ಕನ್ನಡಪ್ರಭ ವಾರ್ತೆ ಗೋಕಾಕ
ಸೋಮವಾರ ನಗರದ ಸಂಘದ ಕಾರ್ಯಾಲಯದಲ್ಲಿ ದಿ.ಗೋಕಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 96ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತ ಬಾಂಧವರು ರಾಸಾಯನಿಕ ಕೃಷಿಗೆ ಮಹತ್ವ ನೀಡದೆ ಸಾವಯುವ ಕೃಷಿಗೆ ಆದ್ಯತೆ ನೀಡಿ ಭೂಮಿಯ ಫಲವತ್ತತೆ ಹೆಚ್ಚಿಸುವುದರೊಂದಿಗೆ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು. ಸಂಘ ನೀಡಿದ ಸಾಲದ ಸದುಪಯೋಗ ಪಡಿಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಿ, ಆರ್ಥಿಕವಾಗಿ ಸದೃಢರಾಗುವಂತೆ ಸಲಹೆ ನೀಡಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳನ್ನು ಸತ್ಕರಿಸಿ ₹2ಸಾವಿರ ಸಹಾಯಧನ ನೀಡಿದರು. ಸಂಘದ ಉಪಾಧ್ಯಕ್ಷ ಮದನ ಮಾವರಕರ, ನಿರ್ದೇಶಕರಾದ ನಾರಾಯಣ ತಟ್ಟಿಮನಿ, ಬೀರಪ್ಪ ಹಟ್ಟಿ, ಸಂತೋಷ ಕಟ್ಟಿಕಾರ, ಗಜಾನನ ಕಟ್ಟಿಮನಿ, ಬಸವರಾಜ ಭಂಡಾರಿ, ಅನುಸೂಯಾ ಧುಳಾಯಿ, ಲಲಿತಾ ಜೋಗೋಜಿ, ಪಾರ್ವತೆವ್ವ ಜಾಧವ ಹಾಗೂ ಮುಖ್ಯಕಾರ್ಯನಿರ್ವಾಹಕಿ ಭಾರತಿ ಬಾಗೇವಾಡಿ ಇದ್ದರು.