ಸರ್ಕಾರದ ಆಡಳಿತ ಹೇಸಿಗೆ ಬರುವಂತಿದೆ

KannadaprabhaNewsNetwork |  
Published : Aug 28, 2026, 03:00 AM IST
ಜಿಗಜಿಣಗಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ರಾಜ್ಯ ಸರ್ಕಾರದ ಆಡಳಿತ ನಡೆ ಹೇಸಿಗೆ ಬರುವಂತಿದೆ. ರಾಜ್ಯದಲ್ಲಿ ಒಂದೂ ಕೆಲಸ ಇಲ್ಲ. ಮಂತ್ರಿಗಿರಿಗಾಗಿ ಜಗಳ ಮಾಡುವುದರಲ್ಲಿ ಮುಳುಗಿ ಹೋಗಿದೆ. ರಾಜ್ಯದಲ್ಲಿ ಬರ ಆವರಿಸಿದ್ದು, ರೈತರ ಕಷ್ಟ ರಾಜ್ಯ ಸರ್ಕಾರಕ್ಕೆ ಕಾಣುತ್ತಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ರಾಜ್ಯ ಸರ್ಕಾರದ ಆಡಳಿತ ನಡೆ ಹೇಸಿಗೆ ಬರುವಂತಿದೆ. ರಾಜ್ಯದಲ್ಲಿ ಒಂದೂ ಕೆಲಸ ಇಲ್ಲ. ಮಂತ್ರಿಗಿರಿಗಾಗಿ ಜಗಳ ಮಾಡುವುದರಲ್ಲಿ ಮುಳುಗಿ ಹೋಗಿದೆ. ರಾಜ್ಯದಲ್ಲಿ ಬರ ಆವರಿಸಿದ್ದು, ರೈತರ ಕಷ್ಟ ರಾಜ್ಯ ಸರ್ಕಾರಕ್ಕೆ ಕಾಣುತ್ತಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಬೂತ್ ಮಟ್ಟದ ಪಕ್ಷದ ಏಜೆಂಟರಿಗೆ ಹಾಗೂ ನೂತನ ಪದಾಧಿಕಾರಿಗಳ(BLO) ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಳೆ ಕೊರತೆಯಿಂದ ಜಾನುವಾರಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಜಮೀನಿನಲ್ಲಿ ಬಿತ್ತನೆ ಮಾಡದ ರೈತರು ಆಕಾಶ ನೋಡುತ್ತಿದ್ದಾರೆ. ಹೀಗಾದರೆ, ರೈತರ ಗತಿ ಏನು? ರಾಜ್ಯ ಸರ್ಕಾರ ರೈತರ ಬಗ್ಗೆ ಚಿಂತನೆ ಮಾಡುವುದು ಬಿಟ್ಟು ಮಂತ್ರಿಗಿರಿ ಹಂಚಿಕೆಯಲ್ಲಿ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ನಾನು ಎಸ್ಟಿ ಇದ್ದಿದ್ದಕ್ಕಾಗಿ ಬಿಜೆಪಿಯವರು ಟಾರ್ಗೆಟ್‌ ಮಾಡಿದ್ದಾರೆ ಎನ್ನುತ್ತಾ ಹೊರಟಿದ್ದಾನೆ. ₹ 187 ಕೋಟಿ ಎಲ್ಲಿ ಹೋಯಿತು ?. ಸಚಿವನಾಗಿ ಅಷ್ಟು ಹಣ ಎಲ್ಲಿ ಹೋಗಿದೆ ಎಂಬುದರ ಬಗ್ಗೆ ಏಕೆ ತಿಳಿದುಕೊಳ್ಳಲಿಲ್ಲ. ₹ 187 ಕೋಟಿ ಹಣದಲ್ಲಿ ಎಷ್ಟು ಜನ ಬಡವರಿಗೆ ಅನುಕೂಲವಾಗುತ್ತಿತ್ತು ಎಂಬು ತಿಳಿದಿಕೊಳ್ಳಬೇಕು ಎಂದು ಹೇಳಿದರು. ಸಿದ್ದರಾಮಯ್ಯನವರೇ ವಾಲ್ಮೀಕಿ ನಿಗಮದಲ್ಲಿ ಅನುದಾನ ದುರುಪಯೋಗ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ನನ್ನ ಮಂತ್ರಿ ಮಾಡಲಿಲ್ಲ ಅಂದರೆ, ಕಾಂಗ್ರೆಸ್‌ನವರ ಚಡ್ಡಿ ಬಿಚ್ಚಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರಿಂದ ಮಂತ್ರಿಗಿರಿ ನೀಡಿದ್ದಾರೆ ಎಂದರು.

ಇಂಡಿ ತಾಲೂಕಿನ ನಿಷ್ಠಾವಂತ ಜನ ನನ್ನನ್ನು ರಾಜಕಾರಣದಲ್ಲಿ ಬೆಳೆಸಿದ್ದಾರೆ. ಜಾತಿ ಮುಂದೆ ಇಟ್ಟುಕೊಂಡು ರಾಜಕಾರಣ ಮಾಡಬೇಡಿ. ಪಕ್ಷ ಎಂಬ ಭಾವ ಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮಾಡಿ, ಪಕ್ಷವಿದ್ದರೆ ನಾವೆಲ್ಲಾ, ಪಕ್ಷವಿಲ್ಲದಿದ್ದರೆ ನಾವ್ಯಾರು ಇಲ್ಲ. ಬಿಜೆಪಿ ಟಿಕೆಟ್ ಯಾರಿಗಾದರೂ ಕೊಡಲಿ, ಎಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕಾಗಿ ಕೆಲಸ ಮಾಡಬೇಕು. ರಮೇಶ ಜಿಗಜಿಣಗಿ ರಾಜಕೀಯ ಮುಗಿಯಿತು ಎಂದು ಯಾರಾದರೂ ಹೇಳುತ್ತಿದ್ದರೆ ಕೇಳಬೇಡಿ, ನನ್ನ ರಾಜಕೀಯ ಇನ್ನು ಮುಗಿದಿಲ್ಲ. ನನಗೇನು ವಯಸ್ಸಾಗಿಲ್ಲ, ವಯಸ್ಸು ಮುಗಿಯುವವರೆಗೆ ನನ್ನ ರಾಜಕಾರಣ ಮುಗಿಯುವುದಿಲ್ಲ ಎಂದು ಹೇಳಿದರು.

ಈ ವೇಳೆ ಮಂಡಲ ಅಧ್ಯಕ್ಷ ಹಣಮಂತ್ರಾಯಗೌಡ ಪಾಟೀಲ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಮಲ್ಲಿಕಾರ್ಜುನ ಜೋಗುರ, ಕಾಸುಗೌಡ ಬಿರಾದಾರ, ಎಸ್.ಎ.ಪಾಟೀಲ ಮಾತನಾಡಿದರು. ಸಿದ್ದಲಿಂಗ ಹಂಜಗಿ, ಅನಿಲ ಜಮಾದಾರ, ಶೀಲವಂತ ಉಮರಾಣಿ, ಮಲ್ಲಿಕಾರ್ಜುನ ಕಿವಡೆ, ರಾಘವೇಂದ್ರ ಕಾಪಸೆ, ರವಿ ವಗ್ಗೆ, ರಾಜಕುಮಾರ ಸಗಾಯಿ, ಭೀಮಸಿಂಗ ರಾಥೋಡ, ಬೌರಮ್ಮಾ ಮರಡಿ ಉಪಸ್ಥಿತರಿದ್ದರು. ದೇವೆಂದ್ರ ಕುಂಬಾರ, ಸಂತೋಷಗೌಡ ಪಾಟೀಲ, ಶಿವು ಬಗಲಿ, ರಮೇಶ ಧರೇನವರ, ಅನೀಲಗೌಡ ಬಿರಾದಾರ, ಮಂಜು ದೇವರ, ಅಶೋಕ ಅಕಲಾದಿ, ಮಲ್ಲು ವಾಲಿಕಾರ, ಸಾಗರ ಬಿರಾದಾರ, ಮಹೇಶ ಹೂಗಾರ, ವಿಜು ಮಾನೆ, ದತ್ತಾ ಬಂಡೇನವರ, ರಾಜಶೇಖರ ಯರಗಲ್ಲ, ನಿರ್ಮಲಾ ಬಗಲಿ, ಸುನಂದಾ ಗಿರಣಿವಡ್ಡರ, ಅನಸೂಯಾ ಮದರಿ, ಬೌರಮ್ಮಾ ನಾವಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆ: ಐಶ್ವರ್ಯ, ಸ್ನೇಹಾ ಪ್ರಥಮ
ಕೇಸರೆಕರ ದಂಪತಿ ಹತ್ಯೆ ಪ್ರಕರಣ ಸಿಬಿಐಗೆ ಹಸ್ತಾಂತರಿಸಲು ಆಗ್ರಹ