ನರಗುಂದದಲ್ಲಿ ರೈತ ಸಮಾವೇಶಕ್ಕೆ ಸಜ್ಜಾಗಿದೆ ವೇದಿಕೆ

KannadaprabhaNewsNetwork |  
Published : Oct 04, 2024, 01:02 AM IST
(3ಎನ್.ಆರ್.ಡಿ1 ರೈತ ಸಮಾವೇಶ ನಡೆಯುವ ವೇದಿಕೆಯನ್ನು ರೈತ ಮುಖಂಡ ವಿರೇಶ ಸೊಬರದಮಠ ವಿಕ್ಷಣಿ ಮಾಡುತ್ತಿದ್ದಾರೆ.)  | Kannada Prabha

ಸಾರಾಂಶ

ಅ. 4ರಂದು ನರಗುಂದ ಪಟ್ಟಣದ ಕೋರ್ಟ್‌ ವೃತ್ತದ ಬಳಿ, ಮಹದಾಯಿ ಹೋರಾಟ ವೇದಿಕೆಯ ಆವರಣದಲ್ಲಿ ರೈತ ಸಮಾವೇಶ ನಡೆಯಲಿದೆ. ನಾಡಿನ ಹಲವಾರು ಜಿಲ್ಲೆಗಳಿಂದ ವಿವಿಧ ರೈತ ಸಂಘದ ನಾಯಕರು ಆಗಮಿಸಲಿದ್ದಾರೆ.

ನರಗುಂದ: ರೈತ ಹೋರಾಟಕ್ಕೆ ಹೆಸರಾದ ಬಂಡಾಯದ ನೆಲದಲ್ಲಿ ಶುಕ್ರವಾರ ನಡೆಯುವ ರೈತ ಸಮಾವೇಶಕ್ಕೆ ವೇದಿಕೆ ಸಜ್ಜಾಗಿದೆ.

ಅ. 4ರಂದು ಪಟ್ಟಣದ ಕೋರ್ಟ್‌ ವೃತ್ತದ ಬಳಿ, ಮಹದಾಯಿ ಹೋರಾಟ ವೇದಿಕೆಯ ಆವರಣದಲ್ಲಿ ರೈತ ಸಮಾವೇಶ ನಡೆಯಲಿದೆ. ನಾಡಿನ ಹಲವಾರು ಜಿಲ್ಲೆಗಳಿಂದ ವಿವಿಧ ರೈತ ಸಂಘದ ನಾಯಕರು ಆಗಮಿಸಲಿದ್ದಾರೆ.

ಈ ಸಮಾವೇಶದಲ್ಲಿ ರೈತ ಸಮುದಾಯದ ಹಲವಾರು ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ. ಬೆಳೆಗಳಿಗೆ ಶಾಶ್ವತ ಬೆಂಬಲ ಬೆಲೆ, ರೈತರ ಆತ್ಮಹತ್ಯೆ ತಡೆಗೆ ಯೋಜನೆ ರೂಪಿಸುವುದು, ಮಹದಾಯಿ, ಕೃಷ್ಣಾ, ಭದ್ರಾ, ಕಾವೇರಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳ ಜಾರಿ, ಜಲಾಶಯ ಹೂಳು ತೆಗೆಯುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವ ಕುರಿತು ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು.

ರೈತ ಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರು ಗುರುವಾರ ರೈತ ಸಮಾವೇಶದ ವೇದಿಕೆ ವೀಕ್ಷಣೆ ಮಾಡಿ, ಆನಂತರ ಮಾತನಾಡಿ, ರಾಜ್ಯ ಮತ್ತು ದೇಶದಲ್ಲಿ ರೈತ ಸಂಘಟನೆಗಳು ಒಗ್ಗೂಡಿಸುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮೂರು ತಿಂಗಳಿಂದ ಸಿದ್ಧತೆ ನಡೆಸಲಾಗಿದೆ. ರಾಷ್ಟ್ರಮಟ್ಟದ ರೈತ ಸಂಘಟನೆಗಳ ಸಂಪರ್ಕ ಮಾಡಿ, ಮುಖಂಡರನ್ನು ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಎಲ್ಲ ಸಂಘಟನೆಗಳ ಮುಖಂಡರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ವೀರಬಸಪ್ಪ ಹೂಗಾರ, ಮಲ್ಲೇಣ್ಣ ಅಲೇಕಾರ, ಎಸ್.ಬಿ. ಜೋಗಣ್ಣವರ, ಸುಭಾಸ ಗಿರಿಯಣ್ಣವರ, ಮಲ್ಲೇಶ ಅಬ್ಬಗೇರಿ, ಫಕೀರಪ್ಪ ಅಣ್ಣಗೇರಿ, ವಿಜಕುಮಾರ ಹೂಗಾರ, ಅರ್ಜುನ ಮಾನೆ, ಹನುಮಂತ ಸರನಾಯ್ಕರ, ವಾಸು ಚವ್ಹಾಣ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!