ಕನ್ನಡಪ್ರಭ ವಾರ್ತೆ ಕುಷ್ಟಗಿ
ಕಳೆದ ಏ. 30ರಂದು ರಾತ್ರಿ ತಾಲೂಕಿನ ವಿಠಲಾಪೂರದ ಗರ್ಭಿಣಿಯೊಬ್ಬರು ತಾವರಗೇರಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಅಲ್ಲಿನ ವೈದ್ಯೆ ಡಾ. ಕಾವೇರಿ ನಿರ್ಲಕ್ಷತನದಿಂದ ಮೃತಪಟ್ಟಿದ್ದಾರೆ. ಅವರನ್ನು ವರ್ಗಾವಣೆ ಮಾಡಬೇಕು ಎಂದು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು. ಅಧಿಕಾರಿಗಳು ಹಾಗೂ ತಹಸೀಲ್ದಾರರು ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಮುಂದಾಗುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಅಂತ್ಯಗೊಳಿಸಿದ್ದರು. ಸೂಕ್ತ ಕ್ರಮಕ್ಕೆ ಮುಂದಾಗದ ಹಿನ್ನೆಲೆ ಇಂದು ಮತದಾನ ಬಹಿಷ್ಕಾರ ಮಾಡಿದ್ದಾರೆ.
ಅಧಿಕಾರಿಗಳ ಭೇಟಿ:ಮತದಾನ ಬಹಿಷ್ಕಾರ ವಿಷಯ ತಿಳಿದ ತಹಸೀಲ್ದಾರರು, ಸಿಪಿಐ, ತಾಪಂ ಇಒ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರನ್ನು ಮನವೊಲಿಸುವ ಪ್ರಯತ್ನ ಮಾಡಿದರೂ ಸಹಿತ ಗ್ರಾಮಸ್ಥರು ಮೊದಲು ನ್ಯಾಯ ಕೊಡಿಸಿ ವರ್ಗಾವಣೆಗೆ ಕೇವಲ ಐದು ನಿಮಿಷ ಸಾಕು ನಂತರ ನಾವು ಮತದಾನ ಮಾಡುತ್ತೇವೆ ಎಂದು ಆಕ್ರೋಶಭರಿತರಾಗಿ ಹೇಳಿದರು. ಈ ವಿಠಲಾಪೂರ ಗ್ರಾಮದ ಒಟ್ಟು ಮತದಾನ 863 ಇದ್ದು, ಇದರಲ್ಲಿ 9 ಮತಗಳು ಅಂಚೆ ಮತದಾನದ ಮೂಲಕ ಚಲಾವಣೆಗೊಂಡಿವೆ.ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡು, ಮೊದಲ ಬಾರಿಗೆ ನನ್ನ ಹಕ್ಕು ಚಲಾಯಿಸಿದ್ದೇನೆ. ದೇಶದ ಅಭಿವೃದ್ಧಿ, ಸುರಕ್ಷತೆ ಮನದಲ್ಲಿಟ್ಟುಕೊಂಡು ಸಮರ್ಥ ಅಭ್ಯರ್ಥಿಗೆ ಮತ ನೀಡಿದ್ದೇವೆ ಎಂಬ ಆತ್ಮತೃಪ್ತಿ ನಮಗೆ ಹಾಗೂ ನಮ್ಮ ಕುಟುಂಬದವರಿಗೆ ಇದೆ ಎಂದರು.