ಬಡವರ ನಿವೇಶನ ಸಮಸ್ಯೆ ಬಗೆಹರಿಯಲಿದೆ

KannadaprabhaNewsNetwork |  
Published : Feb 23, 2025, 12:34 AM IST
ಚಿತ್ರ 2 | Kannada Prabha

ಸಾರಾಂಶ

ಇ-ಖಾತಾ ಅಭಿಯಾನದಿಂದ ಸಾವಿರಾರು ಬಡವರ ನಿವೇಶನಗಳ ಸಮಸ್ಯೆ ಬಗೆಹರಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಹಿರಿಯೂರು: ಇ-ಖಾತಾ ಅಭಿಯಾನದಿಂದ ಸಾವಿರಾರು ಬಡವರ ನಿವೇಶನಗಳ ಸಮಸ್ಯೆ ಬಗೆಹರಿಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದಲ್ಲಿ ಶನಿವಾರ ಇ-ಖಾತಾ ಅಭಿಯಾನ ಮತ್ತು ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರದ ಈ ಯೋಜನೆ ತಾಲೂಕು ಸೇರಿದಂತೆ ಜಿಲ್ಲೆಯ ಸುಮಾರು 20 ಸಾವಿರಕ್ಕೂ ಹೆಚ್ಚು ಜನರಿಗೆ ಉಪಯೋಗವಾಗಲಿದ್ದು ನಿಗದಿತ ಸಮಯದೊಳಗೆ ಈ ಯೋಜನೆಯ ಲಾಭವನ್ನು ಎಲ್ಲರೂ ಪಡೆಯಬೇಕು ಎಂದರು.

ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, ಇ -ಖಾತಾ, ಬಿ- ಖಾತಾ ಅಭಿಯಾನ ಆರಂಭಗೊಂಡಿದೆ. ಪ್ಲಾನಿಂಗ್ ಇಲ್ಲದ ಸ್ವತ್ತುಗಳನ್ನು ಇಷ್ಟು ದಿನ ಇ ಸ್ವತ್ತು ಮಾಡುತ್ತಿರಲಿಲ್ಲ. ಅಂತಹ ಸುಮಾರು 3-4 ಸಾವಿರ ಖಾತೆ ನಮ್ಮಲ್ಲಿವೆ. ಇದೀಗ ಅವುಗಳಿಗೆ ಬಿ ಖಾತಾ ಮಾಡಲಾಗುತ್ತದೆ. ಮೂರು ತಿಂಗಳು ಗಡುವು ಇದ್ದು ಅಷ್ಟರೊಳಗೆ ಅಧಿಕೃತ ದಾಖಲೆ ನೀಡಿ ಈ ಅಭಿಯಾನದ ಸೌಲಭ್ಯ ಪಡೆಯಿರಿ ಎಂದರು.

ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ , ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಸದಸ್ಯರಾದ ಜಿ.ಎಸ್.ತಿಪ್ಪೇಸ್ವಾಮಿ, ಎಸ್.ಶಿವರಂಜನಿ, ಚಿತ್ರಜಿತ್ ಯಾದವ್, ಪೌರಾಯುಕ್ತ ಎ ವಾಸೀಂ ಸೇರಿದಂತೆ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ