ಮನೆಯ ಆಹಾರ ಪದಾರ್ಥದಲ್ಲಿದೆ ಆಯುರ್ವೇದದ ಶಕ್ತಿ: ಜಗದೀಶ ಯಾಜಿ

KannadaprabhaNewsNetwork |  
Published : Mar 01, 2025, 01:01 AM IST
ಪೊಟೋ೨೮ಎಸ್.ಆರ್.ಎಸ್೪ (ಇಸಳೂರಿನ ಸರ್ಕಾರಿ ಪೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಶಾಲೆ ಮಕ್ಕಳಿಗೆ ತರಕಾರಿ ಸಸ್ಯಗಳ ಬೀಜ ಮತ್ತು ಆಯುರ್ವೇದ ಸಸಿಗಳ ವಿತರಣೆ ಕಾರ್ಯಕ್ರಮವನ್ನು ಜಗದೀಶ ಯಾಜಿ ಉದ್ಘಾಟಿಸಿದರು.) | Kannada Prabha

ಸಾರಾಂಶ

ಇಂದಿನ ಕಾಲಮಾನದಲ್ಲಿ ಮಕ್ಕಳು ಸೇರಿದಂತೆ ಎಲ್ಲರ ಆಹಾರ ಪದ್ಧತಿ ಬದಲಾಗಿರುವ ಕಾರಣ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ.

ಶಿರಸಿ: ಭಾರತದ ಮೂಲ ವೈದ್ಯ ಪದ್ಧತಿಯು ಇಂದಿನ ಕಾಲಮಾನದಲ್ಲಿ ವಿಶ್ವಮಾನ್ಯತೆ ಪಡೆಯುತ್ತಿರುವುದು ನಮ್ಮ ಆಯುರ್ವೇದ ವೈದ್ಯಪದ್ಧತಿಯ ಹಿರಿಮೆಯಾಗಿದೆ ಎಂದು ವೈದ್ಯ ಡಾ.ಜಗದೀಶ ಯಾಜಿ ಹೇಳಿದರು.ಅವರು ಇಲ್ಲಿನ ಸಂಕಲ್ಪ ಇಂಟಿಗ್ರೇಟೆಡ್ ಡೆವೆಲಪ್‌ಮೆಂಟ್ ಟ್ರಸ್ಟ್ ಸಹಯೋಗದಲ್ಲಿ ತಾಲೂಕಿನ ಇಸಳೂರಿನ ಸರ್ಕಾರಿ ಪೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಂಗವಾಗಿ ಶಾಲೆ ಮಕ್ಕಳಿಗೆ ತರಕಾರಿ ಸಸ್ಯಗಳ ಬೀಜ ಮತ್ತು ಆಯುರ್ವೇದ ಸಸಿಗಳ ವಿತರಣೆ ಹಾಗೂ ಆರ್ಯವೇದದ ಮಹತ್ವ ಕುರಿತ ಉಪನ್ಯಾಸ ನೀಡಿದರು.

ಇಂದಿನ ಕಾಲಮಾನದಲ್ಲಿ ಮಕ್ಕಳು ಸೇರಿದಂತೆ ಎಲ್ಲರ ಆಹಾರ ಪದ್ಧತಿ ಬದಲಾಗಿರುವ ಕಾರಣ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ನಮ್ಮ ಮನೆಯಲ್ಲಿಯೇ ಇರುವ ಆಹಾರ ಪದಾರ್ಥಗಳನ್ನು ಹೆಚ್ಚು ಬಳಸುವುದರಿಂದ ಆಯುರ್ವೇದದ ಶಕ್ತಿ ಅರಿಯಬೇಕಿದೆ ಎಂದರು.

ನಮ್ಮ ಆರೋಗ್ಯ ಹದಗೆಡುವ ಮೊದಲು ಆಹಾರ ಪದ್ಧತಿಯಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು. ದೇಹ ಮತ್ತು ಮನಸ್ಸು ಶಾಂತವಾಗಿರುವಂತೆ ನೋಡಿಕೊಂಡು ದುಶ್ಚಟಗಳಿಂದ ದೂರವಿರಬೇಕು. ಸಕಾರಾತ್ಮಕ ಜೀವನ ನಡೆಸಿ ಎಂದು ಸಲಹೆ ನೀಡಿದರು.

ಲಕ್ಷ್ಮೀ ಶೆಟ್ಟರ್ ಮಾತನಾಡಿ, ಆಯುರ್ವೇದವು ನಮ್ಮ ಜೀವನದಲ್ಲಿ ವಹಿಸುವ ಪ್ರಾಮುಖ್ಯತೆಯನ್ನು ತಿಳಿಸಿದರು. ಸಂಕಲ್ಪ ಟ್ರಸ್ಟ್‌ನ ಅಧ್ಯಕ್ಷ ಕುಮಾರ ಪಟಗಾರ ಮಾತನಾಡಿ, ಸಂಸ್ಥೆಯ ಕಾರ್ಯವೈಖರಿ ಮತ್ತು ಆಯುಷ್ ಜ್ಞಾನ ಕಾರ್ಯಕ್ರಮದ ಬಗ್ಗೆ ಮಾಹಿತಿ ತಿಳಿಸಿದರು.

ರಾಜ್ಯ ನೌಕರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಕಿರಣ್ ಎಚ್. ನಾಯ್ಕ ಮಾತನಾಡಿ, ಮಕ್ಕಳಿಗೆ ಪಾಠದ ಜೊತೆ ಆಟ ಮತ್ತು ಆಯುರ್ವೇದದ ಗುಣಲಕ್ಷಣಗಳನ್ನು ತಿಳಿಸಿಕೊಟ್ಟರು.

ಶಾಲೆಯ ಮುಖ್ಯ ಶಿಕ್ಷಕಿ ಸುಮಂಗಲ ಜೋಷಿ, ಸಂಕಲ್ಪ ಟ್ರಸ್ಟ್‌ನ ನಿರ್ದೇಶಕ ಅಕ್ಷಯ, ನಮೃತಾ, ಶಾಲಾ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು. ದಮನಬೈಲ್ ಕ್ಲಸ್ಟರ್ ಎಲ್ಲ ಶಾಲೆಯ ಮುಖ್ಯಾಧ್ಯಾಪಕರು ಉಪಸ್ಥಿತರಿದ್ದರು. ಶಿಕ್ಷರ ದಿವಾಕರ ಮರಾಠಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಮಕ್ಕಳಿಗೆ ಔಷಧ ಸಸಿಗಳನ್ನು ಮತ್ತು ತರಕಾರಿ ಬೀಜಗಳನ್ನು ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''