದ್ದತಿ ಹೇಗಿರಬೇಕು ಎಂಬುದರಲ್ಲಿಯೂ ಪೂರ್ವಿಕರು ಆಳವಾದ ವೈಜ್ಷಾನಿಕ ಚಿಂತನೆ ಅಡಗಿಸಿದ್ದಾರೆ ಎಂದರು.ಹಬ್ಬಗಳ ಸಂದರ್ಭದಲ್ಲಿ ತಯಾರಿಸುವ ಖಾದ್ಯಗಳಲ್ಲಿಯೂ ಸಾತ್ವಿಕತೆ ಮತ್ತು ಆರೋಗ್ಯಪರ ದೃಷ್ಠಿಕೋನ ಆಡಗಿದ್ದು, ಇಂತಹ ಆಹಾರಗಳನ್ನ ಸೇವಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಮನುಷ್ಯನಿಗೆ ಆರೋಗ್ಯ ಎಷ್ಟು ಮುಖ್ಯನೋ ಅದೆ ರೀತಿ ನಮ್ಮ ಸಂಸ್ಕೃತಿ ಸಂಪ್ರದಾಯನೂ ಅಷ್ಟೇ ಮುಖ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ದಿನೇಶ್, ಮಾಜಿ ಜಿಪಂ ಸದಸ್ಯ ಕೊಡಗನಹಳ್ಳಿ ವೆಂಕಟೇಶ್, ಓಂಕಾರೇಶ್ವರ, ಸೊಸೈಟಿ ಅಧ್ಯಕ್ಷ ಶೇಷಾಚಲಮೂರ್ತಿ, ಚಲನಚಿತ್ರ ನಿರ್ದೇಶಕ ಸತ್ಯಪ್ರಕಾಶ್, ನಿವೃತ್ತ ಡಿಡಿಪಿಐ ಗಳಾದ ಅರೆರಂಗಯ್ಯ, ಅಂಜನಪ್ಪ, ಮುಖಂಡರಾದ ನಾಗರಾಜು, ಸುದರ್ಶನ್, ರಂಗರಾಜು, ವಿನೋದ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!