ಮನದ ಅಂಧಕಾರ ನೀಗಲು ಬೇಕು ಜ್ಞಾನದ ಬೆಳಕು: ವಾಗೀಶ ಪಂಡಿತಾರಾಧ್ಯ ಹಾಲಶಿವಯೋಗಿಗಳು

KannadaprabhaNewsNetwork |  
Published : Nov 18, 2025, 01:15 AM IST
ಪೊಟೋ- ಸಮೀಪದ ಶಿಗ್ಲಿಯಲ್ಲಿ ನಡೆದ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಸಂಕದಾಳದ ಪಂಡಿತ ಹಾಲಶಿವಯೋಗಿಗಿಳು ಮಾತನಾಡಿದರು. | Kannada Prabha

ಸಾರಾಂಶ

ಪ್ರಪಂಚದಲ್ಲಿ ಭಯ, ಭೀತಿ, ಉದ್ವೇಗ, ಚಿಂತೆ ಒತ್ತಡ ಎಲ್ಲರಿಗೂ ಇರುತ್ತದೆ. ಮನುಷ್ಯ ತನ್ನ ಬಾಳಿನಲ್ಲಿ ನೀತಿ ಸಂಹಿತೆ, ಸದಾಚಾರ ಸಂಪನ್ನತೆ, ಧ್ಯಾನ ಇವುಗಳನ್ನು ಆಳವಡಿಸಿಕೊಂಡು ಬಾಳಿದರೆ ಸುಖ, ಶಾಂತಿ, ನೆಮ್ಮದಿ ಪ್ರಾಪ್ತವಾಗುವುದರಲ್ಲಿ ಸಂದೇಹವಿಲ್ಲ.

ಲಕ್ಷ್ಮೇಶ್ವರ: ಕತ್ತಲೆ ಕಳೆದು ಬೆಳಕು ನೀಡುವುದು ದೀಪದ ಗುಣ. ಮನಷ್ಯನು ತನ್ನ ಜ್ಞಾನ ಹಾಗೂ ನಡತೆಯಿಂದ ಇತರರಿಗೆ ಬೆಳಕು ನೀಡುವ ಕಾರ್ಯ ಮಾಡಬೇಕು ಎಂದು ಹಾಲಸ್ವಾಮಿ ಮಠ ಸಂಕದಾಳ ಸದ್ಗುರು ಶಿವಯೋಗಿ ವಾಗೀಶ ಪಂಡಿತಾರಾಧ್ಯ ಹಾಲಶಿವಯೋಗಿಗಳು ತಿಳಿಸಿದರು.

ಸಮೀಪದ ಶಿಗ್ಲಿ ಗ್ರಾಮದಲ್ಲಿ ಶುಕ್ರವಾರ ಸದ್ಗುರು ಶಿವಯೋಗಿ ವಾಗೀಶ ಪಂಡಿತಾರಾಧ್ಯ ಹಾಲಶಿವಯೋಗಿಗಳು ಕಾರ್ತಿಕ ದೀಪೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸುಖ ಬಯಸುವುದು ಮನುಷ್ಯನ ಸಹಜ ಗುಣ. ದುರ್ನಡತೆಯಿಂದ ಮನುಷ್ಯನ ಬದುಕು ಛಿದ್ರಗೊಂಡಿದೆ. ಬಾಳಿನ ಉನ್ನತಿ ಅವನತಿಗಳಿಗೆ ಮನುಷ್ಯನ ಮನಸ್ಸೇ ಕಾರಣವೆಂದರು.

ಪ್ರಪಂಚದಲ್ಲಿ ಭಯ, ಭೀತಿ, ಉದ್ವೇಗ, ಚಿಂತೆ ಒತ್ತಡ ಎಲ್ಲರಿಗೂ ಇರುತ್ತದೆ. ಮನುಷ್ಯ ತನ್ನ ಬಾಳಿನಲ್ಲಿ ನೀತಿ ಸಂಹಿತೆ, ಸದಾಚಾರ ಸಂಪನ್ನತೆ, ಧ್ಯಾನ ಇವುಗಳನ್ನು ಆಳವಡಿಸಿಕೊಂಡು ಬಾಳಿದರೆ ಸುಖ, ಶಾಂತಿ, ನೆಮ್ಮದಿ ಪ್ರಾಪ್ತವಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಮನುಷ್ಯ ಆಸೆ ಕಳೆದುಕೊಂಡು ಬದುಕಬಹುದು, ಆದರೆ ಆಸಕ್ತಿ ಕಳೆದುಕೊಂಡು ಬಾಳಲಾಗದು. ಕಷ್ಟಕಾಲದಲ್ಲಿ ಸಹಾಯ ಮಾಡಿದವರನ್ನು ಕಷ್ಟಕಾಲದಲ್ಲಿ ಕೈಬಿಡದೇ ಕಾಪಾಡುವವರನ್ನು ಕಷ್ಟಕ್ಕೆ ದೂಡಿದವರನ್ನು ಎಂದಿಗೂ ಮರೆಯಬಾರದು. ಪ್ರತಿಯೊಂದು ಚಿಕ್ಕ ಪಯಣಕ್ಕೂ ಒಂದು ಮಾರ್ಗಸೂಚಿ ಇರುವಂತೆ ಬದುಕಿನ ಮಹಾಯಾತ್ರೆಗೆ ಧರ್ಮ ದಿಕ್ಸೂಚಿಯಾಗಿದೆ ಎಂದರು.

ಈ ವೇಳೆ ಅಶೋಕ ಶಿರಹಟ್ಟಿ, ಎಸ್.ಪಿ. ಬಳೆಗಾರ, ಶಿವಪ್ಪ ಕೆಸರಳ್ಳಿ, ಎನ್.ಎನ್. ನೆಗಳೂರ, ನಿಂಗಪ್ಪ ಹುನುಗುಂದ, ಸೋಮಣ್ಣ ಡಾಣಗಲ್‌, ಎಚ್.ಎಫ್. ತಳವಾರ, ಎಂ.ಸಿ. ರಾಗಿ, ವೀರಣ್ಣ ಪವಾಡದ, ರಾಜು ಮುಳುಗುಂದ, ಜ್ಯೋತಿಬಾ ಮುಳಗುಂದ, ಪಿ.ಎಫ್. ಕಾಳಪ್ಪನವರ, ಶ್ರೀಧರ ಜನಿವಾರ, ಹಾಲಪ್ಪ ಅಣ್ಣಿಗೇರಿ, ಯಲ್ಲಪ್ಪ ಅಗಸರ, ಗಿರಿಜಮ್ಮ ಕೆಸರಳ್ಳಿ, ಈರಮ್ಮ ಕೆಸರಳ್ಳಿ, ಪಾರಮ್ಮ ಕರ್ಜಿಗಿ, ಸವಿತಮ್ಮ ನೆಗಳೂರ, ಪಾರಮ್ಮ ಬಡಿಗೇರ, ಕಲ್ಲಮ್ಮ ಮೂಲಿಮನಿ, ಬಸವಣ್ಣಮ್ಮ ಹುಲಗೂರ, ನಿಂಗಮ್ಮ ಹುಲಗೂರ, ಶಾಂತಮ್ಮ ತೋಟದ, ಲಕ್ಷ್ಮಮ್ಮ ಕೆಸರಳ್ಳಿ, ಆಶಾ ಬೊಮ್ಮನಕಟ್ಟೆ ಮುಂತಾದವರು ಇದ್ದರು. ಜ್ಞಾನೇಶ್ವರ ಮಹಾರಾಜರ ದಿಂಡಿ ಉತ್ಸವ

ಗದಗ: ಭಾವಸಾರ ಕ್ಷತ್ರೀಯ ಸಮಾಜದಿಂದ ಸಂತ ಜ್ಞಾನೇಶ್ವರ ಮಹಾರಾಜರ 729ನೇ ಸಂಜೀವಿನಿ ಸಮಾಧಿ ನಿಮಿತ್ಯ ದಿಂಡಿ ಸೋಹಳಾ ಉತ್ಸವದ ಅಂಗವಾಗಿ ನ. 18ರಂದು ವಿವಿಧ ಕಾರ್ಯಕ್ರಮಗಳು ನಗರದ ಜವಳಿ ಬಜಾರದ ವಿಠ್ಠಲ ಮಂದಿರದಲ್ಲಿ ಜರುಗಲಿವೆ.ನ. 18ರಂದು ಬೆಳಗ್ಗೆ 4ರಿಂದ 6ರ ವರೆಗೆ ಕಾಕಡಾರತಿ, ಮಧ್ಯಾಹ್ನ 12ರಿಂದ 1ರ ವರೆಗೆ ಪ್ರಭಾಕರ(ದಾದಾ) ಬೋಧಲೆ ಮಹಾರಾಜರಿಂದ ಕಾಲಾ ಕೀರ್ತನೆ ಜರುಗುವುದು. ನಂತರ ಆರತಿ ಮಹಾಪ್ರಸಾದ ನಡೆಯಲಿದೆ. ಸಂಜೆ 7ರಿಂದ 9ರ ವರೆಗೆ ದಿಂಡಿಯು ನಗರ ಪ್ರದಕ್ಷಿಣೆ ಸಂಚರಿಸಿ ದೇವಸ್ಥಾನಕ್ಕೆ ಮರಳಿದ ನಂತರ ಆರತಿ ಮಹಾಪ್ರಸಾದ ಜರುಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ