ವಿಶ್ವಮಾನವ ಸಂದೇಶ ಸಾರಿದ ಕುವೆಂಪು

KannadaprabhaNewsNetwork |  
Published : Jan 24, 2024, 02:02 AM IST
ಪೊಟೋ೨೧ಸಿಪಿಟಿ೭:  ನಗರದ ಶತಮಾನೋತ್ಸವ ಭವನದಲ್ಲಿ ನಡೆದ ಕುವೆಂಪು ವಿಚಾರ ಉತ್ಸವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. | Kannada Prabha

ಸಾರಾಂಶ

ಚನ್ನಪಟ್ಟಣ: ರಾಷ್ಟ್ರಕವಿ ಕುವೆಂಪು ಅವರ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಜಾತಿ, ಮತ, ಪಂಥ, ವರ್ಣ, ಲಿಂಗಗಳ ಸಂಕೋಲೆಯನ್ನು ಮೀರುವ ಸಂದೇಶವಿದ್ದು, ಅದನ್ನು ಅರಿತು ನಾವು ಅವರ ಮಾರ್ಗದಲ್ಲಿ ನಡೆಯಬೇಕು ಎಂದು ಸಾಹಿತಿ ಡಾ.ಮೊಗಳ್ಳಿ ಗಣೇಶ್ ಹೇಳಿದರು.

ಚನ್ನಪಟ್ಟಣ: ರಾಷ್ಟ್ರಕವಿ ಕುವೆಂಪು ಅವರ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಜಾತಿ, ಮತ, ಪಂಥ, ವರ್ಣ, ಲಿಂಗಗಳ ಸಂಕೋಲೆಯನ್ನು ಮೀರುವ ಸಂದೇಶವಿದ್ದು, ಅದನ್ನು ಅರಿತು ನಾವು ಅವರ ಮಾರ್ಗದಲ್ಲಿ ನಡೆಯಬೇಕು ಎಂದು ಸಾಹಿತಿ ಡಾ.ಮೊಗಳ್ಳಿ ಗಣೇಶ್ ಹೇಳಿದರು.

ಪಟ್ಟಣದಲ್ಲಿ ಭಾರತ ಸಂವಿಧಾನ ಬಳಗ ಹಮ್ಮಿಕೊಂಡಿದ್ದ ಕುವೆಂಪು ವಿಚಾರ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರಕ್ಕೆ ಕುವೆಂಪು ಕೊಡುಗೆ ಅಪಾರ. ಅವರು ತಮ್ಮ ಕಾವ್ಯ, ಮಹಾಕಾವ್ಯ, ಕಾದಂಬರಿ, ನಾಟಕಗಳು ಹಾಗೂ ವಿಚಾರ ಸಾಹಿತ್ಯದಲ್ಲಿ ಸಾಧಿಸಿದ ಎತ್ತರ ಹಿರಿದಾಗಿದೆ. ಕುವೆಂಪು ತಮ್ಮ ಸಾಹಿತ್ಯದಲ್ಲಿ ವಿಶ್ವ ಮಾನವ ಸಂದೇಶವನ್ನು ಸಾರಿದ್ದಾರೆ. ಮನುಷ್ಯರು ವಿಶ್ವಮಾನವರಾಗಿ ಹುಟ್ಟುತ್ತಾರೆ. ಆದರೆ ಅಲ್ಪಮಾನವರಾಗಿ ಬೆಳೆಯತೊಡಗುತ್ತಾರೆ. ಎಲ್ಲ ಬಂಧನಗಳನ್ನು ಮೀರಿ ವಿಶ್ವಮಾನವರಾಗಿ ಬೆಳೆಯಬೇಕು ಎಂಬುದು ಅವರ ಆಶಯವಾಗಿತ್ತು ಎಂದರು.

ಸಂಸ್ಕೃತಿ ಚಿಂತಕ ಡಾ.ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಕುವೆಂಪು ಮತವೆಂಬ ಮೋಹಕ್ಕೆ ಸಿಲುಕಬಾರದು. ಇರುವುದೊಂದೇ ಮತ, ಅದುವೇ ಮನುಜ ಮತ. ಎಲ್ಲರೂ ಮನುಜ ಮತಕ್ಕೆ ಸೇರಬೇಕು. ಜನರು ತಮ್ಮನ್ನು ಆವರಿಸಿರುವ ಮೌಢ್ಯದಿಂದ ಹೊರಬಂದು, ಸಮಾನವಾಗಿ ಬದುಕುಬೇಕು ಎನ್ನುವ ಮೂಲಕ ಸಮಾಜದಲ್ಲಿ ವೈಚಾರಿಕತೆಯ ಬೀಜ ಬಿತ್ತಲು ಶ್ರಮಿಸಿದರು ಎಂದು ಬಣ್ಣಿಸಿದರು.

ಜನಪದ ವಿದ್ವಾಂಸ ಚಕ್ಕೆರೆ ಶಿವಶಂಕರ್ ಮಾತನಾಡಿ, ಮನುಷ್ಯನನ್ನು ಮನುಷ್ಯನನ್ನಾಗಿ ಕಾಣಬೇಕು. ಜಾತಿ, ಧರ್ಮದಿಂದಲ್ಲ. ಅಂತರಾತ್ಮದಲ್ಲಿ ಜ್ಞಾನ ದೀವಿಗೆ ಬೆಳಗಿಸಿ ವಿಶ್ವ ಮಾನವನಾಗಬೇಕು ಎಂದು ಜಗತ್ತಿಗೆ ಸಾರಿದ ಮೇರು ಕವಿ ಕುವೆಂಪು ಎಂದರು.

ಸಮಾಜಮುಖಿ ಹೋರಾಟಗಾರರು, ಸಾಹಿತಿಗಳು, ಪತ್ರಕರ್ತರು, ನಿವೃತ್ತ ಸೈನಿಕರು ಹಾಗೂ ರೈತಪರ ಹೋರಾಟಗಾರರನ್ನು ಗೌರವಿಸಲಾಯಿತು. ಭಾರತ ಸಂವಿಧಾನ ಬಳಗದ ಮತ್ತೀಕೆರೆ ಹನುಮಂತಯ್ಯ, ತಹಸೀಲ್ದಾರ್ ಎ.ಎಚ್.ಮಹೇಂದ್ರ, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್, ಡಾ.ರಾಜಶ್ರೀ, ಚನ್ನಪಟ್ಟಣ ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್, ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ