ದಾಬಸ್ಪೇಟೆ: ಸಮಾಜದಲ್ಲಿ ಸೇವಾ ವೃತ್ತಿಗಳು ಎಂದಿಗೂ ಶಾಶ್ವತ, ಆರೋಗ್ಯ ಸೇವೆಯ ದಾದಿಯರು (ನರ್ಸ್ಗಳ) ಶುಶ್ರೂಷೆ, ರೋಗಿಯ ಪಾಲಿನ ಅಮೃತ ಸಂಜೀವಿನಿ ಎಂದು ಸೌಂದರ್ಯ-ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ರಮೇಶ್ ಸೌಂದರ್ಯ ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಭರತ್ ಸೌಂದರ್ಯ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನರ್ಸಿಂಗ್ ಶಿಕ್ಷಣ ಕೌಶಲ್ಯಾಧಾರಿತವಾಗಿದೆ. ನಮ್ಮ ಸಂಸ್ಥೆಯಲ್ಲಿ ನೈತಿಕತೆ ತಳಹದಿ ಮೇಲೆ ನರ್ಸಿಂಗ್ ಶಿಕ್ಷಣ ನೀಡುತ್ತಿದ್ದೇವೆ, ಕೇರಳದ ಕೊಟ್ಟಾಯಂನ ಸಾಧಕರಾದ ಅಭಿ ಮತ್ತು ತಂಡ, ತೆಂಗಿನಕಾಯಿ ಹೊಡೆಯುವುದು, ಎಳನೀರು ಛಿದ್ರಗೊಳಿಸುವಿಕೆ, ಇತರ ಕೌಶಲ್ಯಗಳು ವಿದ್ಯಾರ್ಥಿಗಳಿಗೆ ಹೆಚ್ಚು ಪರಿಣಾಮಕಾರಿ ಎಂದರು.
ಈ ವೇಳೆ ಮುಖ್ಯ ನರ್ಸಿಂಗ್ ಧಿಕಾರಿ ಕ್ರಿಸ್ಟಿನೋ, ಮಣಿಪಾಲ್ ಆಸ್ಪತ್ರೆಯ ಆರೋಗ್ಯ ಶಿಕ್ಷಣ ಮುಖ್ಯಸ್ಥರಾದ ಜಿ.ಜೆ.ರಾಜನ್, ನರ್ಸಿಂಗ್ ಕಾಲೇಜಿನ ಸಿಇಒ ಜಿತೀನ್ ಜೋಸ್, ಪ್ರಾಂಶುಪಾಲ ಹೇಮರಾಜು, ರೀನಾ ಜೋಸೆಫ್, ನರ್ಸಿಂಗ್ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪೋಷಕರು ಹಾಜರಿದ್ದರು.ಪೋಟೋ 5 :ಟಿ.ಬೇಗೂರು-ತ್ಯಾಮಗೊಂಡ್ಲು ರಸ್ತೆಯಲ್ಲಿರುವ ಅಂಬಿಕಾ ನರ್ಸಿಂಗ್ ಕಾಲೇಜಿನ 26ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕೇರಳದ ಕರಾಟೆಯಲ್ಲಿ ಗಿನ್ನೀಸ್ ದಾಖಲೆ ಮಾಡಿದ ಅಭಿ ಅವರನ್ನು ಸಂಸ್ಥೆಯ ಸಂಸ್ಥಾಪಕ ರಮೇಶ್ ಸೌಂದರ್ಯ, ಭರತ್ ಸೌಂದರ್ಯ ಅಭಿನಂದಿಸಿದರು.