ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಆದರೆ ಈ ಬಾರಿ ಜಿಲ್ಲೆಯಲ್ಲಿ 40 ಡಿಗ್ರಿ ಸಲ್ಸಿಯಸ್ ತಾಪಮಾನ ದಾಖಲೆಯಾಗಿದ್ದು. ಈ ರಣ ಬಿಸಿಲಿನ ಪರಿಣಾಮ ಬೆಳೆದ ಬೆಳೆಗಳೆಲ್ಲವೂ ನಾಶವಾಗುವಂತಾಗಿತ್ತು.
ಬಿಸಿಲಿಗೆ ಬಾಡಿದ ತರಕಾರಿ ಬೆಳೆಜಿಲ್ಲೆಯರೈತರು ಹೂವು ಹಣ್ಣು ತರಕಾರಿಗಳನ್ನ ಬೆಳೆಯೋದರಲ್ಲಿ ಖ್ಯಾತಿಯಾಗಿದ್ದಾರೆ. ಆದರೆ ಈ ಬಾರಿಯ ರಣಬಿಸಿಲಿನ ಪರಿಣಾಮ ಜಿಲ್ಲೆಯಲ್ಲೂ ಸಹ ದಾಖಲೆಯ ಉಷ್ಣಾಂಶ ತಾಪಮಾನ ಏರಿಕೆಯಿಂದಾಗಿ ಬೆಳೆಗಳೆಲ್ಲವೂ ಒಣಗುವಂತಾಗಿತ್ತು.
ಬಿತ್ತನೆಗೆ ರೈತರ ಸಿದ್ಧತೆ
ಕಳೆದ ಬಾರಿ ಮಳೆಯಾಶ್ರಿತ ಜಮೀನುಗಳು ಬಿತ್ತನೆಯಾದರೂ ಬೆಳೆ ಇಲ್ಲದೇ ಸೊರಗಿದ್ದವು. ಇದರಿಂದ ಚಿಕ್ಕಬಳ್ಳಾಪುರ ತಾಲ್ಲೂಕು ಬರಪೀಡಿತ ತಾಲ್ಲೂಕು ಆಗಿತ್ತು. ಆದರೆ ಈಗ ವಾರದಿಂದ ಬಿದ್ದ ಮಳೆಯಿಂದಾಗಿ ಮತ್ತೆ ಚಿಕ್ಕಬಳ್ಳಾಫುರ ತಾಲೂಕು ಫಲಪುಷ್ಪ ಗಿರಿಧಾಮಗಳ ನಾಡಾಗಿ ಕಂಗೊಳಿಸಲು ಶುರುವಾಗಿದೆ. ಸಹಜವಾಗಿ ಜಿಲ್ಲೆಯ ರೈತರು, ಮಳೆಯಾಶ್ರಿತ ಪ್ರದೇಶಗಳಲ್ಲಿ ರಾಗಿ, ಜೋಳ, ನೆಲಗಡಲೆ, ಅವರೆ,ಹಲಸಂದೆ, ಸಾಸುವೆ, ಹುಚ್ಚೆಳ್ಳು ಸೇರಿದಂತೆ ನಾನಾ ರೀತಿಯ ಸಾಂಪ್ರದಾಯಕ ಬೆಳೆಗಳನ್ನು ಬೆಳೆಯುತ್ತಾರೆ.ಈ ಭಾರಿ ಜಿಲ್ಲೆಯ ರೈತರು ಉತ್ತಮ ಮಳೆಯಾಗಲಿ ಎಂದು ಸಾಕಷ್ಟು ದೇವರುಗಳ ಮೊರೆ ಸಹಾ ಹೋಗಿದ್ದರು. ಆದರೆ ಮುಂಗಾರು ಪೂರ್ವ ಮಳೆಯು ರೈತರ ಮೊಗದಲ್ಲಿ ಹರ್ಷ ತಂದಿದ್ದು, ರೈತರು ತಮ್ಮ ಜಮೀನುಗಳನ್ನು ಉಳುಮೆ ಮಾಡಿ,ಹದಗೊಳಿಸಿ ಬಿತ್ತನೆಗೆ ಸಿದ್ದಗೊಳಿಸಿಕೊಳ್ಳುತ್ತಿದ್ದಾರೆ.