ಶಶಿಕಾಂತ ಮೆಂಡೆಗಾರ
ಆರು ತಿಂಗಳ ಹಿಂದೆ 10 ವರ್ಷದ ಬಾಲಕಿ ಹಾವು ಕಚ್ಚಿ ಸತ್ತಿದ್ದಾಳೆ ಎಂದು ತಿಳಿದಿದ್ದ ಕುಟುಂಬಕ್ಕೆ, ಬಾಲಕಿಗೆ ಕರೆಂಟ್ ಶಾಕ್ ಕೊಟ್ಟು ಹತ್ಯೆ ಮಾಡಿರುವ ಆಘಾತಕಾರಿ ನೈಜ ಸಂಗತಿ ಈಗ ಬಹಿರಂಗಗೊಂಡಿದೆ. ಬಾಲಕಿಯನ್ನು ಹತ್ಯೆ ಮಾಡಿದ ಆರೋಪಿಗಳೇ ಆಕೆಯ ತಾಯಿಗೆ ವಿಷವುಣಿಸಿ ಹತ್ಯೆ ಮಾಡಲು ಯತ್ನಿಸಿದಾಗ, ಅವರೇ ಈ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಬಾಲಕಿ ತಾಯಿ ನೀಡಿದ ದೂರಿನ ಆಧಾರದ ಮೇಲಿಂದ ಅಂತ್ಯಕ್ರಿಯೆ ನಡೆಸಿದ್ದ ಬಾಲಕಿಯ ಶವವನ್ನು ಹೊರತೆಗೆದು ಈಗ ಶವ ಪರೀಕ್ಷೆ ನಡೆಸಲು ಪೊಲೀಸರು ಈಗ ಮುಂದಾಗಿದ್ದಾರೆ.
ಈ ಘಟನೆ ನಡೆದಿರುವುದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಡೋಲ ಗ್ರಾಮದಲ್ಲಿ. 2024 ಮೇ 12ರ ರಾತ್ರಿ ಸಫ್ರೀನಾ ಸಲೀಂ ಒಂಟಿ (10) ಎಂಬ ಬಾಲಕಿ ಅಸುನೀಗಿದ್ದಳು. ಬಾಲಕಿಯ ತಾಯಿ ಶಬಾನಾಳಿಗೆ ಆರೋಪಿಗಳು 2024 ಜು.5ರಂದು ವಿಷವುಣಿಸಿ ಹತ್ಯೆ ಮಾಡಲು ಯತ್ನಿಸಿದ್ದಾರೆ. ಆಗ ಆರೋಪಿಗಳು ಶಬಾನಾ ವಿಷ ಸೇವಿಸಿದ್ದರಿಂದ ಸಾಯುತ್ತಾಳೆ ಎಂದುಕೊಂಡು ಸಫ್ರೀನಾಗೆ (ಮೃತ ಬಾಲಕಿ) ನಾವೇ ಕರೆಂಟ್ ಶಾಕ್ ಕೊಟ್ಟು ಸಾಯಿಸಿದ್ದೇವೆ ಎಂಬ ಸತ್ಯವನ್ನು ಹೇಳಿದ್ದಾರೆ.ಗಂಡನಿಗೆ ವಿಷಯ ತಿಳಿಸಿದ್ದ ಶಬಾನಾ:
ಈಗ, ಮಗಳನ್ನು ಕೊಲೆ ಮಾಡಿರುವ ಬಗ್ಗೆ ಆರೋಪಿಗಳೇ ಸತ್ಯಾಂಶ ಹೇಳಿದ್ದರಿಂದ ಶಬಾನಾ ನೀಡಿರುವ ದೂರಿನ ಆಧಾರದ ಮೇಲೆ ದೂರು ದಾಖಲಿಸಿಕೊಂಡಿರುವ ಚಡಚಣ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸಫ್ರೀನಾಳನ್ನು ಹೂತಿದ್ದ ಖಬರಸ್ತಾನನಿಂದ ನ.9ರಂದು ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ ಹಾಗೂ ಇಂಡಿ ಎಸಿ ಅಬೀದ್ ಗದ್ಯಾಳ ಸಮ್ಮುಖದಲ್ಲಿ ಬಾಲಕಿಯ ಶವ ಹೊರತೆಗೆದು ಶವಪರೀಕ್ಷೆ ನಡೆಸಿದ್ದಾರೆ. ಈಗ ಅದರ ವರದಿ ಬರಬೇಕಿದೆ.
ಏನು ಘಟನೆ ನಡೆದಿತ್ತು?:
ಬಳಿಕ, ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಶೆಡ್ನ ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದರು. ಕೆಲ ನಿಮಿಷಗಳ ಬಳಿಕ ಶಬಾನಾ ಅವರ ಅತ್ತೆ ಬಂದು ಶೆಡ್ ಬಾಗಿಲು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
-----------------
ಹೊಲದ ಬದುವಿನ ವಿಚಾರಕ್ಕಾಗಿ ಶುರುವಾದ ಜಗಳದ ಹಿನ್ನೆಲೆ ನಮ್ಮ ದೊಡ್ಡಪ್ಪನ ಪತ್ನಿ ರಜಾಕಮಾ ಹಾಗೂ ಆಕೆಯ ಮಗ ಮಹಮ್ಮದ ಸೇರಿ ನನ್ನ ಮಗಳ ಕೊಲೆ ಮಾಡಿದ್ದಾರೆ. ನಂತರ ಒಂದೂವರೆ ತಿಂಗಳ ಬಳಿಕ ತೋಟದ ಮನೆಗೆ ನುಗ್ಗಿ ಪತ್ನಿ ಶಬಾನಾಳಿಗೆ ಬಲವಂತವಾಗಿ ವಿಷ ಹಾಕಿದ್ದಾರೆ. ಇವರಿಂದ ನಮ್ಮ ಇಡೀ ಕುಟುಂಬಕ್ಕೆ ಜೀವಭಯವಿದ್ದು, ಸೂಕ್ತ ರಕ್ಷಣೆ ಬೇಕಾಗಿದೆ. ನಮ್ಮ ಮಗಳನ್ನು ಕೊಂದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಇದರ ಹಿಂದೆ ಯಾರ ಕೈವಾಡವಿದಿಯೋ ಅದು ಹೊರಬರಬೇಕು, ಅವರಿಗೂ ತಕ್ಕ ಶಿಕ್ಷೆ ಆಗಬೇಕು.
ಆರು ತಿಂಗಳ ಹಿಂದೆ ಬಾಲಕಿಯೊಬ್ಬಳು ಅನುಮಾನಾಸ್ಪದ ಮೃತಪಟ್ಟಿರುವ ಹಾಗೂ ಆಕೆಯ ತಾಯಿಗೆ ಬಲವಂತವಾಗಿ ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದ ಕುರಿತು ಚಡಚಣ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನಾಧಾರದ ಮೇಲೆ ಬಾಲಕಿಯ ಮೃತ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬರಬೇಕಿದೆ. ಎರಡೂ ಘಟನೆಗಳ ಕುರಿತು ತನಿಖೆ ನಡೆಸುತ್ತಿದ್ದು, ಆರೋಪಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
- ಪ್ರಸನ್ನ ದೇಸಾಯಿ, ವಿಜಯಪುರ ಎಸ್ಪಿ