ತಾಲೂಕಾಡಳಿತ ಸೌಧದಲ್ಲಿ ಅತಿವೃಷ್ಟಿ-ಅನಾವೃಷ್ಟಿಯ ಪರಿಶೀಲನಾ ಸಭೆಕನ್ನಡಪ್ರಭ ವಾರ್ತೆ ಹಳಿಯಾಳ
ಶುಕ್ರವಾರ ಸಂಜೆ ಬರಪರಿಸ್ಥಿತಿ ಅಧ್ಯಯನ ಮಾಡಲು ಹಳಿಯಾಳ ತಾಲೂಕಿಗೆ ಆಗಮಿಸಿದ ಅವರು ತಾಲೂಕಾಡಳಿತ ಸೌಧದಲ್ಲಿ ಆಯೋಜಿಸಿದ ಅತಿವೃಷ್ಟಿ-ಅನಾವೃಷ್ಟಿಯ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಎರಡೂ ದಿನಗಳಿಂದ ನಾನು ಜಿಲ್ಲೆಯಲ್ಲಿ ಬರ ಅಧ್ಯಯನದ ಭೇಟಿಯನ್ನು ಆರಂಭಿಸಿದ್ದು, ಹಳಿಯಾಳದಲ್ಲಿ ಈ ಅಧ್ಯಯನದ ಭೇಟಿಯು ಕೊನೆಗೊಳ್ಳಲಿದೆ. ಈ ಭೇಟಿಯ ಸಂದರ್ಭ ಜಿಲ್ಲೆಯ ಎಲ್ಲಾ ಆಡಳಿತ ವರ್ಗ ಹಾಗೂ ಶಾಸಕರು ನನ್ನೊಂದಿಗೆ ಪ್ರವಾಸ ಮಾಡಿ ಜಿಲ್ಲೆಯ ಹಾಗೂ ತಮ್ಮ ಕ್ಷೇತ್ರದ ನೈಜ ಪರಿಸ್ಥಿತಿಯನ್ನು ಮನವರಿಕೆ ಮಾಡಿದ್ದಾರೆ. ಭೇಟಿಯ ಸಮಯದಲ್ಲಿ ಅವಲೋಕಿಸಿದ ಮಾಹಿತಿಯನ್ನು ಮುಖ್ಯಮಂತ್ರಿಗೆ ತಿಳಿಸುತ್ತೇನೆ ಎಂದರು. ಮುಂದುವರೆದು ಮಾತನಾಡಿದ ಅವರು ಮುಖ್ಯಮಂತ್ರಿಗಳು ಜಾರಿಗೊಳಿಸಿರುವ ಪ್ರಜಾಸೇವೆ ಅಭಿಯಾನದ ಬಗ್ಗೆ ವಿವರಿಸಿದರು.ಹಳಿಯಾಳ ತಾಲೂಕಿನ ಕೃಷಿ ಪರಿಸ್ಥಿತಿಯ ಅವಲೋಕನ ಸಮಯದಲ್ಲಿ ಕಬ್ಬಿನ ಬೆಳೆಯಲ್ಲಿ ಕಂಡು ಬರುತ್ತಿರುವ ರೋಗದ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು ಕೃಷಿ ತಜ್ಞರು ಅಥವಾ ಕಬ್ಬು ಸಂಶೋಧನಾ ಪರಿಣತರ ಅಧ್ಯಯನ ತಂಡವನ್ನು ಹಳಿಯಾಳಕ್ಕೆ ಕರೆಯಿಸಿ ಈ ಬೆಳೆಗೆ ತಾಗಿರುವ ರೋಗಬಾಧೆಯ ಪರಿಶೀಲನೆ ನಡೆಸಿ, ತಂಡವು ನೀಡಿದ ಪರಿಶೀಲನಾ ವರದಿಯನ್ನು ಆಧರಿಸಿಕೊಂಡು ರೋಗನಿಯಂತ್ರಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಸಚಿವ ಸವದಿ ಅನುಭವಿ ರಾಜಕಾರಣಿಯಾಗಿದ್ದು, ಅವರಿಗೆ ಸಂಘಟನೆ ಮತ್ತು ಆಡಳಿತ ಚೆನ್ನಾಗಿ ಗೊತ್ತಿದೆ. ಅವರ ಅನುಭವದ ಲಾಭವು ರಾಜ್ಯಕ್ಕೂ ಹಾಗೂ ಜಿಲ್ಲೆಗೂ ಲಭಿಸಲಿ ಎಂದರು.
ಸಭೆಯಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಒ ಡಾ. ದಿಲೀಶ್ ಶಶಿ, ಜಿಲ್ಲಾ ಎಸ್ಪಿ ದೀಪನ್ ಎಂ.ಎನ್., ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ ಹಾಗೂ ಹಳಿಯಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಮೂರು ತಾಲೂಕಿನ ವಿವಿಧ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.