ಕನ್ನಡಪ್ರಭ ವಾರ್ತೆ ಗೋಕಾಕ ಬ್ಯಾನರ್ಗಳ ಭರಾಟೆಯಿಂದ ಚಿತ್ರಕಲೆ ನಶಿಸುತ್ತಿದೆ. ಚಿತ್ರಕಲೆಯೊಂದಿಗೆ ಚಿತ್ರಕಲಾವಿದರು ಉಳಿಯವಂತಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಚಿತ್ರಕಲಾ ಶಿಕ್ಷಕರನ್ನು ನೇಮಕ ಮಾಡಿಕೊಂಡು ಚಿತ್ರಕಲೆಯನ್ನು ಉಳಸಿ ಬೆಳೆಸುವಂತೆ ಅಂಕಲಗಿ-ಕುಂದರಗಿ ಅಡವಿಸಿದ್ಧೇಶ್ವರ ಮಠದ ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ಬ್ಯಾನರ್ಗಳ ಭರಾಟೆಯಿಂದ ಚಿತ್ರಕಲೆ ನಶಿಸುತ್ತಿದೆ. ಚಿತ್ರಕಲೆಯೊಂದಿಗೆ ಚಿತ್ರಕಲಾವಿದರು ಉಳಿಯವಂತಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಚಿತ್ರಕಲಾ ಶಿಕ್ಷಕರನ್ನು ನೇಮಕ ಮಾಡಿಕೊಂಡು ಚಿತ್ರಕಲೆಯನ್ನು ಉಳಸಿ ಬೆಳೆಸುವಂತೆ ಅಂಕಲಗಿ-ಕುಂದರಗಿ ಅಡವಿಸಿದ್ಧೇಶ್ವರ ಮಠದ ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ನಿಂದ ಹಮ್ಮಿಕೊಂಡ ವನ್ಯಜೀವಿ ಹಾಗೂ ಅರಣ್ಯ ವಿಷಯದಡಿ ತಾಲೂಕು ಮಟ್ಟದ ಚಿತ್ರಕಲಾ ಸ್ಫರ್ಧೆಯ ಸಾನಿಧ್ಯ ವಹಿಸಿ ಮಾತನಾಡಿದರು. ಅನೇಕ ಚಿತ್ರಕಲಾವಿದರು ಕಲೆಯ ಮೂಲಕ ವಿಶ್ವದಲ್ಲಿ ಹೆಸರುವಾಸಿಯಾಗಿದ್ದಾರೆ. ನಮ್ಮ ನಗರಗಳು, ಪಟ್ಟಣಗಳು ಸುಂದರವಾಗಿ ಕಾಣಲು ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸುವ ಕಾರ್ಯವಾಗಬೇಕು. ಪರಿಸರ ನಾಶಕ್ಕೆ ಕಾರಣವಾಗುವ ಬ್ಯಾನರ್ಗಳನ್ನು ನಾವು ತ್ಯಜಿಸಿ ಪರಿಸರ ರಕ್ಷಣೆಗೆ ಮುಂದಾಗಬೇಕು. ಈ ಸ್ಫರ್ಧೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಸ್ಥಾನಕ್ಕಾಗಿ ಆಸೆ ಪಡದೆ ತಮ್ಮ ಕಲೆಗೆ ಹೆಚ್ಚಿನ ಒತ್ತು ನೀಡಿ ಬದುಕು ರೂಪಿಸಿಕೊಳ್ಳುವಂತೆ ಶುಭ ಹಾರೈಸಿದರು.ರಾಜಕೀಯ ಧುರೀಣ ಅಶೋಕ ಪೂಜಾರಿ ಮಾತನಾಡಿ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಚಿತ್ರಕಲೆಯನ್ನು ಮುಂದಿನ ಪೀಳಿಗೆ ಮರೆಯದಂತೆ ಪೋಷಿಸುವ ಕಾರ್ಯ ಶ್ಲಾಘನೀಯ. ಕಲೆಗಳಲ್ಲಿ ಅನೇಕ ವಿಧಗಳಿವೆ ಆದರೆ ನಾವು ನೋಡಿ ಅದನ್ನು ಚಿತ್ರ ಬಿಡಿಸುವುದೆ ಚಿತ್ರಕಲೆ. ಇಂತಹ ಚಿತ್ರಕಲೆಯನ್ನು ಮಕ್ಕಳಿಂದ ಬಿಡಿಸುವ ಮೂಲಕ ರಾಜ್ಯ ಮಟ್ಟದಲ್ಲಿ ಅವರನ್ನು ಗುರುತಿಸುವ ಕಾರ್ಯ ಮಾಡುತ್ತಿದ್ದು, ಮಕ್ಕಳು ಇದನ್ನು ಬಳಸಿಕೊಳ್ಳುವಂತೆ ತಿಳಿಸಿದರು.ವಲಯ ಅರಣ್ಯಾಧಿಕಾರಿ ಆನಂದ ಹೆಗಡೆ ಮಾತನಾಡಿ, ಪರಿಸರ ಆಮ್ಲಜನಕ, ನೀರು, ಆಹಾರ ಮತ್ತು ಆಶ್ರಯದಂತಹ ಮೂಲ ಅಗತ್ಯಗಳನ್ನು ಒದಗಿಸುತ್ತದೆ. ಪರಿಸರದ ನಾಶ, ಮಾಲಿನ್ಯ, ಜಾಗತಿಕ ತಾಪಮಾನ ಏರಿಕೆ ನಮ್ಮ ಅಸ್ತಿತ್ವಕ್ಕೆ ನೇರ ಬೆದರಿಕೆಯಾಗಿದೆ. ಹೀಗಾಗಿ ಪ್ರಕೃತಿಯ ಸಮತೋಲನ ಕಾಪಾಡುವುದು ಮಾನವನ ಬದುಕುಳಿಯುವಿಕೆಗೆ ಅತ್ಯಗತ್ಯ. ಅದರಂತೆ ನಾವು ನಿತ್ಯ ಬಳಸುವ ಪ್ಲಾಸ್ಟೀಕನಿಂದ ಪ್ರಾಣಿಗಳಿಗಷ್ಟೆ ಅಲ್ಲ, ಮಾನವನ ಬದುಕಿಗು ಮಾರಕ. ಬಹುತೇಕ ವನ್ಯಜೀವಿಗಳು ಅಳಿವಿನಂಚಿನಲ್ಲಿದ್ದು, ನಾವು ಈಗಿನಿಂದಲೇ ಅಳಿದುಳಿದ ವನ್ಯಜೀವಿಗಳ ಸಂರಕ್ಷಣೆಗೆ ಪೂರಕ ವಾತಾವರಣ ನಿರ್ಮಿಸಬೇಕಿದೆ. ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.ಚಿತ್ರಕಲೆ ಸುಮಾರು 5 ಸಾವಿರ ವರ್ಷಗಳ ಹಿಂದೆ ಬಂದ ಕಲೆಯನ್ನು ಈಗಲೂ ಕಲ್ಲಿನ ಕೆತ್ತನೆಯಲ್ಲಿ ಈಗಲೂ ನೋಡಬಹುದು. ಚಿತ್ರಕಲೆಯಿಂದ ಮಾತ್ರ ಶಿಲ್ಪಿಗಳ ಕೆತ್ತೆನೆ ಮಾಡಲು ಸಾಧ್ಯ. ಅಂತಹ ಚಿತ್ರಕಲೆಯನ್ನು ಪ್ರೋತ್ಸಾಹಿಸುತ್ತಿರುವ ಕನ್ನಡಪ್ರಭ ಪತ್ರಿಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ವೇದಿಕೆಯ ಮೇಲೆ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ, ಸಿದ್ಧಾರೂಢ ದರ್ಶನ ಪೀಠ ಹುಬ್ಬಳ್ಳಿಯ ಧರ್ಮದರ್ಶಿ ಶಾಮಾನಂದ ಪೂಜೇರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಗುರು ಪೂಜೇರಿ, ಗೋಕಾಕ ಡೇವಲಪರ್ಸ್ನ ಜಾವೇದ ಗೋಕಾಕ. ಪಿಎಮ್ಶ್ರೀ ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಎಂ.ಬಿ.ಬಳಗಾರ, ಶಿಕ್ಷಣ ಸಂಯೋಜಕ ಎಸ್.ಬಿ.ಕಲ್ಲಟ್ಟಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಲ್.ಕೆ.ತೋರಣಗಟ್ಟಿ, ಕನ್ನಡಪ್ರಭ ವರದಿಗಾರ ಭೀಮಶಿ ಭರಮಣ್ಣವರ ಇದ್ದರು. ಬಿ.ಎಸ್.ಜೋಲಾಪೂರೆ ಸ್ವಾಗತಿಸಿ, ವಂದಿಸಿದರು.ಬಾಕ್ಸ್ಸ್ಪರ್ಧೆಯಲ್ಲಿ ವಿಜೇತರ್ಯಾರು8ನೇ ತರಗತಿ: ಎನ್ಎಸ್ಎಫ್ ಶಾಲೆಯ ಮೇಘಾ ಮುತ್ತೆಪ್ಪಾ ಧರ್ಮಟ್ಟಿ ಪ್ರಥಮ. ಎನ್ಎಸ್ಎಫ್ ಶಾಲೆಯ ಸರಿತಾ ಗಜಾನನ ಹರಮಕರ ದ್ವಿತೀಯ. ಎಲ್ಇಟಿ ಶಾಲೆಯ ಪಲ್ಲವಿ ಬಸವರಾಜ ಪೂಜೇರಿ ತೃತೀಯ.9ನೇ ತರಗತಿ: ಶಪರ್ಡ್ ಮಿಷನ್ ಶಾಲೆಯ ಸ್ಫೂರ್ತಿ ಸಂತೋಷ ಬೆನವಾಡ ಪ್ರಥಮ. ಮೇಲ್ಮಟ್ಟಿಯ ಎಸ್ಎಸ್ಎಮ್ಎಮ್ ಶಾಲೆಯ ರಾಕೇಶ ಭೀಮಪ್ಪ ಕಾಳಗಿ, ದ್ವಿತೀಯ. ಎಲ್ಇಟಿ ಶಾಲೆಯ ಅಂಕಿತಾ ಹರೀಶ ಕದಮ ತೃತೀಯ.
10ನೇ ತರಗತಿ: ನವ ಜೀವನ ಆಂಗ್ಲ ಮಾಧ್ಯಮ ಶಾಲೆಯ ಸುಪ್ರೀತ ಪ್ರಶಾಂತ ಪಿಂಪಲೆ ಪ್ರಥಮ. ಲಿಟಲ್ ಫ್ಲಾವರ್ ಶಾಲೆಯ ಪ್ರಿಯಾಂಕ ಸಚೀನ ಮಾವರಕರ ದ್ವಿತೀಯ. ಖನಗಾಂವ ಸರಕಾರಿ ಆದರ್ಶ ವಿದ್ಯಾಲಯದ ಲತಾ ಸತ್ತೆಪ್ಪಾ ಕುರಬೇಟ ತೃತೀಯ ಸ್ಥಾನ ಪಡೆದರು. ಬಹುಮಾನವನ್ನು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ವಿತರಿಸಿದರು. ನಿರ್ಣಾಯಕರಾಗಿ ಚಿತ್ರಕಲಾ ಶಿಕ್ಷಕರಾದ ಎಸ್.ಆರ್.ಗಾಯಕವಾಡ, ಎಮ್.ಎಸ್.ಹೆಬ್ಬಾಳ, ಎಸ್.ಬಿ.ಕಲ್ಲಟ್ಟಿ ಕಾರ್ಯನಿರ್ವಹಿಸಿದರು. ಸ್ಫರ್ಧೆಯಲ್ಲಿ ತಾಲೂಕಿನ ವಿವಿಧ ಶಾಲೆಗಳ ಸುಮಾರು 70ಕ್ಕೂ ಹೆಚ್ಚು ವಿಷ್ಯಾರ್ಥಿಗಳು ಪಾಲ್ಗೊಂಡಿದ್ದರು.